Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಮಗಳು ಜಾನಕಿ' ಧಾರಾವಾಹಿಯ ಪಯಣ ಮುಗಿಸಿದ ಹರಿ ಕುಮಾರ್
ಮಗಳು ಜಾನಕಿ ಧಾರವಾಹಿಗಳಲ್ಲಿ ಎಲ್ಲಾ ಪಾತ್ರಗಳು ಸಹ ಪ್ರೇಕ್ಷಕರ ನೆಚ್ಚಿನ ಪಾತ್ರಗಳಾಗಿವೆ. ಅದರಲ್ಲೂ ಸುಂದರ್ ಮೂರ್ತಿ ಮತ್ತು ಹರಿಕುಮಾರ್ ಪಾತ್ರಗಳು ಪ್ರೇಕ್ಷಕರನ್ನು ಕಾಡುವಂತ ಪಾತ್ರಗಳಾಗಿತ್ತು. ತೀರ ಮುಗ್ಧ ಪಾತ್ರದ ಮೂಲಕ ಪ್ರೇಕ್ಷಕರ ಗಮನ ಸೆಳೆದವರು. ಎಲ್ಲಾ ಗಂಭೀರ ಪಾತ್ರಗಳ ನಡುವೆ ಸುಂದರ್ ಮೂರ್ತಿ ಮತ್ತು ಹರಿಕುಮಾರ್ ಪಾತ್ರಗಳು ನೋಡುಗರಲ್ಲಿ ನಗುವನ್ನು ತರಿಸುತ್ತಿತ್ತು.
ಆದ್ರೀಗ ಈ ಪಾತ್ರದಲ್ಲಿ ಒಂದು ಪಾತ್ರ ಕೊನೆಗೊಳ್ಳುತ್ತಿದೆ. ಹೌದು, ಸಿ ಎಸ್ ಪಿ ಅವರಿಗೆ ಅಸಿಸ್ಟಂಟ್ ಆಗಿ ಕೆಲಸ ಮಾಡುತ್ತಿದ್ದ ಹರಿಕುಮಾರ್ ಧಾರಾವಾಹಿಯಲ್ಲಿ ಬೇರೆ ಊರಿಗೆ ಹೋಗುವುದಾಗಿ ಹೇಳಿ ಕೆಲಸ ಬಿಟ್ಟು ಹೋಗಿದ್ದಾರೆ. ಆದ್ರೆ ಹರಿಕುಮಾರ್ ಸಿ ಎಸ್ ಪಿ ಬಳಿ ಕೆಲಸಬಿಟ್ಟಿರುವುದು ಮಾತ್ರವಲ್ಲದೆ, ನಿಜವಾಗಿಯು ಧಾರವಾಹಿಯಿಂದ ಹೊರ ಬಂದಿದ್ದಾರೆ. ಅವರ ಪಾತ್ರ ಇಲ್ಲಿಗೆ ಕೊನೆಕೊಂಡಿದೆ.
ಸಂಜನಾ ಪತಿ ಇನ್ನು ಬದುಕಿದ್ದಾರೆ : ಏಳು ವರ್ಷದ ನಂತರ ಕಾಣಿಸಿಕೊಂಡ ನಿರಂಜನ್ ಭಾವ
ಧಾರಾವಾಹಿ ಮೂಲಕ ಹರಿಕುಮಾರ್ ಅಂತಾನೆ ಖ್ಯಾತಿಗಳಿಸಿರುವ ಇವರ ನಿಜವಾದ ಹೆಸರು ಶ್ರೀಹರಿ ಕಶ್ಯಪ್. ಹರಿಕುಮಾರ್ ಪಾತ್ರದ ಮೂಲಕ ಎಲ್ಲರನ್ನು ತಿಳಿಹಾಸ್ಯದ ಮೂಲಕ ರಂಜಿಸುತ್ತಿದ್ದ ಶ್ರೀಹರಿ ಕಶ್ಯಪ್ ವಿದಾಯ ನೋಡುಗರಿಗೆ ಬೇಸರ ಮೂಡಿಸಿದೆ. ಸುಮಾರು ಒಂದು ವರ್ಷಗಳಿಂದ ಧಾರಾವಾಹಿಯ ಭಾಗವಾಗಿದ್ದ ಶ್ರೀಹರಿಕಶ್ಯಪ್ ಅದ್ಭುತ ನಟನೆಯ ಮೂಲಕ ಕುರುತೆರೆ ಪ್ರೇಕ್ಷಕರನ ಮನಗೆದ್ದಿದ್ದರು.
ಕೇವಲ ತೆರೆ ಮೇಲೆ ಮಾತ್ರವಲ್ಲದೆ ಈ ಧಾರಾವಾಹಿಗಾಗಿ ತೆರೆ ಹಿಂದಿಯು ದುಡಿದ್ದಾರೆ ಶ್ರೀಹರಿ ಕಶ್ಯಪ್. ಈ ಧಾರವಾಹಿಯಲ್ಲಿ ತನ್ನ ಪಯಣವನ್ನು ಮುಗಿಸಿರುವ ಹರಿಕುಮಾರ್ ಅವರ ಭಾವುಕರಾಗಿ ವಿದಾಯಕ್ಕೆ ಮಗಳು ಜಾನಕಿ ಧಾರಾವಾಹಿಯ ಅಪ್ಪಟ ಅಭಿಮಾನಿ ವೃಂದ 'ಮಗಳು ಜಾನಕಿ ಸೀರಿಯಲ್ ಕಲರ್ಸ್ ಸೂಪರ್' ಫೇಸ್ ಬುಕ್ ಗ್ರೂಪ್ ಬೇಸರ ವ್ಯಕ್ತಪಡಿಸುತ್ತ ಮುಂದಿನ ಪಯಣಕ್ಕೆ ಶುಭ ಹಾರೈಸಿದ್ದಾರೆ.