Don't Miss!
- News India Rain: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರೀ ಮಳೆ, ಹಿಮಪಾತ ಸಾಧ್ಯತೆ: ಭಾರತದ ಈ ಭಾಗದಲ್ಲಿ ತಂಪೆರೆಯಲಿರುವ ವರುಣ
- Finance ಸಂಸ್ಥೆಯ ಎಲ್ಲ 30,000 ಉದ್ಯೋಗಿಗಳಿಗೆ ವರ್ಕ್ ಫಮ್ ಹೋಂ ನೀಡಿದ ಟೆಕ್ ಕಂಪೆನಿ
- Technology Earbuds: 2000 ರೂ. ಒಳಗೆ ಲಭ್ಯ ಇರುವ ಅತ್ಯುತ್ತಮ ಇಯರ್ಬಡ್ಸ್! ಸಖತ್ ಫೀಚರ್ಸ್...
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪತ್ನಿ-ಸೊಸೆ ಮೇಲೆ ಆಸಿಡ್ ದಾಳಿ: ದೇಶದ ಜನತೆಗೆ ಗೊತ್ತಿಲ್ಲದ ಸತ್ಯ ಹೇಳಿದ ದೇವೇಗೌಡ.!
ಅದು ಫೆಬ್ರವರಿ 21, 2001... ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನಲ್ಲಿ ಇರುವ ಈಶ್ವರ ದೇವಸ್ಥಾನದಲ್ಲಿ ಪೂಜೆ ಮುಗಿಸಿಕೊಂಡು ಬರುವಾಗ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಪತ್ನಿ ಚನ್ನಮ್ಮ ಹಾಗೂ ಸೊಸೆ ಭವಾನಿ (ಎಚ್.ಡಿ.ರೇವಣ್ಣ ಪತ್ನಿ) ಮೇಲೆ ಆಸಿಡ್ ದಾಳಿ ನಡೆಯಿತು.
ಎಚ್.ಡಿ.ದೇವೇಗೌಡ ರವರ ತಮ್ಮನ ಮಗನೇ ಆಸಿಡ್ ಎರಚಿದ್ದರಿಂದ, ಕೌಟುಂಬಿಕ ವೈಷಮ್ಯವೇ ಈ ಆಸಿಡ್ ದಾಳಿಗೆ ಕಾರಣ ಎಂಬ ವರದಿಗಳು ದಿನಪತ್ರಿಕೆಗಳಲ್ಲಿ ವರದಿ ಆದವು. ಆದ್ರೆ, ಇದರ ಹಿಂದೆ ರಾಜಕೀಯ ಮುಖಂಡರ ಪ್ರೇರಣೆ ಇತ್ತು ಎಂದು ಎಚ್.ಡಿ.ದೇವೇಗೌಡ ಬಾಯಿಬಿಟ್ಟಿದ್ದಾರೆ.
ಆಸಿಡ್ ಎರಚಿದ ಪ್ರಕರಣದಲ್ಲಿ ಲೋಕೇಶ್ (ಎಚ್.ಡಿ.ದೇವೇಗೌಡ ತಮ್ಮನ ಮಗ) ಅಪರಾಧಿ ಎಂದು ಸಾಬೀತಾಗಿ ನ್ಯಾಯಾಲಯ ಎಂಟು ವರ್ಷ ಜೈಲು ಶಿಕ್ಷೆ ವಿಧಿಸಿತು. ಇನ್ನೂ ನಾಲ್ಕುವರೆ ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗಿದ್ದರೂ, ತಮ್ಮನ ಆರೋಗ್ಯ ಸ್ಥಿತಿ ಕಂಡು ಹೈಕೋರ್ಟ್ ನ್ಯಾಯಮೂರ್ತಿ ರವರ ಬಳಿ ಮನವಿ ಮಾಡಿ ಲೋಕೇಶ್ ರನ್ನ ಎಚ್.ಡಿ.ದೇವೇಗೌಡ ಬಿಡುಗಡೆ ಮಾಡಿಸಿದರಂತೆ.
ದೇಶದ ಜನತೆಗೆ ಗೊತ್ತಿಲ್ಲದ ಈ ವಿಚಾರವನ್ನ ಎಚ್.ಡಿ.ದೇವೇಗೌಡ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆದ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಜಗಜ್ಜಾಹೀರುಗೊಳಿಸಿದರು. ಮುಂದೆ ಓದಿರಿ...
ಪತ್ನಿ ಚನ್ನಮ್ಮ ಬಗ್ಗೆ ಎಚ್.ಡಿ.ದೇವೇಗೌಡ ಮನದಾಳ
''ಮದುವೆ ಮಾಡಿಕೊಂಡ ಮೇಲೆ ನಾನು ಇಷ್ಟು ಎತ್ತರಕ್ಕೆ ಬಂದಿದ್ರೆ, ನನ್ನ ಪತ್ನಿಯ ಸಹಕಾರ ಕಾರಣ'' ಎಂದು ಪತ್ನಿ ಚನ್ನಮ್ಮ ಬಗ್ಗೆ ಮಾತನಾಡಲು ಆರಂಭಿಸಿದ ಎಚ್.ಡಿ.ದೇವೇಗೌಡ 'ಆಸಿಡ್ ದಾಳಿ' ಪ್ರಕರಣದ ಬಗ್ಗೆಯೂ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಮಾತನಾಡಿದರು.
ತಮ್ಮನ ಮಗನೇ ಆಸಿಡ್ ಹಾಕಿದ್ದು.!
