ಕಿರುತೆರೆ ಪ್ರೇಕ್ಷಕರ ಎದುರು ಬರ್ತಿದ್ದಾನೆ 'ಜೈ ಹನುಮಾನ್'
ಕಿರುತೆರೆಯಲ್ಲಿ ಪೌರಾಣಿಕ ಧಾರಾವಾಹಿಗಳು ಹೆಚ್ಚಾಗ್ತಿದೆ. ಈಗಾಗಲೇ ಶನಿ ಮಹಾತ್ಮ, ಮಹಾಕಾಳಿಯ ಮಹಾತ್ಮೆ, ಮಾದೇಶ್ವರನ ಮಹಿಮೆ ಹೀಗೆ ಪುರಾಣಗಳ ಕಥೆಗಳನ್ನ ಆಧರಿಸಿ ಧಾರಾವಾಹಿ ನಿರ್ಮಿಸಲಾಗುತ್ತಿದೆ. ಈಗ ಹನುಮಂತನ ಸಾಹಸ ಕಥೆಯ ನಿಮ್ಮ ಮುಂದೆ ಬರ್ತಿದೆ.
ಕಲರ್ಸ್ ಕನ್ನಡದ ವಾಹಿನಿಯಲ್ಲಿ ಶನಿ, ಮಹಾಕಾಳಿ ಮೂಡಿಬರ್ತಿದೆ. ಜೀ ಕನ್ನಡದಲ್ಲಿ 'ಊಘೇ ಊಘೇ ಮಾದೇಶ್ವರ' ಎಂಬ ಸೀರಿಯಲ್ ಪ್ರಸಾರವಾಗ್ತಿದೆ. ''ಊಘೇ ಊಘೇ ಮಾದೇಶ್ವರ' ಪ್ರಸಾರವಾಗುತ್ತಿರುವಾಗಲೇ 'ವಿಷ್ಣು ದಶಾವತಾರ' ಎಂಬ ಹೊಸ ಪೌರಾಣಿಕ ಕಥೆ ಬರ್ತಿದೆ ಎಂಬ ಪ್ರೋಮೋ ಪ್ರಸಾರವಾಗ್ತಿದೆ.
ಈಗ ಉದಯ ಟಿವಿಯಲ್ಲಿ 'ಜೈ ಹನುಮಾನ್' ಎಂಬ ಪೌರಾಣಿಕ ಧಾರಾವಾಹಿ ಪ್ರಸಾರವಾಗಲಿದೆ. ಅಕ್ಟೋಬರ್ 8 ರಿಂದ ಸೋಮವಾರದಿಂದ ಶುಕ್ರವಾರದವರೆಗೂ ಪ್ರತಿದಿನ ರಾತ್ರಿ 7.30ಕ್ಕೆ ಮೂಡಿಬರಲಿದೆ.

ಪುಟ್ಟಗೌರಿ ಮದುವೆ, ಲಕ್ಷ್ಮಿಬಾರಮ್ಮ, ಮುದ್ದುಲಕ್ಷ್ಮಿ, ರಾಧರಮಣ, ಮಾಯಾ, ಹೀಗೆ ಸಾಮಾಜಿಕ ಮತ್ತು ಹಾರರ್ ಧಾರಾವಾಹಿಗಳ ಮಧ್ಯೆ ಈಗ ಪೌರಾಣಿಕ ಧಾರಾವಾಹಿಗಳ ಪರ್ವ ಶುರುವಾಗಿದೆ.
'ಜೈ ಹನುಮಾನ್' ಧಾರಾವಾಹಿಯಲ್ಲಿ ಹನುಮಂತನ ಜನನ, ಹನುಮಂತನ ಸಾಹಸ, ರಾಮಭಕ್ತ, ಹೀಗೆ ಸಂಪೂರ್ಣವಾಗಿ ಹನುಮನ ಕಥೆ ಈ ಸೀರಿಯನ್ ನಲ್ಲಿ ಮೂಡಿ ಬರಲಿದೆ.


Click it and Unblock the Notifications











