Don't Miss!
- News ರಾಜ್ಯದ ವಿವಿಧೆಡೆ ಮಳೆರಾಯನ ಆರ್ಭಟ; ಕರ್ನಾಟಕದ ಪ್ರಮುಖ ಡ್ಯಾಂಗಳ ನೀರಿನ ಮಟ್ಟ ಎಷ್ಟು ? ಇಲ್ಲಿದೆ ಸಂಪೂರ್ಣ ವಿವರ
- Sports 'ಟಿ20 ವಿಶ್ವಕಪ್ಗೆ ಈತನನ್ನು ಆಯ್ಕೆ ಮಾಡಿ'; ಅಜಿತ್ ಅಗರ್ಕರ್ಗೆ ಬಂತು ದೊಡ್ಡ ಮನವಿ!
- Finance ಡಾ. ರಾಜ್ಕುಮಾರ್ ಜನ್ಮದಿನದಂದು ಹೊಸ ಉದ್ಯಮ ಆರಂಭಿಸಿದ ಅಶ್ವಿನಿ ಪುನೀತ್ ರಾಜ್ಕುಮಾರ್
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಘು-ಅನು ಮದುವೆ ಆಗಿ ಒಂದು ವರ್ಷ ಆಯ್ತು.! ಆನಿವರ್ಸರಿ ಸೆಲೆಬ್ರೇಷನ್ ಹೇಗಿತ್ತು.?
ನಿಮ್ಮ ಮದುವೆ ವಾರ್ಷಿಕೋತ್ಸವವನ್ನ ನೀವು ಹೇಗೆ ಆಚರಿಸಿಕೊಳ್ಳುತ್ತೀರಾ.? ಜೇಬು ಗಟ್ಟಿಯಾಗಿ ಇರುವವರು ತಮ್ಮ ಲೈಫ್ ಪಾರ್ಟ್ನರ್ ಜೊತೆ ಫಾರಿನ್ ಟ್ರಿಪ್ ಗೆ ಹೋಗ್ಬಬಹುದು... ಬಜೆಟ್ ಸ್ವಲ್ಪ ಕಮ್ಮಿ ಇದ್ರೆ ಇಲ್ಲೇ ಅಕ್ಕ-ಪಕ್ಕ ಕಣ್ಣು ಕೋರೈಸುವ ತಾಣಗಳಿಗೆ ಭೇಟಿ ನೀಡಿ ಖುಷಿ ಪಡಬಹುದು...
ದೇವರ ಆಶೀರ್ವಾದ ಬಯಸುವವರು ತಮ್ಮ ಇಷ್ಟದ ದೇವಾಲಯಕ್ಕೆ ಭೇಟಿ ನೀಡಬಹುದು. ಅಥವಾ ಒಂದು ಡಿನ್ನರ್ ಪಾರ್ಟಿ ಅರೇಂಜ್ ಮಾಡಬಹುದು.
ಮದುವೆ ವಾರ್ಷಿಕೋತ್ಸವವನ್ನ ಹೀಗೆ ಹಲವರು ತಮ್ಮ ಅಗತ್ಯ-ಇಷ್ಟಗಳಿಗೆ ತಕ್ಕಂತೆ ಆಚರಿಸಿಕೊಳ್ಳುತ್ತಾರೆ. ಇದ್ಯಾವುದು ಇಷ್ಟವಿಲ್ಲದವರು ಕೆಲಸಕ್ಕೆ ಹಾಜರ್ ಆಗುತ್ತಾರೆ.
ಮ್ಯಾರೇಜ್ ಆನಿವರ್ಸರಿ ಬಗ್ಗೆ ನಾವು ಇಷ್ಟೆಲ್ಲ ಹೇಳಲು ಕಾರಣ ನಟಿ ಅನು ಪ್ರಭಾಕರ್ ಮುಖರ್ಜಿ ಮತ್ತು ನಟ ರಘು ಮುಖರ್ಜಿ. ಮುಂದೆ ಓದಿರಿ....
