Don't Miss!
- News Siddaramaiah: ಹುಬ್ಬಳ್ಳಿಯ ನೇಹಾ ಹಿರೇಮಠ ನಿವಾಸಕ್ಕೆ ಸಿಎಂ ಭೇಟಿ: ಸಿದ್ದರಾಮಯ್ಯ ಕೊಟ್ಟ ಭರವಸೆ ಏನು?
- Lifestyle ದೇಹದಲ್ಲಿ ಈ ಬದಲಾವಣೆ ಆದರೆ ನಿಮ್ಮಲ್ಲಿ ವಿಟಮಿನ್ ಬಿ12 ಕೊರತೆಯಾಗಿದೆ ಎಂದರ್ಥ
- Sports IPL 2024: ಹೈದರಾಬಾದ್ ಅಂಗಳದಲ್ಲಿ ಗೆಲ್ಲುವುದೆ ಆರ್ಸಿಬಿ: ಟಾಸ್ ವರದಿ ಹೀಗಿದೆ
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
IPL ಬಗ್ಗೆ ಕೇಳಿದ ಪ್ರಶ್ನೆಯಿಂದ ಹರ್ಷಿತ್ ಗೆ ಮಿಸ್ ಆಯ್ತು 6 ಲಕ್ಷ: ಯಾವುದು ಆ ಪ್ರಶ್ನೆ.?
ಕನ್ನಡದ ಕೋಟ್ಯಧಿಪತಿ ದಿನೇ ದಿನೇ ರೋಚಕವಾಗುತ್ತಿದೆ. ಮೊದಲ ಸ್ಪರ್ಧಿ ಯಾವುದೇ ಹಣ ಗೆದ್ದಿಲ್ಲ. ಎರಡನೇ ಸ್ಪರ್ಧಿ ಮಂಜುನಾಥ್ 3 ಲಕ್ಷದ 20 ಸಾವಿರ ರೂಪಾಯಿ ಗೆದ್ದರು. ನಂತರ ಮೂರನೇ ಸ್ಪರ್ಧಿ ಹರ್ಷಿತ್ 5000 ಸಾವಿರ ಗೆದ್ದು ಮೂರನೇ ದಿನಕ್ಕೆ ಆಟ ಕಾಯ್ದುಕೊಂಡಿದ್ದರು.
ನಿನ್ನೆ ಆಟ ಮುಂದುವರೆಸಿದ ಹರ್ಷಿತ್ 3 ಲಕ್ಷ 20 ಸಾವಿರ ರೂಪಾಯಿ ಗೆದ್ದರು. ಆದ್ರೆ, 6 ಲಕ್ಷದ 40 ಸಾವಿರ ರೂಪಾಯಿ ಪ್ರಶ್ನೆಗೆ ಉತ್ತರ ಕೊಡುವಲ್ಲಿ ವಿಫಲರಾದರು. ವಿಶೇಷ ಅಂದ್ರೆ, ಇದೊಂದು ಕ್ರಿಕೆಟ್ ಗೆ ಸಂಬಂಧಪಟ್ಟಂತ ಪ್ರಶ್ನೆಯಾಗಿತ್ತು.
ಹಾಗಿದ್ರೆ, ಹರ್ಷಿತ್ ಗೆ ಎದುರಾದ 6 ಲಕ್ಷದ 40 ಸಾವಿರ ರೂಪಾಯಿ ಪ್ರಶ್ನೆ ಯಾವುದು.? ಹರ್ಷಿತ್ ನಂತರ ಆಯ್ಕೆಯಾದ ಸ್ಪರ್ಧಿ ಎಷ್ಟು ಗೆದ್ದರು ಎಂಬುದನ್ನ ತಿಳಿಯಲು ಮುಂದೆ ಓದಿ.....
6.40 ಲಕ್ಷದ ಪ್ರಶ್ನೆ ಇದಾಗಿತ್ತು
ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ (IPL) ಆಡಿದ ಮೊದಲ ನೇಪಾಳದ ಕ್ರಿಕೆಟಿಗ ಯಾರು.?
A
ಶಿವಂ
ಮಾವಿ
B
ಆದಿತ್ಯ
ತರೆ
C
ಸಂದೀಪ್
ಲಮಿಚ್ಛಾನೆ
D
ಚೈತನ್ಯ
ಬಿಷ್ಣೋಯಿ
ಸರಿಯಾದ ಉತ್ತರ ಇದಾಗಿತ್ತು
ಹರ್ಷಿತ್ ಗೆ ಉತ್ತರ ಗೊತ್ತಿರಲಿಲ್ಲ. ಆದ್ರೆ, ಒಂದು ಊಹೆಯ ಮೆರೆಗೆ C ಸಂದೀಪ್ ಲಮಿಚ್ಛಾನೆ ಎಂದು ಉತ್ತರಿಸಿದರು. ಆದ್ರೆ, ಅದನ್ನ ಲಾಕ್ ಮಾಡುವಷ್ಟರಲ್ಲಿ ಅವರ ತಂದೆ ಬಳಿಯಿದ್ದ ವಿಶೇಷ ಅಧಿಕಾರದಿಂದ ಸೂಚನೆ ಸಿಕ್ತು. ನಂತರ ಆಯ್ಕೆ ಬದಲಾಯಿಸಿ ಹರ್ಷಿತ್ ಆಯ್ಕೆ A-ಶಿವಂ ಮಾವಿ ಎಂದು ಉತ್ತರಿಸಿದರು. ಆದ್ರೆ, ತಪ್ಪಾಗಿತ್ತು.
