Don't Miss!
- Technology Itel: ಐಟೆಲ್ ಸೂಪರ್ ಗುರು 4G ಫೋನ್ ಲಾಂಚ್! ಯುಪಿಐ ಬೆಂಬಲ
- News ರಜನಿಕಾಂತ್, ವಿಜಯ್ ಸೇತುಪಥಿ, ಧನುಷ್.. ಯಾರೆಲ್ಲಾ ವೋಟ್ ಹಾಕಿದ್ರು?
- Lifestyle ಸ್ವತಂತ್ರ ಭಾರತದ ಮೊದಲ ಮತದಾರನಿಲ್ಲದ ಮೊದಲ ಚುನಾವಣೆ ಇದು..! ಯಾರು ಈ ಮತದಾರ ಗೊತ್ತಾ?
- Automobiles Elevate: ಶ್ರೀಸಾಮಾನ್ಯನ ಬಿಎಂಡಬ್ಲ್ಯೂ.. ಹೋಂಡಾ ಎಲಿವೇಟ್ ಖರೀದಿಸಬೇಕೇ? ಆನ್-ರೋಡ್ ಬೆಲೆ ಎಷ್ಟು, EMI ಏನು?
- Finance ಆಪ್ ಸ್ಟೋರ್ನಿಂದ ವಾಟ್ಸಾಪ್, ಥ್ರೆಡ್ ತೆಗೆದುಹಾಕಿದ ಆಪಲ್!
- Sports IPL 2024: ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದರೂ ಹಾರ್ದಿಕ್ ಪಾಂಡ್ಯಗೆ ಭಾರೀ ಮೊತ್ತದ ದಂಡ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶಿವಣ್ಣ, ಪುನೀತ್ ಗೆ ಸುದೀಪ್ ಕೊಟ್ಟಿರುವ ಸಲಹೆ ಏನ್ಗೊತ್ತಾ.?
Recommended Video
ಸ್ಯಾಂಡಲ್ ವುಡ್ ನ ದಿ ಬಿಸಿಯೆಸ್ಟ್ ಹೀರೋ ಯಾರು ಅಂತ ಕೇಳಿದರೆ, ಬಹುತೇಕರಿಂದ ಬರುವ ಉತ್ತರ 'ಶಿವರಾಜ್ ಕುಮಾರ್'!
ವಯಸ್ಸಿನಲ್ಲಿ ಹಾಫ್ ಸೆಂಚುರಿ ಬಾರಿಸಿದರೂ, ಶಿವಣ್ಣನ ಎನರ್ಜಿ ಕೊಂಚ ಕೂಡ ಕಮ್ಮಿ ಆಗಿಲ್ಲ. ವರ್ಷಪೂರ್ತಿ ಸಿನಿಮಾಗಳಲ್ಲಿ ಬಿಜಿಯಾಗಿರುವ ಶಿವಣ್ಣನ ಕಾಲ್ ಶೀಟ್ ಪಡೆಯಲು ಈಗಲೂ ನಿರ್ಮಾಪಕರು ಕ್ಯೂನಲ್ಲಿದ್ದಾರೆ.
ಇಂತಿಪ್ಪ ಶಿವಣ್ಣನಿಗೆ ಕಿಚ್ಚ ಸುದೀಪ್ ಒಂದು ಸಲಹೆ ಕೊಟ್ಟಿದ್ದಾರೆ. ಶಿವಣ್ಣನಿಗೆ ಮಾತ್ರ ಅಲ್ಲ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ರಕ್ಷಿತ್ ಶೆಟ್ಟಿಗೂ ಒಂದು ಅಡ್ವೈಸ್ ಕೊಟ್ಟಿದ್ದಾರೆ. ಅದೇನು ಅಂತ ತಿಳಿಯಲು ಫೋಟೋ ಸ್ಲೈಡ್ ಗಳಲ್ಲಿ ಓದಿರಿ...