ಒಂದು ವರ್ಷ ಕಳೆದಿದೆ
ನಟಿ ಅನು ಪ್ರಭಾಕರ್ ಹಾಗೂ ನಟ ರಘು ಮುಖರ್ಜಿ ದಾಂಪತ್ಯ ಜೀವನಕ್ಕೆ ಕಾಲಿಟ್ಟು ವರ್ಷದ ಮೇಲಾಗಿದೆ. ಕಳೆದ ಏಪ್ರಿಲ್ ತಿಂಗಳಲ್ಲಿ ಅನು ಪ್ರಭಾಕರ್ ಮುಖರ್ಜಿ-ರಘು ಮುಖರ್ಜಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡರು.
ಸಂದರ್ಶನ: ನಟ ರಘು ಮುಖರ್ಜಿ ಜೊತೆ 'ಅನು'ರಾಗ ಅರಳಿದ್ದು ಹೇಗೆ.?
ಮ್ಯಾರೇಜ್ ಆನಿವರ್ಸರಿ ಸೆಲೆಬ್ರೇಷನ್ ಹೇಗಿತ್ತು.?
ಮನೆಯಲ್ಲಿ ಸತ್ಯನಾರಾಯಣ ಸ್ವಾಮಿ ಪೂಜೆ ಮಾಡುವ ಮೂಲಕ ತಮ್ಮ ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವವನ್ನ ಅನು ಪ್ರಭಾಕರ್ ಮುಖರ್ಜಿ ಹಾಗೂ ರಘು ಮುಖರ್ಜಿ ಆಚರಿಸಿಕೊಂಡರಂತೆ.
ಮುಂದಿನ ವಾರ ನಿಮ್ಮನೆಗೆ ಬರ್ತಿದ್ದಾರೆ ಅನು ಪ್ರಭಾಕರ್ - ರಘು ಮುಖರ್ಜಿ ದಂಪತಿ
ಸೂಪರ್ ಟಾಕ್ ಟೈಮ್ ನಲ್ಲಿ ರಘು-ಅನು
ಕಲರ್ಸ್ ಸೂಪರ್ ವಾಹಿನಿಯಲ್ಲಿ ಅಕುಲ್ ಬಾಲಾಜಿ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಅನು ಪ್ರಭಾಕರ್ ಮುಖರ್ಜಿ ಹಾಗೂ ರಘು ಮುಖರ್ಜಿ ಭಾಗವಹಿಸಿದರು.
ಅಕುಲ್ ಮೊದಲ ಪ್ರಶ್ನೆಯೇ 'ಆನಿವರ್ಸರಿ' ಬಗ್ಗೆ...
ಕಾರ್ಯಕ್ರಮಕ್ಕೆ ಅನು ಪ್ರಭಾಕರ್ ಮುಖರ್ಜಿ ಹಾಗೂ ರಘು ಮುಖರ್ಜಿ ಆಗಮಿಸುತ್ತಿದ್ದಂತೆಯೇ, 'ವಿವಾಹ ವಾರ್ಷಿಕೋತ್ಸವ'ದ ಸ್ಪೆಷಾಲಿಟಿ ಬಗ್ಗೆ ಅಕುಲ್ ಬಾಲಾಜಿ ಪ್ರಶ್ನೆ ಕೇಳಿದರು. ಅದಕ್ಕೆ 'ಮನೆಯಲ್ಲಿ ಸತ್ಯನಾರಾಯಣ ಸ್ವಾಮಿ ಪೂಜೆ ಮಾಡಿದ್ವಿ' ಎಂದು ದಂಪತಿ ಉತ್ತರ ನೀಡಿದರು. ದಂಪತಿಗೆ ದೇವರ ಮೇಲೆ ಭಕ್ತಿ ಹಾಗೂ ನಂಬಿಕೆ ಇದೆ ಎಂದು ಇದರಲ್ಲಿಯೇ ಗೊತ್ತಾಗುತ್ತದೆ.