Don't Miss!
- News Karnataka Dam Water Level: ಏಪ್ರಿಲ್ 20ರಂದು ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ, ವಿವರ ಇಲ್ಲಿದೆ
- Automobiles ಪೆಟ್ರೋಲ್ಗೆ ಹೆಚ್ಚು ಹಣ ಖರ್ಚು ಮಾಡುತ್ತಿದ್ದೀರಾ?.. ಇಲ್ಲಿವೆ ಉತ್ತಮ ಎಲೆಕ್ಟ್ರಿಕ್ ಸ್ಕೂಟರ್ಗಳು, ಜಾಸ್ತಿ ಓಡ
- Finance Bengaluru Traffic Police: ಬೆಂಗಳೂರಿನ ಈ ರಸ್ತೆ ಸಂಚಾರ ಮಾರ್ಗ ಬದಲಾವಣೆ, ವಿವರ
- Technology Samsung: ಭಾರತದಲ್ಲಿ ಹೊಸ ವೇರಿಯಂಟ್ನಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ F15 5G! ಬೆಲೆ ಎಷ್ಟು?
- Sports RCB: 'ಗೋ ಗ್ರೀನ್' ಭಾಗವಾಗಿ 3 ಕೆರೆಗಳ ಅಭಿವೃದ್ಧಿಪಡಿಸಿದ ಆರ್ಸಿಬಿ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗುರುಕಿರಣ್ ಪ್ರಕಾರ ಹರಿಕೃಷ್ಣ ಕನ್ನಡದ ಬೆಸ್ಟ್ ಮ್ಯೂಸಿಕ್ ಡೈರೆಕ್ಟರ್
ಕನ್ನಡದಲ್ಲಿ ಸದ್ಯ ಹೊಸ ಹೊಸ ಸಂಗೀತ ನಿರ್ದೇಶಕರ ಆಗಮನ ಆಗುತ್ತಿದೆ. ಹಂಸಲೇಖ ನಂತರ ಗುರುಕಿರಣ್ ಕನ್ನಡದಲ್ಲಿ ಸಿಕ್ಕಾಪಟ್ಟೆ ಬಿಜಿ ಇದ್ದ ಮ್ಯೂಸಿಕ್ ಡೈರೆಕ್ಟರ್ ಆಗಿದ್ದರು. ಅವರ ಬಳಿಕ ಈಗ ಅರ್ಜುನ್ ಜನ್ಯ ಮತ್ತು ಹರಿಕೃಷ್ಣ ಬಹು ಬೇಡಿಕೆಯ ಸಂಗೀತ ನಿರ್ದೇಶಕರಾಗಿದ್ದಾರೆ. ಗುರುಕಿರಣ್ ಪ್ರಕಾರ ಹರಿಕೃಷ್ಣ ಸದ್ಯ ಕನ್ನಡದ ಬೆಸ್ಟ್ ಮ್ಯೂಸಿಕ್ ಡೈರೆಕ್ಟರ್ ಆಗಿದ್ದಾರೆ.
ಉಪೇಂದ್ರ ಜೊತೆಗೆ ಇತ್ತೀಚಿಗಷ್ಟೆ 'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮ ಬಂದಿದ್ದ ಗುರುಕಿರಣ್ ಒಂದು ಪ್ರಶ್ನೆಗೆ ಹರಿಕೃಷ್ಣ ಹೆಸರನ್ನು ತೆಗೆದುಕೊಂಡರು. ಶಿವಣ್ಣ ತಮ್ಮ ಪ್ರಶ್ನೆಯಲ್ಲಿ 'ಅರ್ಜುನ್ ಜನ್ಯ, ಹರಿಕೃಷ್ಣ, ಸಾಧು ಕೋಕಿಲ, ಕೆ.ಕಲ್ಯಾಣ್ ಈ ಸಂಗೀತ ನಿರ್ದೇಶಕರಿಗೆ ರಾಂಕ್ ಕೊಡಿ' ಎಂದರು. ಆಗ ಗುರುಕಿರಣ್ ಹರಿಕೃಷ್ಣ ಹೆಸರನ್ನು ಮೊದಲು ಹೇಳಿದರು.
ಎರಡನೇ ಹೆಸರನ್ನಾಗಿ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಹೆಸರನ್ನು ನಂತರ ಸಾಧು ಕೋಕಿಲ ಹಾಗೂ ಕೊನೆಯದಾಗಿ ಕೆ.ಕಲ್ಯಾಣ್ ಹೆಸರನ್ನು ಗುರುಕಿರಣ್ ಹೇಳಿದರು. ಅಂದಹಾಗೆ, ಈ ಹಿಂದೆ ಒಮ್ಮೆ ಫಿಲ್ಮಿಬೀಟ್ ಕನ್ನಡದ ಸಂದರ್ಶನದಲ್ಲಿ ಮಾತನಾಡುವಾಗ ಗುರು ಇಂದಿನ ಮ್ಯೂಸಿಕ್ ಡೈರೆಕ್ಟರ್ ಗಳಲ್ಲಿ ಚರಣ್ ರಾಜ್ ಮತ್ತು ವಾಸುಕಿ ವೈಭವ್ ಒಳ್ಳೆಯ ಪ್ರತಿಭೆ ಇರುವ ಮ್ಯೂಸಿಷಿಯನ್ಸ್ ಗಳು ಎಂದು ಹೊಗಳಿದ್ದರು.