ಅತಿಥಿಯಾಗಿ ಬಂದಿದ್ದ ಸುದೀಪ್
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಕಿಚ್ಚ ಸುದೀಪ್ ಹಾಗೂ ಪ್ರೇಮ್ ಭಾಗವಹಿಸಿದ್ದರು. ಈ ವೇಳೆ ಕಾರ್ಯಕ್ರಮದ Rapid ಫೈಯರ್ ರೌಂಡ್ ನಲ್ಲಿ ಸುದೀಪ್ ಗೆ ಒಂದು ಪ್ರಶ್ನೆ ಎದುರಾಯ್ತು. ಅದರ ಅನುಸಾರ ಹೀರೋಗಳಿಗೆ ನಿರ್ದೇಶಕರಾಗಿ ಸುದೀಪ್ ಸಲಹೆಗಳನ್ನು ನೀಡಿದರು.
ಸುದೀಪ್ ಆಡಿದ ಮಾತಿಗೆ ಚಪ್ಪಾಳೆ ಹೊಡೆದ ಶಿವಣ್ಣ.! ಏನಂಥ ಮಾತು.?
ಸುದೀಪ್ ಎದುರಾದ ಪ್ರಶ್ನೆ ಏನು.?
''ಈ ಹೀರೋಗಳಿಗೆ ನೀವು ಡೈರೆಕ್ಟರ್ ಆಗಿ ಒಂದು ಸಲಹೆ ಕೊಡಿ'' ಎಂದು ''ರಕ್ಷಿತ್ ಶೆಟ್ಟಿ, ದಿಗಂತ್, ಪುನೀತ್ ರಾಜ್ ಕುಮಾರ್, ಉಪೇಂದ್ರ, ಯೋಗಿ, ಗಣೇಶ್, ಶಿವಣ್ಣ ಹಾಗೂ ದರ್ಶನ್'' ಹೆಸರುಗಳನ್ನ ಶಿವರಾಜ್ ಕುಮಾರ್ ಮುಂದಿಟ್ಟರು.
ಈ ನಟಿಯ ಮೇಲೆ ಕಿಚ್ಚ ಸುದೀಪ್ ಗೆ ಕ್ರಶ್ ಆಗಿತ್ತು.! ಯಾರದು.?
ರಕ್ಷಿತ್ ಶೆಟ್ಟಿಗೆ ಸುದೀಪ್ ಕೊಟ್ಟಿರುವ ಸಲಹೆ
''ರಕ್ಷಿತ್ ಶೆಟ್ಟಿ ತುಂಬಾ ಫ್ರೆಂಡ್ಲಿ. ''ನೀವೇನು ಹೇಳಲು ಹೊರಟಿದ್ದೀರೋ, ಅದನ್ನ ಸ್ವಲ್ಪ ಕಮರ್ಶಿಯಲ್ ಆಗಿ ಹೇಳಿ. ಇದು ನಾನು ಕಲಿತಿರುವ ಪಾಠ'' ಅಂತ ರಕ್ಷಿತ್ ಗೆ ನಾನು ಸುಮಾರು ಬಾರಿ ಹೇಳಿದ್ದೇನೆ. ನನ್ನ ಮಾತನ್ನ ಅವರು ಎಲ್ಲೋ ಒಂದು ಚೂರು ಕೇಳಿಸಿಕೊಂಡರು. ಅದೇ ಖುಷಿ ನನಗೆ'' ಎಂದರು ನಟ ಸುದೀಪ್
'ಕಲಿ' ಚಿತ್ರ ನಿಂತು ಹೋಗಿದ್ಯಾಕೆ.? ಕಡೆಗೂ ಸತ್ಯ ಬಾಯ್ಬಿಟ್ಟ ಕಿಚ್ಚ ಸುದೀಪ್.!
