Don't Miss!
- Sports Hardik Pandya: ಹಾರ್ದಿಕ್ ಪಾಂಡ್ಯರಲ್ಲಿನ ನಾಯಕತ್ವದ ಗುಣಗಳು ಕಾಣೆಯಾಗಿವೆಯಾ?
- Finance ಕಳೆದ 5 ವರ್ಷಗಳಲ್ಲಿ ಸಂಸದ ಡಿಕೆ ಸುರೇಶ್ ಅವರ ಆಸ್ತಿ 75% ರಷ್ಟು ಹೆಚ್ಚಳ, ವಿವರ
- Technology ಬಿಎಸ್ಎನ್ಎಲ್ ಗ್ರಾಹಕರಿಗೆ ಸಿಹಿಸುದ್ದಿ!..ಬಜೆಟ್ ದರದಲ್ಲಿ ಹೊಸ ಪ್ಲ್ಯಾನ್ ಲಾಂಚ್!
- News Gold Price: ಇಂದು ಮತ್ತಷ್ಟು ಹೆಚ್ಚಾದ ಬಂಗಾರದ ಬೆಲೆ: ಬೆಳ್ಳಿಯೂ ಬಲು ದುಬಾರಿ
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹಿಟ್ಲರ್ ಕಲ್ಯಾಣ: ಮತ್ತೆ ಮತ್ತೆ ಎಜೆಗೆ ಮಂಕು ಮಾಡುತ್ತಿದ್ದಾನೆ ದೇವ್: ಎಚ್ಚೆತ್ತುಕೊಳ್ಳುವುದು ಯಾವಾಗ..?
'ಹಿಟ್ಲರ್ ಕಲ್ಯಾಣ'ದಲ್ಲಿ ದೇವ್ ಇನ್ನೇನು ಸಿಕ್ಕಿಬೀಳ್ತಾನೆ ಎಂಬ ಆಶಾ ಭಾವನೆಯಿಂದ ಎಲ್ಲರು ಕಾಯುತ್ತಿದ್ದಾರೆ. ಆದರೆ ಪಾಪಿ ಚಿರಾಯು ಅಂತಾರಲ್ಲ ಹಾಗೆ ದೇವ್ ಯಾವಾಗಲೂ ಎಲ್ಲಾ ಸಮಸ್ಯೆಗಳಿಂದಲೂ ಪಾರಾಗುತ್ತಿದ್ದಾನೆ. ಎಲ್ಲದರಲ್ಲೂ ಪರ್ಫೆಕ್ಟ್ ಆಗಿರುವ ಎಜೆ ಅದ್ಯಾಕೆ ದೇವ್ ಬಗ್ಗೆ ಅನುಮಾನ ಪಡುತ್ತಿಲ್ಲ ಬೇಸರ ನೋಡುಗರನ್ನು ಕಾಡುತ್ತಿದೆ. ಯಾವಾಗ ದೇವ್ ಸಿಕ್ಕಿಬೀಳುತ್ತಾನೆ, ಸಿಕ್ಕಿ ಬಿದ್ದಾಗ ಶಿಕ್ಷೆ ಯಾವ ರೀತಿ ಇರುತ್ತದೆ ಎಂಬ ಕುತೂಹಲವೂ ಹಲವರಲ್ಲಿದೆ.
ಸದ್ಯ ಪವಿತ್ರಾಳನ್ನು ಪ್ರೀತಿಸುತ್ತಿದ್ದೀನಿ. ಅವಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದೀನಿ ಅಂತ ನಾಟಕವಾಡುತ್ತಿದ್ದಾನೆ. ಅತ್ತ ಲೀಲಾ ಬಳಿಯೂ ಕೆಟ್ಟದಾಗಿ ನಡೆದುಕೊಂಡರೂ, ಒಂದೇ ಒಂದು ಸಾಕ್ಷಿ ಬಿಡುತ್ತಿಲ್ಲ. ಬದಲಿಗೆ ಲೀಲಾಳನ್ನೇ ತಪ್ಪಿತಸ್ಥಳೆಂದು ಪ್ರೂವ್ ಮಾಡುತ್ತಿದ್ದಾನೆ. ಹೀಗಾಗಿ ದೇವ್ ಮುಟ್ಟಿದ್ದೆಲ್ಲಾ ಚಿನ್ನ ಎಂಬಂತಾಗಿದೆ.
