Don't Miss!
- News Dubai Rain: ದುಬಾರಿ ದುಬೈಗೆ ಭಾರವಾದ ಮಳೆ: 4 ದಿನ ಕಳೆದ್ರೂ ಸಹಜ ಸ್ಥಿತಿಗೆ ಬಾರದೆ ಹೈರಾಣ
- Finance ಕಚ್ಚಾ ತೈಲ ಆಮದು ಗಣನೀಯ ಇಳಿಕೆ, ಪೆಟ್ರೋಲ್ ಡಿಸೇಲ್ ಬೆಲೆ ಹೆಚ್ಚಾಗುತ್ತಾ?
- Technology Poco: ಹೊಸದಾಗಿ ಲಾಂಚ್ ಆದ ಪೊಕೊ X6 ಪ್ರೊ 5G ಸ್ಮಾರ್ಟ್ಫೋನ್ಗೆ 17% ರಿಯಾಯಿತಿ!8 GB RAM
- Lifestyle ಶುಕ್ರವಾರ ವೈಭವ ಲಕ್ಷ್ಮಿ ವ್ರತ ಮಾಡೋದೇಕೆ..? ಹೇಗೆ ಆಚರಿಸಬೇಕು ಎಂಬ ಮಾಹಿತಿ ಇಲ್ಲಿದೆ..!
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹಳ್ಳಿ ಹೈದರ ಜೊತೆ ಮಾಲಾಶ್ರೀ, ಹರಿಪ್ರಿಯಾ, ಐಂದ್ರಿತಾ ರೇ ಎಂಟ್ರಿ
ಸ್ಟಾರ್ ಸುವರ್ಣ ವಾಹಿನಿಯ 'ಹಳ್ಳಿ ಹೈದ ಪ್ಯಾಟೇಗ್ ಬಂದ' ಕಾರ್ಯಕ್ರಮ ಸೆಪ್ಟೆಂಬರ್ 24 ರಿಂದ ಆರಂಭವಾಗಲಿದ್ದು, ಈ ಬಾರಿ ವಿಶಿಷ್ಟ ರೀತಿಯಲ್ಲಿ ಮೂಡಿಬರಲಿದೆ. ಈ ಬಾರಿ 12 ಹಳ್ಳಿ ಹುಡುಗರು ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳುವ ಸಲುವಾಗಿ ಬೆಂಗಳೂರಿಗೆ ಬರ್ತಿದ್ದಾರೆ.
ಸೆಪ್ಟೆಂಬರ್ 23ರಂದು ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಕನಸುಗಳನ್ನು ಹೊತ್ತು ಪ್ಯಾಟೇಗೆ ಬಂದಿರುವ 12 ಹುಡುಗರನ್ನು ಕನಸಿನ ರಾಣಿ ಮಾಲಾಶ್ರೀ, ನಟಿ ಹರಿಪ್ರಿಯಾ ಮತ್ತು ಐಂದ್ರಿತಾ ರೇ ಬರಮಾಡಿಕೊಳ್ಳಲ್ಲಿದ್ದಾರೆ.
ಮತ್ತೆ ಶುರು ಆಯ್ತು 'ಹಳ್ಳಿ ಹೈದ ಪ್ಯಾಟೆಗ್ ಬಂದ' ಶೋ
ಕರ್ನಾಟಕದ ಮೂಲೆ ಮೂಲೆಯಿಂದ ಬಂದಿರುವ 12 ಹಳ್ಳಿ ಹುಡುಗರು ಬೆಂಗಳೂರಿಗೆ ಬರುವಾಗ ಅವರವರ ಊರಿನ ನೂರಾರು ಜನ ಒಟ್ಟಾಗಿ ಮೆರೆವಣಿಗೆ ಮಾಡಿ, ಆಶಿರ್ವದಿಸಿ ಈ ಹಳ್ಳಿ ಹುಡುಗರನ್ನು ಬೀಳ್ಕೊಟ್ಟಿದ್ದಾರೆ.
