Don't Miss!
- News PSI Re-Exam: ಪಿಎಸ್ಐ ಮರುಪರೀಕ್ಷೆ ಅಂತಿಮ ಅಂಕಪಟ್ಟಿ ಪ್ರಕಟ: CET ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ
- Lifestyle ಏಪ್ರಿಲ್ 1ರಿಂದ 800 ಔಷಧಗಳು ದುಬಾರಿ..! ಎಷ್ಟು ಬೆಲೆ ಹೆಚ್ಚಳ.?
- Automobiles ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ ಹೊಸ ಸ್ಕೋಡಾ ಸೂಪರ್ಬ್ ಕಾರು
- Sports IPL 2024: ಆರ್ಸಿಬಿ vs ಕೆಕೆಆರ್ ಪಂದ್ಯಕ್ಕೂ ಮುನ್ನ ಗಂಭೀರ್ನತ್ತ ಐಸ್-ಕೋಲ್ಡ್ ಲುಕ್ ನೀಡಿದ ಕೊಹ್ಲಿ
- Technology WhatsApp: ವಾಟ್ಸಾಪ್ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪಬ್ಲಿಕ್ ಟಿವಿ ವಾಹಿನಿಯ ಪ್ರಸಾರ ಕಾರ್ಯಾರಂಭ
ಪಬ್ಲಿಕ್ ಟಿವಿಯ ಧ್ಯೇಯ, ಉದ್ದೇಶ ಹಾಗೂ ಗುರಿಗಳ ಬಗ್ಗೆ ಸಾರಥಿ ರಂಗನಾಥ್ ಮಾತುನೊಂದಿಗೆ ಬಿಡುಗಡೆಯಾದ ಈ ವಾಹಿನಿ, ರಾಜ್ಯದ ಮುಖ್ಯಮಂತ್ರಿ ಸದಾನಂದ ಗೌಡ 'ಸುದ್ದಿ' ಓದುವುದರೊಂದಿಗೆ ಮೊದಲ ಸುದ್ದಿ ಪ್ರಸಾರ ಮಾಡಿತು. ಬಜೆಟ್ ವಿಷಯವನ್ನು ಪ್ರಾರಂಭಿಸಿ ವಿವರಣೆ ನೀಡುವುದರೊಂದಿಗೆ ಸದಾನಂದ ಗೌಡ ಓದಿದ ಸುದ್ದಿ ಎಲ್ಲರ ಗಮನ ಸೆಳೆಯಿತು.
ಮುಖ್ಯಮಂತ್ರಿ ಓದಿದ ಸುದ್ದಿ ಪ್ರಸಾರದ ಮಧ್ಯೆ ಹಿನ್ನೆಲೆ ಧ್ವನಿಯ ಮೂಲಕ 6 ತಿಂಗಳಿನಿಂದ ರಾಜ್ಯದಲ್ಲಿ ನಡೆದು ಗಮನಸೆಳೆದ ವಿದ್ಯಮಾನಗಳ ಸುದ್ದಿಗಳು ಹಾಗೂ ವಿಶ್ಲೇಷಣೆಗಳು ಪ್ರಸಾರವಾದವು. ಸದಾನಂದ ಗೌಡರ ಸುದ್ದಿ ಪ್ರಸಾರದ ನಂತರ ಮತ್ತೆ ರಂಗನಾಥ್ ಅವರ ನುಡಿಮುತ್ತುಗಳ ಮೂಲಕ ಪಬ್ಲಿಕ್ ಟಿವಿ ಪ್ರಸಾರ ಮುಂದುವರಿದಿದೆ.
ವಿಶೇಷ ಅವಕಾಶ: ಇಂದು ಈ ಪಬ್ಲಿಕ್ ಟಿವಿಯಲ್ಲಿ ಮಧ್ಯಾನ್ಹ 12-30ಕ್ಕೆ ಎಚ್ ಆರ್ ರಂಗನಾಥ್ ನಡೆಸಿಕೊಡಲಿರುವ ವಿಶೇಷ ಕಾರ್ಯಕ್ರಮದಲ್ಲಿ ಅವರೊಂದಿಗೆ, 23574045/4046 ದೂರವಾಣಿ ಸಂಖ್ಯೆಯ ಮೂಲಕ ನೇರವಾಗಿ ಮಾತನಾಡಲು ವಿಶೇಷ ಅವಕಾಶವಿದೆ.
ಸದ್ಯದಲ್ಲಿಯೇ ದೇಶದ ಮುಖ್ಯ 'ಉಪಗ್ರಹ ದೂರದರ್ಶನ' (Satellite TV) ಗಳಲ್ಲಿ ನಮ್ಮ ನಿಮ್ಮೆಲ್ಲರ ಪಬ್ಲಿಕ್ ಟಿವಿ ಪ್ರಸಾರ ಲಭ್ಯ. (ಒನ್ ಇಂಡಿಯಾ ಕನ್ನಡ)