Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಾಜ್ ಗಾಗಿ ಮಹಾ ತ್ಯಾಗ ಮಾಡಿದ್ದಾರೆ ಈ ಹನುಮಂತು
ರಾಮನಿಗೆ ಭಂಟ ಇದ್ದ ಆತನೇ ಹನುಮಂತ. ಆದರೆ, ಅದೇ ರೀತಿ ರಾಜ್ ಗೆ ಕೂಡ ಒಬ್ಬ ಭಂಟ ಇದ್ದರು ಅವರ ಹೆಸರು ಕೂಡ ಹನುಮಂತು.
ಹನುಮಂತು ರಾಜ್ ಕುಟುಂಬದಲ್ಲಿ ಸುಮಾರು 35 ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದಾರೆ. ಇವರನ್ನು ರಾಘವೇಂದ್ರ ರಾಜ್ ಕುಮಾರ್ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಪರಿಚಯ ಮಾಡಿಸಿದರು.
ಶಿವಣ್ಣ ನನ್ನ ತಂದೆ, ಪುನೀತ್ ನನ್ನ ಪಿಲ್ಲರ್: ಸಹೋದರರ ಬಗ್ಗೆ ಭಾವುಕರಾದ ರಾಘಣ್ಣ
ರಾಜ್ ಕುಮಾರ್ ರವರ ಮೇಲೆ ಅಪಾರ ಪ್ರೀತಿ ಹೊಂದಿರುವ ಹನುಮಂತ ಅವರು ರಾಜ್ ಬಳಿ ಕೆಲಸ ಮಾಡುತ್ತಿದ್ದರು. ಇಂದಿಗೂ ಆ ಕುಟುಂಬದ ಜೊತೆಗೆ ಅವರು ಇದ್ದಾರೆ. ಮದುವೆಯಾದರೆ ರಾಜ್ ಕುಮಾರ್ ಜೊತೆಗೆ ಯಾವಾಗಲೂ ಕೆಲಸ ಮಾಡಲು ಆಗಲ್ಲ ಎನ್ನುವ ಕಾರಣಕ್ಕೆ ಅವರು ಮದುವೆಯೇ ಆಗಿಲ್ಲವಂತೆ.
35 ವರ್ಷಗಳಿಂದ ಒಂದೂ ದಿನವೂ ರಜೆ ತೆಗೆದುಕೊಂಡಿಲ್ಲವಂತೆ. ತಮ್ಮ ಊರಿಗೂ ಹೋಗಿಲ್ಲವಂತೆ. ಈ ರೀತಿ ತಮ್ಮ ಇಡೀ ಬದುಕನ್ನು ರಾಜ್ ಕುಮಾರ್ ಹಾಗೂ ಅವರ ಕುಟುಂಬಕ್ಕೆ ಮುಡಿಪಿಟ್ಟಿದ್ದಾರೆ ಹನುಮಂತು.
ರಾಜ್ ಗೆ ಕೂಡ ಹನುಮಂತು ಅವರನ್ನು ಕಂಡರೆ ಬಹಳ ಇಷ್ಟ ಅಂತೆ. ಹನುಮಂತು ಗಾಡಿ ಓಡಿಸುವಾಗ ಅವರ ಬಾಯಿಗೆ ತಾವೇ ಅಡಿಕೆ ಎಲೆಯನ್ನು ತಿನ್ನಿಸುತ್ತಿದ್ದರಂತೆ ರಾಜ್. ಈ ರೀತಿ ಹನುಮಂತು ಸಾಕ್ಷತ್ ಹನುಮಂತನಂತೆ ರಾಜ್ ಸೇವೆ ಮಾಡಿದ್ದಾರೆ.