Don't Miss!
- Automobiles ಅಡ್ವೆಂಚರ್ ಬೈಕ್ ಪ್ರಿಯರಿಗೆ ಸಿಹಿಸುದ್ದಿ: ಬಿಡುಗಡೆಗೆ ಸಜ್ಜಾದ ಸುಜುಕಿ V-Strom 800 DE ಬೈಕ್
- News ನಾಲ್ಕು ಗೋಡೆಗಳ ಮಧ್ಯೆ ಆಗಿರುವ ಚರ್ಚೆ ಬಹಿರಂಗವಾಗಿ ಹೇಳೋದಕ್ಕೆ ಆಗಲ್ಲ: ಎಂ.ಪಿ.ರೇಣುಕಾಚಾರ್ಯ ಹೀಗೆ ಹೇಳಿದ್ಯಾಕೆ?
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Lifestyle ವಿಭಿನ್ನ ಶೈಲಿಯಲ್ಲಿ ಮೊಟ್ಟೆ ಸಾಂಬಾರ್ ಮಾಡಿ..! ಇಲ್ಲಿದೆ ಸಿಂಪಲ್ ಅಡುಗೆ
- Sports IPL 2024: ಕೆಕೆಆರ್ ವಿರುದ್ಧದ ಪಂದ್ಯಕ್ಕೂ ಮುನ್ನ ಕ್ರಿಕೆಟ್ ಬಿಟ್ಟು ಆರ್ಸಿಬಿ ಆಟಗಾರರು ಮಾಡಿದ್ದೇನು?
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗುರುಕಿರಣ್ ಪ್ರಕಾರ ಹರಿಕೃಷ್ಣ ಕನ್ನಡದ ಬೆಸ್ಟ್ ಮ್ಯೂಸಿಕ್ ಡೈರೆಕ್ಟರ್
ಕನ್ನಡದಲ್ಲಿ ಸದ್ಯ ಹೊಸ ಹೊಸ ಸಂಗೀತ ನಿರ್ದೇಶಕರ ಆಗಮನ ಆಗುತ್ತಿದೆ. ಹಂಸಲೇಖ ನಂತರ ಗುರುಕಿರಣ್ ಕನ್ನಡದಲ್ಲಿ ಸಿಕ್ಕಾಪಟ್ಟೆ ಬಿಜಿ ಇದ್ದ ಮ್ಯೂಸಿಕ್ ಡೈರೆಕ್ಟರ್ ಆಗಿದ್ದರು. ಅವರ ಬಳಿಕ ಈಗ ಅರ್ಜುನ್ ಜನ್ಯ ಮತ್ತು ಹರಿಕೃಷ್ಣ ಬಹು ಬೇಡಿಕೆಯ ಸಂಗೀತ ನಿರ್ದೇಶಕರಾಗಿದ್ದಾರೆ. ಗುರುಕಿರಣ್ ಪ್ರಕಾರ ಹರಿಕೃಷ್ಣ ಸದ್ಯ ಕನ್ನಡದ ಬೆಸ್ಟ್ ಮ್ಯೂಸಿಕ್ ಡೈರೆಕ್ಟರ್ ಆಗಿದ್ದಾರೆ.
ಉಪೇಂದ್ರ ಜೊತೆಗೆ ಇತ್ತೀಚಿಗಷ್ಟೆ 'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮ ಬಂದಿದ್ದ ಗುರುಕಿರಣ್ ಒಂದು ಪ್ರಶ್ನೆಗೆ ಹರಿಕೃಷ್ಣ ಹೆಸರನ್ನು ತೆಗೆದುಕೊಂಡರು. ಶಿವಣ್ಣ ತಮ್ಮ ಪ್ರಶ್ನೆಯಲ್ಲಿ 'ಅರ್ಜುನ್ ಜನ್ಯ, ಹರಿಕೃಷ್ಣ, ಸಾಧು ಕೋಕಿಲ, ಕೆ.ಕಲ್ಯಾಣ್ ಈ ಸಂಗೀತ ನಿರ್ದೇಶಕರಿಗೆ ರಾಂಕ್ ಕೊಡಿ' ಎಂದರು. ಆಗ ಗುರುಕಿರಣ್ ಹರಿಕೃಷ್ಣ ಹೆಸರನ್ನು ಮೊದಲು ಹೇಳಿದರು.
ಎರಡನೇ ಹೆಸರನ್ನಾಗಿ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಹೆಸರನ್ನು ನಂತರ ಸಾಧು ಕೋಕಿಲ ಹಾಗೂ ಕೊನೆಯದಾಗಿ ಕೆ.ಕಲ್ಯಾಣ್ ಹೆಸರನ್ನು ಗುರುಕಿರಣ್ ಹೇಳಿದರು. ಅಂದಹಾಗೆ, ಈ ಹಿಂದೆ ಒಮ್ಮೆ ಫಿಲ್ಮಿಬೀಟ್ ಕನ್ನಡದ ಸಂದರ್ಶನದಲ್ಲಿ ಮಾತನಾಡುವಾಗ ಗುರು ಇಂದಿನ ಮ್ಯೂಸಿಕ್ ಡೈರೆಕ್ಟರ್ ಗಳಲ್ಲಿ ಚರಣ್ ರಾಜ್ ಮತ್ತು ವಾಸುಕಿ ವೈಭವ್ ಒಳ್ಳೆಯ ಪ್ರತಿಭೆ ಇರುವ ಮ್ಯೂಸಿಷಿಯನ್ಸ್ ಗಳು ಎಂದು ಹೊಗಳಿದ್ದರು.