Don't Miss!
- News ಲೋಕಸಭಾ ಚುನಾವಣೆ: ಮೈಸೂರು ಜಿಲ್ಲೆಯಲ್ಲಿ ಭದ್ರತೆಗೆ 5 ಸಾವಿರ ಪೊಲೀಸರ ನಿಯೋಜನೆ
- Sports IPL 2024: ಆರ್ಸಿಬಿಗೆ ವಿರಾಟ್, ಪಾಟಿದಾರ್ ಆಸರೆ: ಹೈದರಾಬಾದ್ಗೆ ಸವಾಲಿನ ಟಾರ್ಗೆಟ್
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಗಳಿಂದ ತಂದೆಯ ಅಂತ್ಯಸಂಸ್ಕಾರ: 'ಕನ್ನಡತಿ' ಧಾರವಾಹಿ ಪ್ರೇರಣೆ
ಕನ್ನಡದ ಜನಪ್ರಿಯ ಧಾರವಾಹಿ 'ಕನ್ನಡತಿ' ಇಂದ ಪ್ರೇರಣೆ ಪಡೆದು ಕುಟುಂಬವೊಂದು ಸಂಪ್ರದಾಯವನ್ನು ಮುರಿದು ಹೊಸ ಸಂಪ್ರದಾಯವನ್ನು ಕಟ್ಟಿದ ಘಟನೆ ನಡೆದಿದೆ.
ಗಂಡು ಮಕ್ಕಳಷ್ಟೆ ಅಂತಿಮ ಸಂಸ್ಕಾರ ಮಾಡುವ ಪದ್ಧತಿ ಬಹು ಹಳೆಯ ಕಾಲದಿಂದಲೂ ಚಾಲ್ತಿಯಲ್ಲಿದೆ. ಹೆಣ್ಣು ಮಕ್ಕಳು ಅಂತ್ಯ ಸಂಸ್ಕಾರ ಮಾಡುವಂತಿಲ್ಲ. ಆದರೆ ಕನ್ನಡತಿ ಧಾರವಾಹಿಯಲ್ಲಿ ನಾಯಕಿ ತನ್ನ ತಂದೆಯ ಅಂತ್ಯ ಸಂಸ್ಕಾರ ಮಾಡುವ ದೃಶ್ಯವಿದೆ. ಬಹು ಚರ್ಚೆ-ವಿಚಾರ ವಿಮರ್ಶೆಗಳ ಬಳಿಕ ಧಾರವಾಹಿ ನಾಯಕಿ ತಂದೆಯ ಅಂತ್ಯ ಸಂಸ್ಕಾರ ಮಾಡುತ್ತಾರೆ.
ಇದೇ ದೃಶ್ಯವನ್ನು ಪ್ರೇರಣೆಯಾಗಿ ಪಡೆದು ಉತ್ತರ ಕನ್ನಡ ಜಿಲ್ಲೆಯ ಕಾರವಾರ ಸಮೀತದ ಊರೊಂದರಲ್ಲಿ ಮಹಿಳೆಯಿಂದ ಆಕೆಯ ತಂದೆಗೆ ಅಂತ್ಯ ಸಂಸ್ಕಾರ ಮಾಡಿಸಲಾಗಿದೆ. ಅಲ್ಲಿನ ಜನರೂ ಸಹ ಈ ಪ್ರಗತಿಪರ ನಡೆಗೆ ಒಪ್ಪಿಗೆ ಸೂಚಿಸಿದ್ದಾರೆ.
ಕಾರವಾರ ಬಳಿಕ ಕುರ್ನಿಪೇಟೆಯಲ್ಲಿ ಚಂದ್ರಕಾಂತ್ ಬುದೊ ಎಂಬುವರು ಶುಕ್ರವಾರ ನಿಧನರಾದರು. ಅವರಿಗೆ ಒಂಬತ್ತು ಮಂದಿ ಹೆಣ್ಣು ಮಕ್ಕಳು. ಮೂವರು ಹೆಣ್ಣು ಮಕ್ಕಳಿಗೆ ಮದುವೆಯಾಗಿದೆ. ಆದರೆ ಅವರ ಅಳಿಯಂದಿರು ಅಂತಿಮ ಶಾಸ್ತ್ರ ಮಾಡಲಿಲ್ಲ.
ಆಗ ಊರಿನವರೇ ಸೇರಿ ಹೆಣ್ಣು ಮಗಳ ಕೈಯಲ್ಲಿಯೇ ಚಂದ್ರಕಾಂತ್ ಬುದೊ ಅವರಿಗೆ ಅಂತಿಮ ಸಂಸ್ಕಾರ ಮಾಡಿಸಿದರು. ಗಂಡು ಮಕ್ಕಳೇ ಅಂತಿಮ ಸಂಸ್ಕಾರ ಮಾಡಬೇಕೆಂಬ ಅಕಾರ ಸಂಪ್ರದಾಯವನ್ನು ಮುರಿದು ಹೊಸದಕ್ಕೆ ನಾಂದಿ ಹಾಡಲಾಯಿತು. ಈ ಘಟನೆಗೆ ಪ್ರೇರಣೆ ಒದಗಿಸಿದ್ದು ಕನ್ನಡತಿ ಧಾರವಾಹಿ.