ರಾಜ್ ಗಾಗಿ ಮಹಾ ತ್ಯಾಗ ಮಾಡಿದ್ದಾರೆ ಈ ಹನುಮಂತು
ರಾಮನಿಗೆ ಭಂಟ ಇದ್ದ ಆತನೇ ಹನುಮಂತ. ಆದರೆ, ಅದೇ ರೀತಿ ರಾಜ್ ಗೆ ಕೂಡ ಒಬ್ಬ ಭಂಟ ಇದ್ದರು ಅವರ ಹೆಸರು ಕೂಡ ಹನುಮಂತು.
ಹನುಮಂತು ರಾಜ್ ಕುಟುಂಬದಲ್ಲಿ ಸುಮಾರು 35 ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದಾರೆ. ಇವರನ್ನು ರಾಘವೇಂದ್ರ ರಾಜ್ ಕುಮಾರ್ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಪರಿಚಯ ಮಾಡಿಸಿದರು.
ರಾಜ್ ಕುಮಾರ್ ರವರ ಮೇಲೆ ಅಪಾರ ಪ್ರೀತಿ ಹೊಂದಿರುವ ಹನುಮಂತ ಅವರು ರಾಜ್ ಬಳಿ ಕೆಲಸ ಮಾಡುತ್ತಿದ್ದರು. ಇಂದಿಗೂ ಆ ಕುಟುಂಬದ ಜೊತೆಗೆ ಅವರು ಇದ್ದಾರೆ. ಮದುವೆಯಾದರೆ ರಾಜ್ ಕುಮಾರ್ ಜೊತೆಗೆ ಯಾವಾಗಲೂ ಕೆಲಸ ಮಾಡಲು ಆಗಲ್ಲ ಎನ್ನುವ ಕಾರಣಕ್ಕೆ ಅವರು ಮದುವೆಯೇ ಆಗಿಲ್ಲವಂತೆ.

35 ವರ್ಷಗಳಿಂದ ಒಂದೂ ದಿನವೂ ರಜೆ ತೆಗೆದುಕೊಂಡಿಲ್ಲವಂತೆ. ತಮ್ಮ ಊರಿಗೂ ಹೋಗಿಲ್ಲವಂತೆ. ಈ ರೀತಿ ತಮ್ಮ ಇಡೀ ಬದುಕನ್ನು ರಾಜ್ ಕುಮಾರ್ ಹಾಗೂ ಅವರ ಕುಟುಂಬಕ್ಕೆ ಮುಡಿಪಿಟ್ಟಿದ್ದಾರೆ ಹನುಮಂತು.
ರಾಜ್ ಗೆ ಕೂಡ ಹನುಮಂತು ಅವರನ್ನು ಕಂಡರೆ ಬಹಳ ಇಷ್ಟ ಅಂತೆ. ಹನುಮಂತು ಗಾಡಿ ಓಡಿಸುವಾಗ ಅವರ ಬಾಯಿಗೆ ತಾವೇ ಅಡಿಕೆ ಎಲೆಯನ್ನು ತಿನ್ನಿಸುತ್ತಿದ್ದರಂತೆ ರಾಜ್. ಈ ರೀತಿ ಹನುಮಂತು ಸಾಕ್ಷತ್ ಹನುಮಂತನಂತೆ ರಾಜ್ ಸೇವೆ ಮಾಡಿದ್ದಾರೆ.


Click it and Unblock the Notifications











