Don't Miss!
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Automobiles ಪ್ರಸಿದ್ಧ ಪುಣ್ಯಕ್ಷೇತ್ರ ಶೃಂಗೇರಿ ಶಾರದಾಂಬಾ ದರ್ಶನಕ್ಕೆ ತೆರಳಬೇಕೇ.. ಹಾಗಾದರೆ ಈ ಸ್ಟೋರಿ ನೋಡಿ
- Lifestyle ಹನುಮಂತನ ಪವಾಡ: ಈ ದೇವಾಲಯದಲ್ಲಿ ಹನುಮಾನ್ ಮೂರ್ತಿ ವರ್ಷದಿಂದ ವರ್ಷಕ್ಕೆ ಎತ್ತರ ಬೆಳೆಯುತ್ತಿದೆ!
- News ಮೀಸಲಾತಿ ಅಸ್ತ್ರ ಪ್ರಯೋಗಿಸಿದ ಮೋದಿ; ಮುಸ್ಲಿಂ ಸಮುದಾಯಕ್ಕೆ 4% ಮೀಸಲಾತಿ: ಸಿದ್ದರಾಮಯ್ಯ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Technology Qubo InstaView ವಿಡಿಯೋ ಡೋರ್ ಫೋನ್ ಲಾಂಚ್!..ಬೆಲೆ ಎಷ್ಟು, ಫೀಚರ್ಸ್ ಏನಿವೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ತಾಯಿ ಬಗ್ಗೆ ಇದುವರೆಗೆ ಕಾಯ್ಕಿಣಿ ಹಾಡು ಬರೆದಿಲ್ಲ, ಯಾಕೆ?
Recommended Video
ಸಿನಿಮಾ ಹಾಡುಗಳು ಹೆಚ್ಚಾಗಿ ಪ್ರೀತಿ, ಪ್ರೇಮದ ಬಗ್ಗೆ ಇರುತ್ತದೆ. ಅದನ್ನು ಬಿಟ್ಟರೆ ತಾಯಿಯ ಬಗ್ಗೆ ನೂರಾರೂ ಹಾಡುಗಳು ಕನ್ನಡದಲ್ಲಿ ಇವೆ. ಸಾಕಷ್ಟು ಗೀತರಚನೆಗಾರರು ತಾಯಿಯ ಬಗ್ಗೆ ಅದ್ಬುತ ಹಾಡುಗಳನ್ನು ಬರೆದಿದ್ದಾರೆ.
ಆದರೆ, ಜಯಂತ್ ಕಾಯ್ಕಿಣಿ ಮಾತ್ರ ಈವರೆಗೆ ತಾಯಿಯ ಬಗ್ಗೆ ಒಂದೇ ಒಂದು ಹಾಡನ್ನು ಬರೆದಿಲ್ಲವಂತೆ. ಈ ವಿಷಯನ್ನು ಅವರೇ ಇತ್ತೀಚಿಗಷ್ಟೆ 'ಕನ್ನಡದ ಕಣ್ಮಣಿ' ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದಾರೆ.
ಜಯಂತ್ ಕಾಯ್ಕಿಣಿ ಸಾಹಿತ್ಯಕ್ಕೆ ಜೋಗಿ ಪ್ರೇಮ್ ಧ್ವನಿ
ಕಾರ್ಯಕ್ರಮ ಸಂಚಿಕೆಯಲ್ಲಿ ತಾಯಿಯ ಕಾಯಕದ ಬಗ್ಗೆ ಒಬ್ಬ ಸ್ಪರ್ಧಿ ಮಾತನಾಡಿದರು. ಈ ವೇಳೆ ತಮ್ಮ ತಾಯಿಯನ್ನು ಕಾಯ್ಕಿಣಿ ನೆನೆದರು. ''ಅಮ್ಮನ ಬಗ್ಗೆ ಹೇಳಲು ಆಗುವುದಿಲ್ಲ. ಅದು ಒಂದು ಅನುಭೂತಿ. ಅಮ್ಮನ ಬಗ್ಗೆ ಹೇಳಿದಷ್ಟು ಸರಳೀಕೃತ ಆಗುತ್ತದೆಯೇನೋ ಅನಿಸುತ್ತದೆ.'' ಎಂದಿರುವ ಅವರು ತಾಯಿಯ ಬಗ್ಗೆ ಹಾಡು ಬರೆಯದ ವಿಷಯ ಹಂಚಿಕೊಂಡರು.
''ನಾನು ತಂದೆಯ ಬಗ್ಗೆ ಬರೆದಿದ್ದೇನೆ. ಆದರೆ, ತಾಯಿಯ ಬಗ್ಗೆ ಯಾವ ಹಾಡು, ಪದ್ಯವನ್ನು ಬರೆದಿಲ್ಲ. ತಾಯಿಯ ಬಗ್ಗೆ ಬರೆದರೆ ಆಕೆಯನ್ನು ಯಾವುದೇ ಒಂದು ಚೌಕಟ್ಟಿನಲ್ಲಿ ಇಟ್ಟಿದ್ದೇನೆ ಎನ್ನಿಸಿ ಬಿಡುತ್ತದೆ. ಅದಕ್ಕೆ ನಾನು ನನ್ನ ತಾಯಿ ತೀರಿಕೊಂಡಾಗಲೂ ಅವರ ಬಗ್ಗೆ ಬರೆಯಲಿಲ್ಲ.'' ಎಂದರು ಕಾಯ್ಕಿಣಿ.
'ಸ್ಫೂರ್ತಿಯ ಚಿಲುಮೆ' ಜಯಂತ್ ಕಾಯ್ಕಿಣಿಗೆ ಫಿಲ್ಮಿಬೀಟ್ ಕನ್ನಡದ ಪ್ರಶಸ್ತಿ
ಕನ್ನಡದಲ್ಲಿ 'ಬೇಡುವನು ವರವನ್ನು..', 'ಬ್ರಹ್ಮ ವಿಷ್ಣು ಶಿವ..' ಹೀಗೆ ತಾಯಿಯ ಬಗ್ಗೆ ಇರುವ ಸಾಕಷ್ಟು ಹಾಡುಗಳು ಸೂಪರ್ ಹಿಟ್ ಆಗಿವೆ.