Don't Miss!
- Automobiles ಹೊಸ ಸುಜುಕಿ V-Strom 800 DE ಬೈಕ್ ಬಿಡುಗಡೆ: ಬೆಲೆ ರೂ.10.30 ಲಕ್ಷ
- Lifestyle ಯಾವ ದಿಕ್ಕಿಗೆ ತಲೆ ಇಟ್ಟು ಮಲಗಬಾರದು..? ಹಿರಿಯರು ಈ ರೀತಿ ಹೇಳೋದೇಕೆ.?
- Sports RCB vs KKR: ಗೇಮ್ ಚೇಂಜರ್ ಆಗಬಹುದು ಈ ಪ್ಲೇಯರ್ಸ್; ಈ ಆಟಗಾರರ ಮೇಲೆ ಕಣ್ಣು
- News Acid Attack: ಆಸ್ತಿ ವಿವಾದ: ಮಗನ ಮೇಲೆ 'ಆಸಿಡ್' ಎರಚಿದ ತಂದೆ
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಮಗಳು ಜಾನಕಿ' ಧಾರಾವಾಹಿಯ ಪಯಣ ಮುಗಿಸಿದ ಹರಿ ಕುಮಾರ್
ಮಗಳು ಜಾನಕಿ ಧಾರವಾಹಿಗಳಲ್ಲಿ ಎಲ್ಲಾ ಪಾತ್ರಗಳು ಸಹ ಪ್ರೇಕ್ಷಕರ ನೆಚ್ಚಿನ ಪಾತ್ರಗಳಾಗಿವೆ. ಅದರಲ್ಲೂ ಸುಂದರ್ ಮೂರ್ತಿ ಮತ್ತು ಹರಿಕುಮಾರ್ ಪಾತ್ರಗಳು ಪ್ರೇಕ್ಷಕರನ್ನು ಕಾಡುವಂತ ಪಾತ್ರಗಳಾಗಿತ್ತು. ತೀರ ಮುಗ್ಧ ಪಾತ್ರದ ಮೂಲಕ ಪ್ರೇಕ್ಷಕರ ಗಮನ ಸೆಳೆದವರು. ಎಲ್ಲಾ ಗಂಭೀರ ಪಾತ್ರಗಳ ನಡುವೆ ಸುಂದರ್ ಮೂರ್ತಿ ಮತ್ತು ಹರಿಕುಮಾರ್ ಪಾತ್ರಗಳು ನೋಡುಗರಲ್ಲಿ ನಗುವನ್ನು ತರಿಸುತ್ತಿತ್ತು.
ಆದ್ರೀಗ ಈ ಪಾತ್ರದಲ್ಲಿ ಒಂದು ಪಾತ್ರ ಕೊನೆಗೊಳ್ಳುತ್ತಿದೆ. ಹೌದು, ಸಿ ಎಸ್ ಪಿ ಅವರಿಗೆ ಅಸಿಸ್ಟಂಟ್ ಆಗಿ ಕೆಲಸ ಮಾಡುತ್ತಿದ್ದ ಹರಿಕುಮಾರ್ ಧಾರಾವಾಹಿಯಲ್ಲಿ ಬೇರೆ ಊರಿಗೆ ಹೋಗುವುದಾಗಿ ಹೇಳಿ ಕೆಲಸ ಬಿಟ್ಟು ಹೋಗಿದ್ದಾರೆ. ಆದ್ರೆ ಹರಿಕುಮಾರ್ ಸಿ ಎಸ್ ಪಿ ಬಳಿ ಕೆಲಸಬಿಟ್ಟಿರುವುದು ಮಾತ್ರವಲ್ಲದೆ, ನಿಜವಾಗಿಯು ಧಾರವಾಹಿಯಿಂದ ಹೊರ ಬಂದಿದ್ದಾರೆ. ಅವರ ಪಾತ್ರ ಇಲ್ಲಿಗೆ ಕೊನೆಕೊಂಡಿದೆ.
ಸಂಜನಾ ಪತಿ ಇನ್ನು ಬದುಕಿದ್ದಾರೆ : ಏಳು ವರ್ಷದ ನಂತರ ಕಾಣಿಸಿಕೊಂಡ ನಿರಂಜನ್ ಭಾವ
ಧಾರಾವಾಹಿ ಮೂಲಕ ಹರಿಕುಮಾರ್ ಅಂತಾನೆ ಖ್ಯಾತಿಗಳಿಸಿರುವ ಇವರ ನಿಜವಾದ ಹೆಸರು ಶ್ರೀಹರಿ ಕಶ್ಯಪ್. ಹರಿಕುಮಾರ್ ಪಾತ್ರದ ಮೂಲಕ ಎಲ್ಲರನ್ನು ತಿಳಿಹಾಸ್ಯದ ಮೂಲಕ ರಂಜಿಸುತ್ತಿದ್ದ ಶ್ರೀಹರಿ ಕಶ್ಯಪ್ ವಿದಾಯ ನೋಡುಗರಿಗೆ ಬೇಸರ ಮೂಡಿಸಿದೆ. ಸುಮಾರು ಒಂದು ವರ್ಷಗಳಿಂದ ಧಾರಾವಾಹಿಯ ಭಾಗವಾಗಿದ್ದ ಶ್ರೀಹರಿಕಶ್ಯಪ್ ಅದ್ಭುತ ನಟನೆಯ ಮೂಲಕ ಕುರುತೆರೆ ಪ್ರೇಕ್ಷಕರನ ಮನಗೆದ್ದಿದ್ದರು.
ಕೇವಲ ತೆರೆ ಮೇಲೆ ಮಾತ್ರವಲ್ಲದೆ ಈ ಧಾರಾವಾಹಿಗಾಗಿ ತೆರೆ ಹಿಂದಿಯು ದುಡಿದ್ದಾರೆ ಶ್ರೀಹರಿ ಕಶ್ಯಪ್. ಈ ಧಾರವಾಹಿಯಲ್ಲಿ ತನ್ನ ಪಯಣವನ್ನು ಮುಗಿಸಿರುವ ಹರಿಕುಮಾರ್ ಅವರ ಭಾವುಕರಾಗಿ ವಿದಾಯಕ್ಕೆ ಮಗಳು ಜಾನಕಿ ಧಾರಾವಾಹಿಯ ಅಪ್ಪಟ ಅಭಿಮಾನಿ ವೃಂದ 'ಮಗಳು ಜಾನಕಿ ಸೀರಿಯಲ್ ಕಲರ್ಸ್ ಸೂಪರ್' ಫೇಸ್ ಬುಕ್ ಗ್ರೂಪ್ ಬೇಸರ ವ್ಯಕ್ತಪಡಿಸುತ್ತ ಮುಂದಿನ ಪಯಣಕ್ಕೆ ಶುಭ ಹಾರೈಸಿದ್ದಾರೆ.