Don't Miss!
- News ಚಾಮರಾಜನಗರ: 12 ವರ್ಷಗೊಳಿಗೊಮ್ಮೆ ನಡೆಯುವ ಈ ಜಾತ್ರೆಯಲ್ಲಿ ಎಲ್ಲರನ್ನೂ ಬಯ್ಯೋದೇ ವಿಶೇಷ.!-ಬೈಗಳು ಹೇಗಿರುತ್ತವೆ ಗೊತ್ತಾ?
- Automobiles ಭಾರತದ ರಸ್ತೆಯಲ್ಲಿ ಘರ್ಜಿಸಲು ಬಂದ ಪವರ್ಫುಲ್ ಎಪ್ರಿಲಿಯಾ ಬೈಕ್ ವಿತರಣೆ ಮಾಹಿತಿ ಬಹಿರಂಗ
- Finance ಸಾಂಬಾರು ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿ, ಇಂದು 276ಕ್ಕೂ ಹೆಚ್ಚು ಚಿನ್ನಾಭರಣ ಮಳಿಗೆಗಳ ಒಡೆಯ!
- Lifestyle ಹಸುವಿನ ಹಾಲಿನಿಂದ ಇಡೀ ವಿಶ್ವಕ್ಕೆ ಇನ್ಸುಲಿನ್..! ಹೊಸ ಅಧ್ಯಯನದಲ್ಲಿ ಬಹಿರಂಗ.!
- Sports ಆರ್ಸಿಬಿ ಸ್ಟಾರ್ ಶ್ರೇಯಾಂಕಾ ಪಾಟೀಲ್ ಬಗ್ಗೆ ನಿಮಗೆಷ್ಟು ಗೊತ್ತು?; ಶಿಕ್ಷಣ, ವಯಸ್ಸು, ಕೌಟುಂಬಿಕ ಹಿನ್ನೆಲೆ ಬಗ್ಗೆ ಮಾಹಿತಿ
- Technology Samsung: ಸ್ಯಾಮ್ಸಂಗ್ನ ಮುಂಬರುವ ಫೋಲ್ಡಬಲ್ ಫೋನ್ ನೀವು ಊಹಿಸಲಾಗದ ಅಗ್ಗದ ಬೆಲೆಗೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪಬ್ಲಿಕ್ ಟಿವಿ ವಾಹಿನಿಯ ಪ್ರಸಾರ ಕಾರ್ಯಾರಂಭ
ಪಬ್ಲಿಕ್ ಟಿವಿಯ ಧ್ಯೇಯ, ಉದ್ದೇಶ ಹಾಗೂ ಗುರಿಗಳ ಬಗ್ಗೆ ಸಾರಥಿ ರಂಗನಾಥ್ ಮಾತುನೊಂದಿಗೆ ಬಿಡುಗಡೆಯಾದ ಈ ವಾಹಿನಿ, ರಾಜ್ಯದ ಮುಖ್ಯಮಂತ್ರಿ ಸದಾನಂದ ಗೌಡ 'ಸುದ್ದಿ' ಓದುವುದರೊಂದಿಗೆ ಮೊದಲ ಸುದ್ದಿ ಪ್ರಸಾರ ಮಾಡಿತು. ಬಜೆಟ್ ವಿಷಯವನ್ನು ಪ್ರಾರಂಭಿಸಿ ವಿವರಣೆ ನೀಡುವುದರೊಂದಿಗೆ ಸದಾನಂದ ಗೌಡ ಓದಿದ ಸುದ್ದಿ ಎಲ್ಲರ ಗಮನ ಸೆಳೆಯಿತು.
ಮುಖ್ಯಮಂತ್ರಿ ಓದಿದ ಸುದ್ದಿ ಪ್ರಸಾರದ ಮಧ್ಯೆ ಹಿನ್ನೆಲೆ ಧ್ವನಿಯ ಮೂಲಕ 6 ತಿಂಗಳಿನಿಂದ ರಾಜ್ಯದಲ್ಲಿ ನಡೆದು ಗಮನಸೆಳೆದ ವಿದ್ಯಮಾನಗಳ ಸುದ್ದಿಗಳು ಹಾಗೂ ವಿಶ್ಲೇಷಣೆಗಳು ಪ್ರಸಾರವಾದವು. ಸದಾನಂದ ಗೌಡರ ಸುದ್ದಿ ಪ್ರಸಾರದ ನಂತರ ಮತ್ತೆ ರಂಗನಾಥ್ ಅವರ ನುಡಿಮುತ್ತುಗಳ ಮೂಲಕ ಪಬ್ಲಿಕ್ ಟಿವಿ ಪ್ರಸಾರ ಮುಂದುವರಿದಿದೆ.
ವಿಶೇಷ ಅವಕಾಶ: ಇಂದು ಈ ಪಬ್ಲಿಕ್ ಟಿವಿಯಲ್ಲಿ ಮಧ್ಯಾನ್ಹ 12-30ಕ್ಕೆ ಎಚ್ ಆರ್ ರಂಗನಾಥ್ ನಡೆಸಿಕೊಡಲಿರುವ ವಿಶೇಷ ಕಾರ್ಯಕ್ರಮದಲ್ಲಿ ಅವರೊಂದಿಗೆ, 23574045/4046 ದೂರವಾಣಿ ಸಂಖ್ಯೆಯ ಮೂಲಕ ನೇರವಾಗಿ ಮಾತನಾಡಲು ವಿಶೇಷ ಅವಕಾಶವಿದೆ.
ಸದ್ಯದಲ್ಲಿಯೇ ದೇಶದ ಮುಖ್ಯ 'ಉಪಗ್ರಹ ದೂರದರ್ಶನ' (Satellite TV) ಗಳಲ್ಲಿ ನಮ್ಮ ನಿಮ್ಮೆಲ್ಲರ ಪಬ್ಲಿಕ್ ಟಿವಿ ಪ್ರಸಾರ ಲಭ್ಯ. (ಒನ್ ಇಂಡಿಯಾ ಕನ್ನಡ)