Don't Miss!
- News Bengaluru Heat: ಏ.25 ರಂದು ನಗರದಲ್ಲಿ ಅತ್ಯಧಿಕ ತಾಪಮಾನ: 12 ವರ್ಷಗಳ ದಾಖಲೆ ಉಡೀಸ್
- Lifestyle ದೇಹದಲ್ಲಿ ಈ ಬದಲಾವಣೆ ಆದರೆ ನಿಮ್ಮಲ್ಲಿ ವಿಟಮಿನ್ ಬಿ12 ಕೊರತೆಯಾಗಿದೆ ಎಂದರ್ಥ
- Sports IPL 2024: ಹೈದರಾಬಾದ್ ಅಂಗಳದಲ್ಲಿ ಗೆಲ್ಲುವುದೆ ಆರ್ಸಿಬಿ: ಟಾಸ್ ವರದಿ ಹೀಗಿದೆ
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜಗನ್ ಗೆ ಅಧಿಕಾರ ಸಿಗಲಿಲ್ಲ: ಈಗೆಲ್ಲವೂ ಜೆಕೆ ಪಾಲಾಯ್ತಲ್ಲ.!
'ದೊಡ್ಮನೆ'ಯಿಂದ ಯಾವುದೇ ಸದಸ್ಯರು ಎಲಿಮಿನೇಟ್ ಆದರೂ, ಅವರಿಗೆ 'ಸೂಪರ್ ಅಧಿಕಾರ'ವನ್ನ 'ಬಿಗ್ ಬಾಸ್' ನೀಡುವುದು ವಾಡಿಕೆ. ಅದರಂತೆಯೇ, ಕಳೆದ ವಾರ 'ಬಿಗ್ ಬಾಸ್' ಮನೆಯಿಂದ ನಟಿ ಆಶಿತಾ ಹೊರಗೆ ಹೋಗುವ ಮುನ್ನ 'ಸೂಪರ್ ಅಧಿಕಾರ'ವನ್ನ ಜಗನ್ ಗೆ ನೀಡಿದ್ದರು.
ಆದ್ರೆ, 'ಸೂಪರ್ ಅಧಿಕಾರ'ವನ್ನ ಬಳಸುವ ಅವಕಾಶ ಜಗನ್ ಗೆ ಸಿಗುವ ಮೊದಲೇ, ಅವರು ಎಲಿಮಿನೇಟ್ ಆದರು. ಹೀಗಾಗಿ, ಅವರಿಗೆ ಲಭಿಸಿದ್ದ 'ಸೂಪರ್ ಅಧಿಕಾರ'ವನ್ನ ಮನೆಯ ಯಾರಾದರೂ ಒಬ್ಬ ಸದಸ್ಯರಿಗೆ ಹಸ್ತಾಂತರಿಸಬೇಕಿತ್ತು.
ತಮಗೆ ಸಿಕ್ಕಿದ್ದ 'ಸೂಪರ್ ಅಧಿಕಾರ'ವನ್ನ ಜಗನ್ ತಮ್ಮ ಆತ್ಮೀಯ ಸ್ನೇಹಿತ ಜಯರಾಂ ಕಾರ್ತಿಕ್ ಅವರಿಗೆ ನೀಡಿದರು.
ಜನಾಭಿಪ್ರಾಯಕ್ಕೆ ಮಣಿದು 'ಬಿಗ್ ಬಾಸ್' ಮನೆಯಿಂದ ಹೊರಬಂದ 'ಜಗಳಗಂಟ' ಜಗನ್.!
''ಜೆಕೆಗೆ ಸೂಪರ್ ಅಧಿಕಾರ ಸಿಕ್ಕರೆ ಠುಸ್ ಪಟಾಕಿ'' ಅಂತ ಕೃಷಿ ತಾಪಂಡ ಕಾಮೆಂಟ್ ಮಾಡಿದರೂ, ಜೆಕೆಗೆ ಜಗನ್ ಸೂಪರ್ ಅಧಿಕಾರ ನೀಡಿದರು.
ಹಾಗ್ನೋಡಿದ್ರೆ, ಜೆಕೆ ರನ್ನ ಸೇಫ್ ಮಾಡಿ ತಮ್ಮನ್ನ ತಾವೇ ಜಗನ್ ನಾಮಿನೇಟ್ ಮಾಡಿಕೊಂಡಿದ್ದರು. ಆದ್ರೆ, ಜನಾಭಿಪ್ರಾಯ ಲಭಿಸದ ಕಾರಣ ಜಗನ್ ಔಟ್ ಆದರು.
ಸದಾ ಹಸನ್ಮುಖಿ ಆಗಿರುವ ಜೆಕೆ, 'ಬಿಗ್ ಬಾಸ್' ಮನೆಯಲ್ಲಿ ಮೊಟ್ಟ ಮೊದಲ ಬಾರಿಗೆ ಕಣ್ಣೀರು ಹಾಕಿರುವುದೇ ಜಗನ್ ಔಟ್ ಆದ್ಮೇಲೆ. ಇಂತಿಪ್ಪ ಜೆಕೆ ಕೈಯಲ್ಲಿ ಸದ್ಯ ಸೂಪರ್ ಅಧಿಕಾರ ಇದೆ. ಇದನ್ನ ಅವರು ಹೇಗೆ ಉಪಯೋಗಿಸಿಕೊಳ್ಳುತ್ತಾರೋ, ನೋಡೋಣ.