ಈ ಬಾರಿಯ ಕಾರ್ಯಕ್ರಮ ಬಹಳ ಭಿನ್ನವಾಗಿದೆ. ತಂತ್ರಙ್ಞಾನದ ಬಳಕೆಯಿಂದಾಗಿ ಹಳ್ಳಿ ಮತ್ತು ಪಟ್ಟಣದ ನಡುವಿನ ಅಂತರ ಮೊದಲಿನಂತಿಲ್ಲ. ಈ ಬಾರಿ ಹಳ್ಳಿ ಹುಡುಗರನ್ನ ಪ್ಯಾಟೆ ಹುಡುಗರನ್ನಾಗಿಸುವ ಬದಲು, ಅವರ ಕನಸುಗಳನ್ನು ಪೋಷಿಸಲು ಸ್ಟಾರ್ ಸುವರ್ಣ ವಾಹಿನಿ ಮುಂದಾಗಿದೆ.
ಹಳ್ಳಿ ಹೈದರ ಸ್ವಾಗತಕ್ಕೆ ಬಂದ 'ಕನಸಿನ ರಾಣಿ' ಮಾಲಾಶ್ರೀ
ಈ ನಿಟ್ಟಿನಲ್ಲಿ ಹಳ್ಳಿ ಹುಡುಗರು ಪ್ಯಾಟೆಗೆ ಬರಲಿದ್ದು, ಇಲ್ಲಿನ ಸವಾಲುಗಳನ್ನು ಎದುರಿಸಲಿದ್ದಾರೆ. ಅವರಿಗೆ ಸಹಾಯ ಮಾಡಲು 12 ಹುಡುಗಿಯರು ಮೆಂಟರ್ಸ್ ಆಗಿರಲಿದ್ದಾರೆ. ಈ ಬಾರಿಯ ಸ್ಪರ್ಧಿಗಳು ಸಹ ಒಬ್ಬರಿಗಿಂತ ಮತ್ತೊಬ್ಬರು ವಿಶೇಷ ವ್ಯಕ್ತಿತ್ವ ಮತ್ತು ಹಿನ್ನಲೆಯುಳ್ಳವರಾಗಿದ್ದಾರೆ.
ಕಿತ್ತೂರಿನ ರೈತ ದೇವೇಂದ್ರ, ಚಾಮರಾಜನಗರದ ರಂಗಕಲಾವಿದ ಮನೋಜ್, ಹೊನ್ನವಾರದ ಕಬ್ಬಿನ ಹಾಲಿನ ವ್ಯಾಪಾರಿ ಶ್ರೀರಾಮ, ತುಮಕೂರಿನ ಹಾಲಿನ ವ್ಯಾಪಾರಿ ಮಂಜುನಾಥ, ಕಾರವಾರದ ಕೂಲಿ ಕಾರ್ಮಿಕ ಸಂತೋಷ, ಬಾಗಲಕೋಟೆ ಮೀನುಗಾರ ರಮೇಶ, ದಾವಣಗೆರೆಯ ಟ್ರ್ಯಾಕ್ಟರ್ ಚಾಲಕ ನಾಗರಾಜ, ಹಾಸನದ ನಿರುದ್ಯೋಗಿ ಯುವಕ ಪ್ರಮೋದ್ ಮತ್ತು ಕೂಲಿ ಕೆಲಸ ಮಾಡುವ ವರಪ್ರಸಾದ್, ಪಿರಿಯಾಪಟ್ಟಣದ ಕಾಫಿ ತೋಟದ ಕೆಲಸಗಾರ ಐಯ್ಯಪ್ಪ, ವಿಜಯಪುರದ ಕುಸ್ತಿಪಟು ಅಮಗೊಂಡ ಈ ಬಾರಿ ಪ್ಯಾಟೆಗೆ ಬರುತ್ತಿರುವ ಹಳ್ಳಿ ಹುಡುಗರು.