''ನನ್ನ ತಮ್ಮನ ಮಗನೇ ಆಸಿಡ್ ಹಾಕಿದ್ದು. ಅದಕ್ಕೆ ರಾಜಕೀಯ ಮುಖಂಡರ ಪ್ರೇರಣೆ ಇತ್ತು'' ಎಂದು 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಎಚ್.ಡಿ.ದೇವೇಗೌಡ ಹೇಳಿದರು.
ಮಗನ ಮೇಲೆ ಆಸಿಡ್ ಹಾಕಬೇಕಿತ್ತು
''ನನ್ನ ಮಗನ ಮೇಲೆ (ಎಚ್.ಡಿ.ರೇವಣ್ಣ) ಮೇಲೆ ಆಸಿಡ್ ಹಾಕಬೇಕು ಎಂದು ಪ್ಲಾನ್ ಮಾಡಿದ್ದರು. ನಾವೆಲ್ಲ ಮಹಾದೇಶ್ವರ ಬೆಟ್ಟಕ್ಕೆ ಹೋದಾಗ ಎಚ್.ಡಿ.ರೇವಣ್ಣ ಬಂದಿರಲಿಲ್ಲ. ನನ್ನ ಪತ್ನಿ ಹಾಗೂ ಸೊಸೆ ಮೇಲೆ ಆಸಿಡ್ ಅಟ್ಯಾಕ್ ಆಯ್ತು'' - ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ.
ದೇಶದ ಜನತೆಗೆ ಗೊತ್ತಿಲ್ಲದ ವಿಷಯ ಇದು
''ದೇಶದ ಜನಕ್ಕೆ ಗೊತ್ತಿಲ್ಲ ಇದು. ಆ ಹುಡುಗ ಅಪರಾಧಿ ಎಂದು ಪ್ರೂವ್ ಆಯ್ತು. ನನ್ನ ತಮ್ಮನಿಗೆ ಕ್ಯಾನ್ಸರ್ ಇತ್ತು. ಆರು ವರ್ಷ ಬದುಕಬಹುದಿತ್ತು. ಹೈಕೋರ್ಟ್ ನಲ್ಲಿ ಒಬ್ಬರು ಜಡ್ಜ್ ಇದ್ದರು. ಅವರಿಗೆ ನಾನು ಫೋನ್ ಮಾಡಿದೆ. ''ನನ್ನ ತಮ್ಮ ಸಾಯುತ್ತಾನೆ, ಮಗನನ್ನು ಬಿಟ್ಟುಬಿಡಿ'' ಎಂದು ಕೇಳಿಕೊಂಡೆ. ಇನ್ನೂ ನಾಲ್ಕು ವರ್ಷ ಅವನು ಜೈಲಿನಲ್ಲಿ ಇರಬೇಕಿತ್ತು'' - ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ.
ತಮ್ಮನ ಮಗನನ್ನು ಬಿಡಿಸಿದ ಎಚ್.ಡಿ.ಡಿ
''ಮಾಜಿ ಪ್ರಧಾನಿ ಪತ್ನಿ ಮೇಲೆ ಆಸಿಡ್ ದಾಳಿ ನಡೆದಿದೆ. ಅಪರಾಧಿಗೆ ಜೀವಾವಧಿ ಶಿಕ್ಷೆ, ಗಲ್ಲಿಗೆ ಏರಿಸಬೇಕು ಎಂದು ಚರ್ಚೆ ನಡೆಯುತ್ತಿದೆ. ನೀವು ನೋಡಿದರೆ ಬಿಡುಗಡೆ ಮಾಡಿ ಎನ್ನುತ್ತಿದ್ದೀರಲ್ಲ'' ಎಂದು ಹೈಕೋರ್ಟ್ ಜಡ್ಜ್ ಕೇಳಿದರು. ಅದಕ್ಕೆ ನಾನು, ''ನನ್ನ ತಮ್ಮ ಸಾಯುತ್ತಾನೆ, ಬೇಡ'' ಎಂದು ಹೇಳಿ ಬಿಡಿಸಿದೆ'' - ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ.
ಪತ್ನಿಗೆ ಬೇಸರ ಆಗಲಿಲ್ಲ
''ಇದಕ್ಕೆ ನನ್ನ ಹೆಂಡತಿ ಬೇಸರ ಮಾಡಿಕೊಳ್ಳಲಿಲ್ಲ. ಅವಳಿಗೆ ಎಲ್ಲವೂ ಗೊತ್ತಿತ್ತು. ಆಕೆಯ ಸ್ವಭಾವ ಹೇಗೆ ಅಂದ್ರೆ, ನಾನು ಬರುವವರೆಗೂ ಆಕೆ ಊಟ ಮಾಡುವುದಿಲ್ಲ'' - ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ.
ಎರಡು ತಿಂಗಳು ಪ್ರಜ್ಞೆ ಇರಲಿಲ್ಲ
''ಆಸಿಡ್ ದಾಳಿ ನಡೆದಾಗ, ನನಗೆ ಎರಡು ತಿಂಗಳು ಪ್ರಜ್ಞೆ ಇರಲಿಲ್ಲ. ಆಗ ಅವರು ತುಂಬಾ ಬೇಜಾರು ಮಾಡಿಕೊಂಡು ಅಳುತ್ತಿದ್ದರು'' ಎಂದು ಹಳೆ ಘಟನೆಯನ್ನು ನೆನಪಿಸಿಕೊಂಡರು ಎಚ್.ಡಿ.ದೇವೇಗೌಡ ಪತ್ನಿ ಚನ್ನಮ್ಮ.