ದಿಗಂತ್ ಗೆ ಸಿಕ್ಕಿರುವ ಸಲಹೆ ಇದು
''ಲೈಫ್ ನಲ್ಲಿ ಸ್ವಲ್ಪ ಕಮರ್ಶಿಯಲ್ ಆಗಬೇಕು. ತುಂಬಾ ಒಳ್ಳೆಯ ಹುಡುಗ ದಿಗಂತ್'' - ಸುದೀಪ್
ಪುನೀತ್ ಗೆ ಸುದೀಪ್ ಕೊಟ್ಟ ಸಲಹೆ ಏನು.?
''ಪುನೀತ್ ಅವರು ತಮ್ಮ ಕೆಪಾಸಿಟಿಗೆ ತಕ್ಕ ಸ್ಕ್ರಿಪ್ಟ್ ಗಳನ್ನು ಅಯ್ಕೆ ಮಾಡಿಕೊಳ್ಳಬೇಕು'' ಅಂತಾರೆ ಸುದೀಪ್.
ಉಪೇಂದ್ರಗೆ ಈ ಸಲಹೆ
''ಉಪೇಂದ್ರ ಅವರು ಹೇಳಿದ್ದನ್ನ, ಸಲಹೆ ಕೊಡುವುದನ್ನ ಫಾಲೋ ಮಾಡುವುದು ಕಲಿಯಬೇಕು'' ಅಂತ ಹೇಳ್ತಾರೆ ನಟ ಸುದೀಪ್.
ಯೋಗಿ ಸೀರಿಯಸ್ ಆಗಬೇಕು
''ಕೆರಿಯರ್ ನಲ್ಲಿ ಯೋಗಿ ಸ್ವಲ್ಪ ಸೀರಿಯಸ್ ಆಗಬೇಕು. ಇನ್ನೂ ಗಣೇಶ್ ನನಗೆ ಇಷ್ಟವಾದ ಕಲಾವಿದರಲ್ಲಿ ಒಬ್ಬರು. ಅವರು ಇನ್ನೂ ಸ್ವಲ್ಪ ಪ್ರಯೋಗ ಮಾಡಬೇಕು'' - ಸುದೀಪ್
ದರ್ಶನ್ ಬಗ್ಗೆ ಸುದೀಪ್ ಕಾಮೆಂಟ್
''ದರ್ಶನ್ ಅವರ ಕಾಮಿಡಿ ಟೈಮಿಂಗ್ ತುಂಬಾ ಚೆನ್ನಾಗಿದೆ. ದರ್ಶನ್ ಸಿನಿಮಾಗಳಲ್ಲಿ ತುಂಬಾ ಹೀರೋಯಿಸಂ ಇರುತ್ತದೆ ಅಂತ ಎಲ್ಲರೂ ಅಂದುಕೊಳ್ಳುತ್ತಾರೆ. ಆದ್ರೆ, ದರ್ಶನ್ ರವರ ಹಿಟ್ ಸಿನಿಮಾಗಳನ್ನ ನೀವು ಸೂಕ್ಷ್ಮವಾಗಿ ಗಮನಿಸಿದರೆ, ಕಾಮಿಡಿ ಇರುವ ಚಿತ್ರಗಳೇ ಹಿಟ್ ಆಗಿದೆ. ಹೀಗಾಗಿ ಅದರ ಬಗ್ಗೆ ಅವರು ಹೆಚ್ಚು ಗಮನ ಹರಿಸಬೇಕು'' ಎಂಬುದು ಸುದೀಪ್ ರವರ ಸಲಹೆ
ಶಿವಣ್ಣ ನೀವ್ ಹೀಗ್ ಮಾಡಿ...
''ಟೈಟಲ್ ಕೇಳುತ್ತಿದ್ದ ಹಾಗೆ, ಡೇಟ್ ಕೊಡುವುದನ್ನ ನಿಲ್ಲಸಬೇಕು'' ಅಂತ ಶಿವಣ್ಣನಿಗೆ ನೇರವಾಗಿ ಹೇಳಿದರು ಸುದೀಪ್.