Don't Miss!
- News ರಜನಿಕಾಂತ್, ವಿಜಯ್ ಸೇತುಪಥಿ, ಧನುಷ್.. ಯಾರೆಲ್ಲಾ ವೋಟ್ ಹಾಕಿದ್ರು?
- Lifestyle ಸ್ವತಂತ್ರ ಭಾರತದ ಮೊದಲ ಮತದಾರನಿಲ್ಲದ ಮೊದಲ ಚುನಾವಣೆ ಇದು..! ಯಾರು ಈ ಮತದಾರ ಗೊತ್ತಾ?
- Automobiles Elevate: ಶ್ರೀಸಾಮಾನ್ಯನ ಬಿಎಂಡಬ್ಲ್ಯೂ.. ಹೋಂಡಾ ಎಲಿವೇಟ್ ಖರೀದಿಸಬೇಕೇ? ಆನ್-ರೋಡ್ ಬೆಲೆ ಎಷ್ಟು, EMI ಏನು?
- Finance ಆಪ್ ಸ್ಟೋರ್ನಿಂದ ವಾಟ್ಸಾಪ್, ಥ್ರೆಡ್ ತೆಗೆದುಹಾಕಿದ ಆಪಲ್!
- Sports IPL 2024: ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದರೂ ಹಾರ್ದಿಕ್ ಪಾಂಡ್ಯಗೆ ಭಾರೀ ಮೊತ್ತದ ದಂಡ!
- Technology Google Maps: ಗೂಗಲ್ ಮ್ಯಾಪ್ಸ್ ನಲ್ಲಿ ಹೊಸ ಸೌಲಭ್ಯ! ಹತ್ತಿರದ EV ಚಾರ್ಜಿಂಗ್ ಸ್ಟೇಷನ್ ಸರ್ಚ್ ಬಲು ಸುಲಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಮಗಳು ಜಾನಕಿ' ಧಾರಾವಾಹಿಯ ಪಯಣ ಮುಗಿಸಿದ ಹರಿ ಕುಮಾರ್
ಮಗಳು ಜಾನಕಿ ಧಾರವಾಹಿಗಳಲ್ಲಿ ಎಲ್ಲಾ ಪಾತ್ರಗಳು ಸಹ ಪ್ರೇಕ್ಷಕರ ನೆಚ್ಚಿನ ಪಾತ್ರಗಳಾಗಿವೆ. ಅದರಲ್ಲೂ ಸುಂದರ್ ಮೂರ್ತಿ ಮತ್ತು ಹರಿಕುಮಾರ್ ಪಾತ್ರಗಳು ಪ್ರೇಕ್ಷಕರನ್ನು ಕಾಡುವಂತ ಪಾತ್ರಗಳಾಗಿತ್ತು. ತೀರ ಮುಗ್ಧ ಪಾತ್ರದ ಮೂಲಕ ಪ್ರೇಕ್ಷಕರ ಗಮನ ಸೆಳೆದವರು. ಎಲ್ಲಾ ಗಂಭೀರ ಪಾತ್ರಗಳ ನಡುವೆ ಸುಂದರ್ ಮೂರ್ತಿ ಮತ್ತು ಹರಿಕುಮಾರ್ ಪಾತ್ರಗಳು ನೋಡುಗರಲ್ಲಿ ನಗುವನ್ನು ತರಿಸುತ್ತಿತ್ತು.
ಆದ್ರೀಗ ಈ ಪಾತ್ರದಲ್ಲಿ ಒಂದು ಪಾತ್ರ ಕೊನೆಗೊಳ್ಳುತ್ತಿದೆ. ಹೌದು, ಸಿ ಎಸ್ ಪಿ ಅವರಿಗೆ ಅಸಿಸ್ಟಂಟ್ ಆಗಿ ಕೆಲಸ ಮಾಡುತ್ತಿದ್ದ ಹರಿಕುಮಾರ್ ಧಾರಾವಾಹಿಯಲ್ಲಿ ಬೇರೆ ಊರಿಗೆ ಹೋಗುವುದಾಗಿ ಹೇಳಿ ಕೆಲಸ ಬಿಟ್ಟು ಹೋಗಿದ್ದಾರೆ. ಆದ್ರೆ ಹರಿಕುಮಾರ್ ಸಿ ಎಸ್ ಪಿ ಬಳಿ ಕೆಲಸಬಿಟ್ಟಿರುವುದು ಮಾತ್ರವಲ್ಲದೆ, ನಿಜವಾಗಿಯು ಧಾರವಾಹಿಯಿಂದ ಹೊರ ಬಂದಿದ್ದಾರೆ. ಅವರ ಪಾತ್ರ ಇಲ್ಲಿಗೆ ಕೊನೆಕೊಂಡಿದೆ.
ಸಂಜನಾ ಪತಿ ಇನ್ನು ಬದುಕಿದ್ದಾರೆ : ಏಳು ವರ್ಷದ ನಂತರ ಕಾಣಿಸಿಕೊಂಡ ನಿರಂಜನ್ ಭಾವ
ಧಾರಾವಾಹಿ ಮೂಲಕ ಹರಿಕುಮಾರ್ ಅಂತಾನೆ ಖ್ಯಾತಿಗಳಿಸಿರುವ ಇವರ ನಿಜವಾದ ಹೆಸರು ಶ್ರೀಹರಿ ಕಶ್ಯಪ್. ಹರಿಕುಮಾರ್ ಪಾತ್ರದ ಮೂಲಕ ಎಲ್ಲರನ್ನು ತಿಳಿಹಾಸ್ಯದ ಮೂಲಕ ರಂಜಿಸುತ್ತಿದ್ದ ಶ್ರೀಹರಿ ಕಶ್ಯಪ್ ವಿದಾಯ ನೋಡುಗರಿಗೆ ಬೇಸರ ಮೂಡಿಸಿದೆ. ಸುಮಾರು ಒಂದು ವರ್ಷಗಳಿಂದ ಧಾರಾವಾಹಿಯ ಭಾಗವಾಗಿದ್ದ ಶ್ರೀಹರಿಕಶ್ಯಪ್ ಅದ್ಭುತ ನಟನೆಯ ಮೂಲಕ ಕುರುತೆರೆ ಪ್ರೇಕ್ಷಕರನ ಮನಗೆದ್ದಿದ್ದರು.
ಕೇವಲ ತೆರೆ ಮೇಲೆ ಮಾತ್ರವಲ್ಲದೆ ಈ ಧಾರಾವಾಹಿಗಾಗಿ ತೆರೆ ಹಿಂದಿಯು ದುಡಿದ್ದಾರೆ ಶ್ರೀಹರಿ ಕಶ್ಯಪ್. ಈ ಧಾರವಾಹಿಯಲ್ಲಿ ತನ್ನ ಪಯಣವನ್ನು ಮುಗಿಸಿರುವ ಹರಿಕುಮಾರ್ ಅವರ ಭಾವುಕರಾಗಿ ವಿದಾಯಕ್ಕೆ ಮಗಳು ಜಾನಕಿ ಧಾರಾವಾಹಿಯ ಅಪ್ಪಟ ಅಭಿಮಾನಿ ವೃಂದ 'ಮಗಳು ಜಾನಕಿ ಸೀರಿಯಲ್ ಕಲರ್ಸ್ ಸೂಪರ್' ಫೇಸ್ ಬುಕ್ ಗ್ರೂಪ್ ಬೇಸರ ವ್ಯಕ್ತಪಡಿಸುತ್ತ ಮುಂದಿನ ಪಯಣಕ್ಕೆ ಶುಭ ಹಾರೈಸಿದ್ದಾರೆ.