ಟಿವಿಯಲ್ಲಿ 'ಕೆಜಿಎಫ್ 2' ಪ್ರಸಾರ: 80 ಅಡಿ ಬ್ಯಾನರ್ ಬಿಟ್ಟು ಭರ್ಜರಿ ಪ್ರಚಾರ!
ದೇವ್ ಅದೃಷ್ಟ ಚೆನ್ನಾಗಿದೆ
ಕೆಲವೊಂದಿಷ್ಟು ಜನರ ಗ್ರಹಚಾರ ಚೆನ್ನಾಗಿದ್ದರೆ ಮುಟ್ಟಿದ್ದೆಲ್ಲವೂ ಚಿನ್ನ ಆಗುತ್ತೆ. ಮಾಡಿದ್ದೆಲ್ಲವೂ ಸರಿಯೇ ಆಗುತ್ತೆ. ದೇವ್ ಈಗ ಆ ಸ್ಥಿತಿಯಲ್ಲಿದ್ದಾನೆ. ರೇವತಿಯ ಮನಸ್ಸನ್ನು ಮತ್ತೆ ಹಾಳು ಮಾಡುತ್ತಿದ್ದಾನೆ. ಫೋನ್ ಮಾಡಿ ಮಸ್ಕಾ ಹೊಡೆಯುತ್ತಿದ್ದಾನೆ. ಇದೇ ಸಮಯಕ್ಕೆ ಎಜೆ ಅಲ್ಲಿಗೆ ಬಂದಿದ್ದಾರೆ. ನಾನು ಮಾತಾಡಿದ್ದೆಲ್ಲವನ್ನು ಕೇಳಿಸಿಕೊಂಡು ಬಿಟ್ಟರಲ್ಲ ಎಂಬ ಭಯ ದೇವ್ನನ್ನು ಕಾಡಿದೆ. ಅದರೆ ಎಜೆಗೆ ಕೇಕ್ ಬಗ್ಗೆ ಅಷ್ಟೇ ಕೇಳಿಸಿದೆ. ಹೀಗಾಗಿ ಏನೇನೋ ಹೇಳಿ ಮತ್ತೆ ತಪ್ಪಿಸಿಕೊಂಡಿದ್ದಾನೆ.
ನಾಟಕಗಳಲ್ಲಿಯೇ ಮುಳುಗಿದ್ದಾನೆ ದೇವ್
ದೇವ್ ಆಡುವ ನಾಟಕಗಳಿಗೆ ಕೊನೆಯೇ ಇಲ್ಲ ಎಂಬಂತಾಗಿದೆ. ಕೇಕ್ ಶಬ್ದ ಕೇಳಿಸಿಕೊಂಡೆ ಎಂದು ಎಜೆ ಹೇಳಿದಾಕ್ಷಣಾ ಪವಿತ್ರಾಳನ್ನು ದಾಳವಾಗಿ ಬಳಸಿಕೊಂಡಿದ್ದಾನೆ. ಪವಿತ್ರಾ ಹುಟ್ಟುಹಬ್ಬ ಅದಕ್ಕಾಗಿ ಕೇಕ್ ಆರ್ಡರ್ ಮಾಡುತ್ತಿದ್ದೆ ಎಂದಿದ್ದಾನೆ. ಎಜೆ ಅದನ್ನು ನಂಬಿದ್ದಾರೆ. ಯಾವತ್ತು ಹುಟ್ಟಿದ ಹಬ್ಬ ಎಂದಾಗ ಮೂರು ದಿನಗಳ ಬಳಿಕ ಎಂದಿದ್ದಾನೆ. ಬರ್ತ್ ಡೇ ನೆನಪಿರಲ್ಲ ಅಂತ ಡಿವೋರ್ಸ್ ಆಗುವ ಕಾಲವಿದು. ಅಂತದ್ರಲ್ಲಿ ಇಷ್ಟು ಪ್ರೀತಿಯಿಂದ ಮೊದಲೇ ಹುಟ್ಟುಹಬ್ಬ ನೆನಪಿಟ್ಟುಕೊಂಡಿದ್ದಿಯಲ್ಲ ಎಂದು ಎಜೆ ಖುಷಿಪಟ್ಟು ಹೋಗಿದ್ದಾರೆ.