ಸರಿಯಾದ ಉತ್ತರ: C ಸಂದೀಪ್ ಲಮಿಚ್ಛಾನೆ
'ಕನ್ನಡದ ಕೋಟ್ಯಾಧಿಪತಿ'ಯ ಮೊದಲ ಸ್ಪರ್ಧಿ ಸೋಲಲು ಕಾರಣ ಈ ಪ್ರಶ್ನೆ
3.20 ಲಕ್ಷದ ಪ್ರಶ್ನೆ ಇದೇ
2018ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಎಚ್ ಡಿ ಕುಮಾರಸ್ವಾಮಿ ಅವರು ರಾಮನಗರ ಕ್ಷೇತ್ರದ ಜೊತೆಯಲ್ಲಿ ಸ್ಪರ್ಧಿಸಿದ್ದ ಇನ್ನೊಂದು ಕ್ಷೇತ್ರ ಯಾವುದು.?
A
ಮಂಡ್ಯ
B
ಚೆನ್ನಪಟ್ಟಣ
C
ಹೊಳೇನರಸಿಪುರ
D
ಹಾಸನ
ಹರ್ಷಿತ್ ಗೆ ಸಹಾಯ ಮಾಡಿದ್ದು 'ಫೋನ್ ಎ ಫ್ರೆಂಡ್'
ಈ ಪ್ರಶ್ನೆಗೆ ಉತ್ತರ ಕೊಡಲು ಹರ್ಷಿತ್ ಸ್ವಲ್ಪ ಕಷ್ಟಪಟ್ಟರು. ಯಾಕಂದ್ರೆ, ಅವರಿಗೆ ಉತ್ತರ ಗೊತ್ತಿರಲಿಲ್ಲ. ನಂತರ ಫೋನ್ ಎ ಫ್ರೆಂಡ್ ಲೈಫ್ ಲೈನ್ ಬಳಸಿಕೊಂಡರು. ಸ್ವರ ಸ್ನೇಹಿತ ಸರಿಯಾದ ಉತ್ತರ ನೀಡಿದರು.
ಸರಿಯಾದ ಉತ್ತರ: B ಚೆನ್ನಪಟ್ಟಣ
'ಕೋಟ್ಯಧಿಪತಿ'ಯ 6 ಲಕ್ಷದ ಪ್ರಶ್ನೆಯಲ್ಲಿ ಎಡವಿದ ಮಂಜುನಾಥ್, ಯಾವುದು ಆ ಪ್ರಶ್ನೆ.?
'ಫಾಸ್ಟೆಸ್ಟ್ ಫಿಂಗರ್ ಫಸ್ಟ್' ಪ್ರಶ್ನೆ
ಮೊದಲಿನಿಂದ ಆರಂಭಿಸಿ ಭಾರತದ ಇತಿಹಾಸದ ಈ ಪ್ರಮುಖ ಘಟ್ಟಗಳನ್ನ ಕಾಲಾನುಕ್ರಮವಾಗಿ ಜೋಡಿಸಿ.?
A
ದಂಡಿಯಾತ್ರೆ
B
ಕ್ವಿಟ್
ಇಂಡಿಯಾ
ಚಳುವಳಿ
C
ಗಾಂಧಿಜೀಯವರು
ಜನನ
D
ಭಾರತದ
ಮೊದಲ
ಸಾರ್ವತಿಕ
ಚುನಾವಣೆ
ಕರೆಕ್ಟ್ ಉತ್ತರ ಕೊಟ್ಟಿದ್ದು ಇವರೇ
'ಫಾಸ್ಟೆಸ್ಟ್ ಫಿಂಗರ್ ಫಸ್ಟ್' ಪ್ರಶ್ನೆಗೆ ಸರಿಯಾಗಿ ಮತ್ತು ವೇಗವಾಗಿ ಉತ್ತರ ಕೊಟ್ಟಿದ್ದು, ಸುದರ್ಶನ್.
C
ಗಾಂಧಿಜೀಯವರು
ಜನನ
A
ದಂಡಿಯಾತ್ರೆ
B
ಕ್ವಿಟ್
ಇಂಡಿಯಾ
ಚಳುವಳಿ
D
ಭಾರತದ
ಮೊದಲ
ಸಾರ್ವತಿಕ
ಚುನಾವಣೆ
ಆದ್ರೆ,
ಕೇವಲ
ಎರಡು
ಪ್ರಶ್ನೆಗೆ
ಉತ್ತರ
ಕೊಟ್ಟ
ಸುದರ್ಶನ್
ಮೂರನೇ
ಪ್ರಶ್ನೆಗೆ
ಉತ್ತರ
ಕೊಡದೇ
ಆಟದಿಂದ
ವಾಪಸ್
ಆದರು.
ಮುಂದಿನ ಸ್ಪರ್ಧಿ
ಇದಾದ ನಂತರ ಮತ್ತೊಂದು ಸಲ ಫಾಸ್ಟೆಸ್ಟ್ ಫಿಂಗರ್ ಫಸ್ಟ್ ಪ್ರಶ್ನೆ ಕೇಳಲಾಯಿತು. ಈ ಚಲನಚಿತ್ರಗಳನ್ನ ಅವುಗಳ ಶೀರ್ಷಿಕೆಯಲ್ಲಿರುವ ಸಂಖ್ಯೆಗಳ ಅನುಸಾರವಾಗಿ ಏರಿಕೆ ಕ್ರಮದಲ್ಲಿ ಜೋಡಿಸಿ.?
A
ಸಾವಿರ
ಮೆಟ್ಟಿಲು
B
ಎರಡು
ಕನಸು
C
ತ್ರಿಮೂರ್ತಿ
D
ನೂರೊಂದು
ನೆನಪು
ಸರಿಯಾದ
ಉತ್ತರ
BCDA,
ಕೊಟ್ಟವರು
ಅರುಣಾ.