Don't Miss!
- News Lok Sabha Election: ಕರ್ನಾಟಕದ ಈ ಕ್ಷೇತ್ರದಲ್ಲಿ ಮಹಿಳಾ ಮತದಾರರೇ ನಿರ್ಣಾಯಕ
- Sports ರೋಹಿತ್ ಶರ್ಮಾ ಬಳಿಕ ಭಾರತ ತಂಡದ ನಾಯಕನಾರು?; ಅಚ್ಚರಿ ಹೆಸರು ತಿಳಿಸಿದ ಹರ್ಭಜನ್ ಸಿಂಗ್!
- Lifestyle ಚಪಾತಿ, ಅನ್ನಕ್ಕೆ ಟೊಮೆಟೋ ಬೇಳೆ ಸಾರು ಸಖತ್ ರುಚಿ..! ಮಾಡೋದು ಸುಲಭ..!
- Automobiles ಅಪ್ಪ-ಮಗಳ ಭಾಂದವ್ಯ.. ಪ್ರೀತಿಯ ಪುತ್ರಿಗೆ ತಂದೆಯಿಂದ 2 ಕೋಟಿಯ ಪೋರ್ಷೆ ಕಾರು ಗಿಫ್ಟ್
- Finance ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 10 ಹಳದಿ ಅನಕೊಂಡ ಸಹಿತ ವ್ಯಕ್ತಿ ಬಂಧನ
- Technology Google: ಗೂಗಲ್ ಪಿಕ್ಸೆಲ್ 8a ಬೆಲೆ ಮಾಹಿತಿ ಲೀಕ್! ಈ ಫೋನ್ ಫೀಚರ್ಸ್ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಿರುತೆರೆ ಪ್ರೇಕ್ಷಕರ ಎದುರು ಬರ್ತಿದ್ದಾನೆ 'ಜೈ ಹನುಮಾನ್'
ಕಿರುತೆರೆಯಲ್ಲಿ ಪೌರಾಣಿಕ ಧಾರಾವಾಹಿಗಳು ಹೆಚ್ಚಾಗ್ತಿದೆ. ಈಗಾಗಲೇ ಶನಿ ಮಹಾತ್ಮ, ಮಹಾಕಾಳಿಯ ಮಹಾತ್ಮೆ, ಮಾದೇಶ್ವರನ ಮಹಿಮೆ ಹೀಗೆ ಪುರಾಣಗಳ ಕಥೆಗಳನ್ನ ಆಧರಿಸಿ ಧಾರಾವಾಹಿ ನಿರ್ಮಿಸಲಾಗುತ್ತಿದೆ. ಈಗ ಹನುಮಂತನ ಸಾಹಸ ಕಥೆಯ ನಿಮ್ಮ ಮುಂದೆ ಬರ್ತಿದೆ.
ಕಲರ್ಸ್ ಕನ್ನಡದ ವಾಹಿನಿಯಲ್ಲಿ ಶನಿ, ಮಹಾಕಾಳಿ ಮೂಡಿಬರ್ತಿದೆ. ಜೀ ಕನ್ನಡದಲ್ಲಿ 'ಊಘೇ ಊಘೇ ಮಾದೇಶ್ವರ' ಎಂಬ ಸೀರಿಯಲ್ ಪ್ರಸಾರವಾಗ್ತಿದೆ. ''ಊಘೇ ಊಘೇ ಮಾದೇಶ್ವರ' ಪ್ರಸಾರವಾಗುತ್ತಿರುವಾಗಲೇ 'ವಿಷ್ಣು ದಶಾವತಾರ' ಎಂಬ ಹೊಸ ಪೌರಾಣಿಕ ಕಥೆ ಬರ್ತಿದೆ ಎಂಬ ಪ್ರೋಮೋ ಪ್ರಸಾರವಾಗ್ತಿದೆ.
ಶನಿ, ಮಹಾಕಾಳಿ ನಂತರ ಮತ್ತೆರಡು ಪೌರಾಣಿಕ ಧಾರಾವಾಹಿಗಳು
ಈಗ ಉದಯ ಟಿವಿಯಲ್ಲಿ 'ಜೈ ಹನುಮಾನ್' ಎಂಬ ಪೌರಾಣಿಕ ಧಾರಾವಾಹಿ ಪ್ರಸಾರವಾಗಲಿದೆ. ಅಕ್ಟೋಬರ್ 8 ರಿಂದ ಸೋಮವಾರದಿಂದ ಶುಕ್ರವಾರದವರೆಗೂ ಪ್ರತಿದಿನ ರಾತ್ರಿ 7.30ಕ್ಕೆ ಮೂಡಿಬರಲಿದೆ.
ಪುಟ್ಟಗೌರಿ ಮದುವೆ, ಲಕ್ಷ್ಮಿಬಾರಮ್ಮ, ಮುದ್ದುಲಕ್ಷ್ಮಿ, ರಾಧರಮಣ, ಮಾಯಾ, ಹೀಗೆ ಸಾಮಾಜಿಕ ಮತ್ತು ಹಾರರ್ ಧಾರಾವಾಹಿಗಳ ಮಧ್ಯೆ ಈಗ ಪೌರಾಣಿಕ ಧಾರಾವಾಹಿಗಳ ಪರ್ವ ಶುರುವಾಗಿದೆ.
'ಜೈ ಹನುಮಾನ್' ಧಾರಾವಾಹಿಯಲ್ಲಿ ಹನುಮಂತನ ಜನನ, ಹನುಮಂತನ ಸಾಹಸ, ರಾಮಭಕ್ತ, ಹೀಗೆ ಸಂಪೂರ್ಣವಾಗಿ ಹನುಮನ ಕಥೆ ಈ ಸೀರಿಯನ್ ನಲ್ಲಿ ಮೂಡಿ ಬರಲಿದೆ.