Don't Miss!
- Sports DC vs GT IPL 2024: ಡೆಲ್ಲಿ ಕೋಟೆಯಲ್ಲಿ ವಿಜಯದ ಪತಾಕೆ ಹಾರಿಸುತ್ತಾ ಗುಜರಾತ್?; ಟಾಸ್ ವರದಿ, ಆಡುವ ಬಳಗ
- News ಲೋಕಸಭಾ ಚುನಾವಣೆ 2024: ಮತದಾನಕ್ಕೆ ಸಕಲ ಮಂಡ್ಯ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ
- Automobiles Suzuki Access Electric: ಸುಜುಕಿ ಆಕ್ಸೆಸ್ ಎಲೆಕ್ಟ್ರಿಕ್ ಸ್ಕೂಟರ್ ಈ ವರ್ಷ ಬಿಡುಗಡೆ ಸಾಧ್ಯತೆ!
- Lifestyle 5 ಸೆಕೆಂಡ್ನಲ್ಲಿ ಈ ಚಿತ್ರದಲ್ಲಿರುವ ಮೇಕೆ ಮಾಲೀಕನ ಹುಡುಕಿ..! ಎಲ್ಲಿದ್ದಾನೆ ಗೊತ್ತಾ?
- Technology Bengaluru: ಆ ಆಪ್ ಇನ್ಸ್ಟಾಲ್ ಮಾಡಿದ್ದೇ ತಡ 5.2 ಕೋಟಿ ರೂ. ಮಾಯ.. ನೀವು ಎಚ್ಚರ
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪಬ್ಲಿಕ್ ಟಿವಿ ವಾಹಿನಿಯ ಪ್ರಸಾರ ಕಾರ್ಯಾರಂಭ
ಪಬ್ಲಿಕ್ ಟಿವಿಯ ಧ್ಯೇಯ, ಉದ್ದೇಶ ಹಾಗೂ ಗುರಿಗಳ ಬಗ್ಗೆ ಸಾರಥಿ ರಂಗನಾಥ್ ಮಾತುನೊಂದಿಗೆ ಬಿಡುಗಡೆಯಾದ ಈ ವಾಹಿನಿ, ರಾಜ್ಯದ ಮುಖ್ಯಮಂತ್ರಿ ಸದಾನಂದ ಗೌಡ 'ಸುದ್ದಿ' ಓದುವುದರೊಂದಿಗೆ ಮೊದಲ ಸುದ್ದಿ ಪ್ರಸಾರ ಮಾಡಿತು. ಬಜೆಟ್ ವಿಷಯವನ್ನು ಪ್ರಾರಂಭಿಸಿ ವಿವರಣೆ ನೀಡುವುದರೊಂದಿಗೆ ಸದಾನಂದ ಗೌಡ ಓದಿದ ಸುದ್ದಿ ಎಲ್ಲರ ಗಮನ ಸೆಳೆಯಿತು.
ಮುಖ್ಯಮಂತ್ರಿ ಓದಿದ ಸುದ್ದಿ ಪ್ರಸಾರದ ಮಧ್ಯೆ ಹಿನ್ನೆಲೆ ಧ್ವನಿಯ ಮೂಲಕ 6 ತಿಂಗಳಿನಿಂದ ರಾಜ್ಯದಲ್ಲಿ ನಡೆದು ಗಮನಸೆಳೆದ ವಿದ್ಯಮಾನಗಳ ಸುದ್ದಿಗಳು ಹಾಗೂ ವಿಶ್ಲೇಷಣೆಗಳು ಪ್ರಸಾರವಾದವು. ಸದಾನಂದ ಗೌಡರ ಸುದ್ದಿ ಪ್ರಸಾರದ ನಂತರ ಮತ್ತೆ ರಂಗನಾಥ್ ಅವರ ನುಡಿಮುತ್ತುಗಳ ಮೂಲಕ ಪಬ್ಲಿಕ್ ಟಿವಿ ಪ್ರಸಾರ ಮುಂದುವರಿದಿದೆ.
ವಿಶೇಷ ಅವಕಾಶ: ಇಂದು ಈ ಪಬ್ಲಿಕ್ ಟಿವಿಯಲ್ಲಿ ಮಧ್ಯಾನ್ಹ 12-30ಕ್ಕೆ ಎಚ್ ಆರ್ ರಂಗನಾಥ್ ನಡೆಸಿಕೊಡಲಿರುವ ವಿಶೇಷ ಕಾರ್ಯಕ್ರಮದಲ್ಲಿ ಅವರೊಂದಿಗೆ, 23574045/4046 ದೂರವಾಣಿ ಸಂಖ್ಯೆಯ ಮೂಲಕ ನೇರವಾಗಿ ಮಾತನಾಡಲು ವಿಶೇಷ ಅವಕಾಶವಿದೆ.
ಸದ್ಯದಲ್ಲಿಯೇ ದೇಶದ ಮುಖ್ಯ 'ಉಪಗ್ರಹ ದೂರದರ್ಶನ' (Satellite TV) ಗಳಲ್ಲಿ ನಮ್ಮ ನಿಮ್ಮೆಲ್ಲರ ಪಬ್ಲಿಕ್ ಟಿವಿ ಪ್ರಸಾರ ಲಭ್ಯ. (ಒನ್ ಇಂಡಿಯಾ ಕನ್ನಡ)