ರೇವತಿ-ಲೀಲಾ ಒಂದಾಗುತ್ತಾರಾ?
ರೇವತಿ ಅಂದು ಮನೆ ಬಿಟ್ಟು ದೇವ್ ಜೊತೆ ಮದುವೆಯಾಗಲು ಹೊರಟಿದ್ದಳು. ಇದು ಲೀಲಾಳಿಗೆ ಗೊತ್ತಾದ ಮೇಲೆ ಅದನ್ನು ತಪ್ಪು ಎಂದು ಹೇಳಿ, ಎಜೆ ಮುಂದೆ ಪ್ರೂವ್ ಮಾಡಲು ಹೋದಳು. ಆದರೆ ರೇವತಿ ಅಕ್ಕನಿಗಿಂತ ಹೆಚ್ಚಾಗಿ ದೇವ್ಗೆ ಪ್ರಾಶಸ್ತ್ಯ ನೀಡಿದಳು. ಫ್ರೆಂಡ್ನ ಭೇಟಿ ಮಾಡಲು ಹೋಗಿದ್ದೆ ಎಂದಳು. ಆಗ ಎಲ್ಲರ ಮುಂದೆ ಲೀಲಾ ತಪ್ಪಿತಸ್ಥಳಾಗಿದ್ದಳು. ಅಂದು ಬೇಸರದಲ್ಲಿಯೇ ನೀನ್ ಜೀವನ ನೀನು ನೋಡಿಕೋ ನನ್ನ ಜೀವನ ನಾನು ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದಳು. ಆದರೆ ರೇವತಿಗೆ ಅಕ್ಕನ ನೆನಪು ತುಂಬಾ ಕಾಡುತ್ತಿದೆ. ಮತ್ತೆ ಮಾತಾಡಿಸಬೇಕು ಎಂಬ ಮನಸ್ಸು ಬಯಸುತ್ತಿದೆ. ಅದನ್ನೇ ದೇವ್ ಬಳಿ ಹೇಳುತ್ತಿದ್ದಾಳೆ.
ರಾಮ್-ಲೀಲಾಗೆ ಅಜ್ಜಿ ಕಂಡೀಷನ್
ರಾಮ್ ಮತ್ತು ಲೀಲಾ ಸಂಸಾರ ಹೇಳಿಕೊಳ್ಳುವಷ್ಟರ ಮಟ್ಟಿಗೆ ಸರಿಯಿಲ್ಲ. ಹಾಗಂತ ಅಜ್ಜಿ ಅದನ್ನು ಅಲ್ಲಿಗೆ ಬಿಡುವುದಿಲ್ಲ. ಸರಿ ಮಾಡುವುದಕ್ಕೆ ಎಲ್ಲಾ ರೀತಿಯ ತಯಾರಿ ಮಾಡುತ್ತಿರುತ್ತಾರೆ. ಇದೀಗ ವರಮಹಾಲಕ್ಷ್ಮೀ ಹಬ್ಬದಂದು ಸ್ಪೆಷಲ್ ಮನವಿ ಮಾಡಿದ್ದಾರೆ. ಸಂಕಲ್ಪ ಮಾಡಿಕೊಂಡಿದ್ದಾರೆ. ಮುಂದಿನ ವರ್ಷದ ಹಬ್ಬದೊಳಗೆ ಮನೆಯಲ್ಲಿ ಮಗುವಿನ ಸದ್ದು ಕೇಳಬೇಕು ಎಂದು ರಾಮ್ - ಲೀಲಾ ಬಳಿ ಒಪ್ಪಿಗೆಯನ್ನು ಪಡೆದಾಗಿದೆ. ಅಮ್ಮನ ಆಸೆಯನ್ನು ಈಡೇರಿಸುತ್ತೀನಿ ಅಂತ ರಾಮ್ ಏನೋ ಹೇಳಿದ್ದಾರೆ. ಆದರೆ ಲೀಲಾಗೆ ಅದೇ ಭಯ.