ಇದೇ ಭಾನುವಾರ ನಿಮ್ಮ ಮನೆಗೆ ಬರ್ತಾನೆ 'ಹುಲಿರಾಯ'
Recommended Video

ಚಿತ್ರಮಂದಿರಗಳಲ್ಲಿ 'ಹುಲಿರಾಯ'ನ ಘರ್ಜನೆ ನೋಡಿ ಇಷ್ಟ ಪಟ್ಟವರು ಮತ್ತೆ ಆ ಸಿನಿಮಾವನ್ನು ನೋಡಬಹುದಾಗಿದೆ. ಜೊತೆಗೆ ಈ ಸಿನಿಮಾವನ್ನು ಮಿಸ್ ಮಾಡಿಕೊಂಡವರಿಗೂ ಕೂಡ ಈಗ ಸಿನಿಮಾ ನೋಡುವ ಅವಕಾಶ ಬಂದಿದೆ. ಯಾಕಂದ್ರೆ 'ಹುಲಿರಾಯ' ಸಿನಿಮಾ ಈಗ ಕಿರುತೆರೆಯಲ್ಲಿ ಮೊದಲ ಬಾರಿಗೆ ಪ್ರಸಾರ ಆಗಲಿದೆ.
'ಹುಲಿರಾಯ' ಸಿನಿಮಾವನ್ನು ಅರವಿಂದ್ ಕೌಶಿಕ್ ನಿರ್ದೇಶನ ಮಾಡಿದ್ದರು. ಬಾಲು ನಾಗೇಂದ್ರ ಮತ್ತು ದಿವ್ಯ ಹುರುಡುಗ ಸಿನಿಮಾದಲ್ಲಿ ನಾಯಕ ನಾಯಕಿ ಆಗಿ ಕಾಣಿಸಿಕೊಂಡಿದ್ದರು. 'ಹುಲಿರಾಯ' ಸಿನಿಮಾ ಊರು ಬಿಟ್ಟು ಬೆಂಗಳೂರಿಗೆ ಬರುವ ಒಬ್ಬ ಹುಡುಗ ಕಥೆ ಆಗಿತ್ತು. ಈ ಕಥೆ ಎಲ್ಲರಿಗೂ ಹತ್ತರ ಎನಿಸಿತ್ತು. ಸಿನಿಮಾದಲ್ಲಿ ಹಾಸ್ಯಮಯವಾಗಿ ಬದುಕಿನ ಮಹತ್ವದ ಸಂದೇಶವನ್ನು ಹೇಳಲಾಗಿತ್ತು.

ಅಂದಹಾಗೆ, ಈ ಸಿನಿಮಾದಲ್ಲಿ ಫೈಟ್ ಇಲ್ಲ..ಬಿಲ್ಡಪ್ ಇಲ್ಲ..ರೊಮ್ಯಾನ್ಸ್ ಇಲ್ಲ.. ಫಾರಿನ್ ಲೋಕೇಷನ್ ಅಂತೂ ಇಲ್ಲವೇ ಇಲ್ಲ.. ಆದರೂ ಸಿನಿಮಾ ಇಷ್ಟ ಆಗುತ್ತದೆ. ಇದು ಬಾಯಿ ಮಾತಿಗೆ ವಿಭಿನ್ನ ಎನ್ನುವ ಸಿನಿಮಾ ಅಲ್ಲ. ನಿಜಕ್ಕೂ ವಿಭಿನ್ನ ಸಿನಿಮಾ. ಇಡೀ ಸಿನಿಮಾ ಸಖತ್ ಮಜಾವಾಗಿದೆ. ನೀವು ನೋಡಿ ಇಷ್ಟ ಆಗುತ್ತದೆ. ಅಂದಹಾಗೆ, 'ಹುಲಿರಾಯ' ಸಿನಿಮಾ ಇದೇ ಭಾನುವಾರ ಸಂಜೆ 4.30ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಸಿನಿಮಾ ಪ್ರಸಾರ ಆಗಲಿದೆ.


Click it and Unblock the Notifications











