Don't Miss!
- News Lok Sabha Election 2024 Phase 1 Polling LIVE: ಲೋಕಸಭಾ ಚುನಾವಣೆ 2024ರ ಮೊದಲ ಹಂತದ ಮತದಾನ!
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿವಾದದ ಬಗ್ಗೆ ಸ್ಪಷ್ಟನೆ ಕೊಟ್ಟ 'ಹರಹರ ಮಹಾದೇವ'ನ 'ಪಾರ್ವತಿ' ಪ್ರಿಯಾಂಕಾ
'ಸ್ಟಾರ್ ಸುವರ್ಣ' ವಾಹಿನಿಯ 'ಹರ ಹರ ಮಹದೇವ' ಧಾರಾವಾಹಿಯಲ್ಲಿ ಪಾರ್ವತಿ ಪಾತ್ರವನ್ನ ನಿಭಾಯಿಸುತ್ತಿದ್ದ ನಟಿ ಪ್ರಿಯಾಂಕಗೆ ಟ್ರೈ ಆಂಗಲ್ ಫಿಲ್ಮ್ ಕಂಪನಿಯಿಂದ ನೋಟೀಸ್ ಕಳುಹಿಸಲಾಗಿದೆ ಎಂಬ ಸುದ್ದಿ ಇಂದು ಬೆಳಗ್ಗೆಯಿಂದ ಸಿಕ್ಕಾಪಟ್ಟೆ ಸದ್ದು ಮಾಡಿತ್ತು.
ಅಷ್ಟಕ್ಕೂ ನಟಿ ಪ್ರಿಯಾಂಕಗೆ ನೋಟೀಸ್ ಬಂದಿರುವುದು ಯಾಕೆ.? ಏನಿದು ವಿವಾದ.? ಎಂಬುದರ ಬಗ್ಗೆ ಸ್ವತಃ ನಟಿ ಪ್ರಿಯಾಂಕ ನಿಮ್ಮ 'ಫಿಲ್ಮಿಬೀಟ್ ಕನ್ನಡ' ಗೆ ಸ್ಪಷ್ಟನೆ ನೀಡಿದ್ದಾರೆ.
* 'ಹರ ಹರ ಮಹಾದೇವ' ಧಾರಾವಾಹಿ ತಂಡ ನಿಮ್ಮನ್ನು ಹೊರ ಹಾಕಿದ್ದ ಸುದ್ದಿ ನಿಜವೇ..?
- ''ಇಲ್ಲ ಇದು ಸುಳ್ಳು ಸುದ್ದಿ. ಅವರು ನನ್ನನ್ನು ಹೊರ ಹಾಕಿಲ್ಲ. ನಾನೇ ಧಾರಾವಾಹಿಯಿಂದ ಹೊರ ಬಂದಿದ್ದೇನೆ. ಸೀರಿಯಲ್ ಶುರುವಾದಾಗ ಮಾಡಿದ ಕಾಂಟ್ರ್ಯಾಕ್ಟ್ ಪ್ರಕಾರ ನಾನು 260 ಎಪಿಸೋಡ್ ಮಾಡಬೇಕಿತ್ತು. ಆದರೆ ನಾನು 380 ಎಪಿಸೋಡ್ ಗಳಲ್ಲಿ ನಟನೆ ಮಾಡಿದ್ದೇನೆ''
* ಹಾಗಾದರೆ ಏನಿದು ವಿವಾದ.?
- ''ನಾನು ಕಾಂಟ್ರ್ಯಾಕ್ಟ್ ಗಿಂತ ಹೆಚ್ಚು ದಿನವೇ ಕೆಲಸ ಮಾಡಿದ್ದೇನೆ. ಆದರೆ ಅವರು ಇನ್ನೂ ಮೂರು ತಿಂಗಳು ಮುಂದುವರೆಸುವಂತೆ ಕೇಳಿದ್ದರು. ಆದರೆ ನಾನು ನನ್ನ ಬೇರೆ ಸಿನಿಮಾದಲ್ಲಿ ಬಿಜಿ ಇದ್ದ ಕಾರಣ ಅದನ್ನು ನಿರಾಕರಿಸಿದೆ. ಆಗ ಅವರು ಕಂಪನಿ ಕಡೆಯಿಂದ ನೋಟೀಸ್ ಕಳುಹಿಸಿದ್ದಾರೆ''
* ಧಾರಾವಾಹಿ ತಂಡ ಹಾಗೂ ನಿಮ್ಮ ನಡುವೆ ಭಿನ್ನಾಭಿಪ್ರಾಯ ಇತ್ತಾ.?
- ''ಇಲ್ಲ. ನನಗೆ ಸಿನಿಮಾ ಕೆಲಸ ಇರುವ ಕಾರಣ ಟೈಂ ಆಗುತ್ತಿರಲಿಲ್ಲ. ಅದಕ್ಕೆ ನಾನು ಮೂರು ತಿಂಗಳು ಮುಂದುವರೆಸಲು ಸಾಧ್ಯ ಇಲ್ಲ ಅಂದೆ. ಅವರು ನೋಟೀಸ್ ನೀಡಿದ್ದು ಎರಡು ತಿಂಗಳು ಹಿಂದೆ. ಆ ಸಮಸ್ಯೆ ಈಗ ಬಗೆಹರಿದಿದೆ''
* ನಿಮಗೆ ನೋಟೀಸ್ ಬಂದಿದೆ. ನಿಮ್ಮ ಮುಂದಿನ ನಡೆ ಏನು.?
- ಏನೂ ಇಲ್ಲ. ಸಮಸ್ಯೆ ಬಗೆಹರಿದಿದೆ. ನಾನು ನನ್ನ ಸಿನಿಮಾಗಳಲ್ಲಿ ಬಿಜಿ ಇದ್ದೇನೆ. ವಾಹಿನಿ ಕಡೆಯಿಂದ ನನಗೆ ಯಾವುದೇ ತೊಂದರೆ ಇಲ್ಲ.