Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಉಪೇಂದ್ರ ಮದುವೆ ಬಗ್ಗೆ ಗುರುಕಿರಣ್ ಬೇಸರ ಮಾಡಿಕೊಂಡಿದ್ದರು
ಉಪೇಂದ್ರ ಮತ್ತು ಗುರುಕಿರಣ್ ಇಬ್ಬರು ಆಪ್ತ ಸ್ನೇಹಿತರು. 'ಎ' ಸಿನಿಮಾದಿಂದ ಶುರುವಾದ ಇಬ್ಬರ ಸ್ನೇಹ ಇಂದಿಗೂ ಮುಂದುವರೆದಿದೆ. ಸಿನಿಮಾ ಮಾತ್ರವಲ್ಲದೆ ಉಪೇಂದ್ರ ಮತ್ತು ಗುರುಕಿರಣ್ ಇಬ್ಬರು ವೈಯಕ್ತಿಕವಾಗಿಯೂ ತುಂಬ ಚೆನ್ನಾಗಿ ಇದ್ದಾರೆ. ಇಂತಹ ಸ್ನೇಹ ಇದ್ದರೂ ಕೂಡ ಉಪೇಂದ್ರ ತಮ್ಮ ಮದುವೆ ಬಗ್ಗೆ ಗುರುಕಿರಣ್ ಅವರಿಗೆ ಏನು ಹೇಳಿರಲಿಲ್ಲವಂತೆ. ಈ ವಿಷಯವನ್ನು ಈಗ ಸ್ವತಃ ಗುರುಕಿರಣ್ ಹೇಳಿಕೊಂಡಿದ್ದಾರೆ.
ಸ್ಟಾರ್ ಸುವರ್ಣ ಮತ್ತು ವಿಯು ಅಪ್ ನಲ್ಲಿ ಪ್ರಸಾರ ಆಗುತ್ತಿರುವ 'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮಕ್ಕೆ ಮೊದಲ ಅತಿಥಿಯಾಗಿ ಉಪೇಂದ್ರ ಮತ್ತು ಗುರುಕಿರಣ್ ಆಗಮಿಸಿದ್ದರು. ಈ ವೇಳೆ ಉಪೇಂದ್ರ ಮತ್ತು ಗುರುಕಿರಣ್ ಇಬ್ಬರು ಓಪನ್ ಆಗಿ ಮಾಡಿದ್ದರು. ಇಬ್ಬರ ಸ್ನೇಹದ ಬಗ್ಗೆ ತಿಳಿಯದ ಅನೇಕ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಕಾರ್ಯಕ್ರಮದ ಶುರುವಿನಲ್ಲಿ ಶಿವಣ್ಣನ ಪ್ರಶ್ನೆಗೆ ಉತ್ತರಿಸಿ ಗುರು ಉಪ್ಪಿ ಅವರ ಮದುವೆ ಬಗ್ಗೆ ಮಾತನಾಡಿದರು. ಮುಂದೆ ಓದಿ..
ಉಪೇಂದ್ರ ಸ್ವಲ್ಪ ಸೀಕ್ರೆಟಿವ್
ಕಾರ್ಯಕ್ರಮದಲ್ಲಿ ಶಿವಣ್ಣ ಗುರುಕಿರಣ್ ಅವರಿಗೆ ಒಂದು ಪ್ರಶ್ನೆ ಕೇಳಿದರು. 'ನಿಮಗೆ ಉಪೇಂದ್ರ ಅವರಲ್ಲಿ ಇರುವ ಯಾವ ಗುಣ ಇಷ್ಟ ಆಗುವುದಿಲ್ಲ?' ಎಂದು ಶಿವಣ್ಣ ಕೇಳಿದರು. ಆಗ ಗುರುಕಿರಣ್ ''ಉಪೇಂದ್ರ ಅವರು ಸ್ವಲ್ಪ ಸೀಕ್ರೆಟಿವ್ ಅವರು ಹೆಚ್ಚು ಏನು ಹೇಳುವುದಿಲ್ಲ.'' ಈ ಅಂಶ ಇಷ್ಟ ಆಗುವುದಿಲ್ಲ ಎಂದರು.
ಮದುವೆ ವಿಷಯ ಹೇಳಿರಲಿಲ್ಲ
''ಉಪ್ಪಿ ಅವರ ಮದುವೆ ಸಮಯದಲ್ಲಿಯೂ ನನಗೆ ಏನು ಹೇಳಿರಲಿಲ್ಲ. ಮದುವೆ ಆಗುವ ಹಿಂದಿನ ದಿನ ಜೊತೆಗೆ ಇದ್ವಿ ಆದರೂ ಮದುವೆ ಇರುವ ವಿಷಯ ಹೇಳಿರಲಿಲ್ಲ. ಅದು ಮನಸಿನಲ್ಲಿ ಯಾವಾಗಲೂ ಕೊರೆಯುತ್ತದೆ'' ಎಂದು ಗುರು ಹೇಳಿದ್ದಾರೆ.
ರಿಯಲ್ ಸ್ಟಾರ್ ಉಪೇಂದ್ರಗೆ ಮೂರು ಕೆಟ್ಟ ಅಭ್ಯಾಸ ಇದೆ
ನನಗೂ ಹೇಳಿರಲಿಲ್ಲ
ಗುರು ಉತ್ತರಕ್ಕೆ ಪ್ರತಿಕ್ರಿಯೆ ನೀಡಿದ ಶಿವಣ್ಣ ''ನನಗೆ ಉಪ್ಪಿ ಎಷ್ಟು ಹತ್ತಿರ. ಆದರೂ ಉಪ್ಪಿ ನನಗೆ ಕೂಡ ಮದುವೆ ವಿಷಯ ಹೇಳಿರಲ್ಲ.. ಎಂದು ನಕ್ಕರು. ಕೆಲವು ಸಂದರ್ಭದಲ್ಲಿ ಹಾಗೆ ಆಗುತ್ತದೆ'' ಎಂದು ಗುರುಕಿರಣ್ ಅವರನ್ನು ಶಿವಣ್ಣ ಸಮಾಧಾನ ಮಾಡಿದರು.
ನಾನು ಅವರ ಜೊತೆಗೆ ಇನ್ನೂ ಸಿನಿಮಾ ಮಾಡಬೇಕು
ಇದೇ ಕಾರ್ಯಕ್ರಮದಲ್ಲಿ ಗುರುಕಿರಣ್ ''ಉಪ್ಪಿ ರಾಜಕೀಯಕ್ಕೆ ಬರುವುದು ನನಗೆ ಇಷ್ಟ ಇರಲಿಲ್ಲ. ಯಾಕೆಂದರೆ ಕನ್ನಡ ಚಿತ್ರರಂಗ ಒಬ್ಬ ಒಳ್ಳೆಯ ನಿರ್ದೇಶಕನನ್ನು ಕಳೆದುಕೊಳ್ಳುತ್ತದೆಯಾ ಎನ್ನುವ ಬೇಸರ ಇದೆ. ಜೊತೆಗೆ ವೈಯಕ್ತಿಕವಾಗಿ ನಾನು ಕೂಡ ಅವರ ಜೊತೆಗೆ ಸಿನಿಮಾಗಳನ್ನು ಮಾಡಬೇಕು.'' ಎಂದು ಹೇಳಿಕೊಂಡಿದ್ದಾರೆ.