twitter
    For Quick Alerts
    ALLOW NOTIFICATIONS  
    For Daily Alerts

    ಹೊಸ ಧಾರಾವಾಹಿಯಲ್ಲಿ ಅನಿರುದ್ಧ್ ಜತ್ಕರ್: 2 ವರ್ಷ ಬ್ಯಾನ್ ಕಥೆ ಏನಾಯ್ತು?

    |

    'ಜೊತೆ ಜೊತೆಯಲಿ' ಧಾರಾವಾಹಿಯ ಆರ್ಯವರ್ಧನ್ ಆಗಿ ಸಾಹಸ ಸಿಂಹ ವಿಷ್ಣುವರ್ಧನ್ ಅಳಿಯ ಅನಿರುದ್ಧ್ ಜತ್ಕರ್ ವೀಕ್ಷಕರಿಗೆ ಹತ್ತಿರವಾಗಿದ್ದರು. ಆದರೆ ತಂಡದ ಜೊತೆ ಭಿನ್ನಾಭಿಪ್ರಾಯ ಭುಗಿಲೆದ್ದ ಹಿನ್ನೆಲೆಯಲ್ಲಿ ಅನಿರುದ್ಧ್ ಅವರನ್ನು ಧಾರಾವಾಹಿಯಿಂದ ಕೈಬಿಡಲಾಗಿತ್ತು. ಸದ್ಯ ಉದ್ಯಮಿ ಆರ್ಯವರ್ಧನ್ ಪಾತ್ರವನ್ನು ನಟ ಹರೀಶ್ ರಾಜ್ ನಿಭಾಯಿಸುತ್ತಿದ್ದಾರೆ. ಇದೆಲ್ಲದರ ನಡುವೆ ಅನಿರುದ್ಧ್ ಹೊಸ ಪ್ರಾಜೆಕ್ಟ್‌ಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

    ಕಲಾಸಾಮ್ರಾಟ್ ಎಸ್‌. ನಾರಾಯಣ್ ನಿರ್ದೇಶನದ 'ಸೂರ್ಯವಂಶ' ಧಾರಾವಾಹಿಯಲ್ಲಿ ಅನಿರುದ್ಧ್ ನಟಿಸುತ್ತಿದ್ದಾರೆ. ಈ ಬಗ್ಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. 'ಜೊತೆ ಜೊತೆಯಲಿ' ತಂಡದ ಜೊತೆಗಿನ ರಾದ್ಧಾಂತದ ನಂತರ ಅನಿರುದ್ಧ್ ಮತ್ತೆ ಕಿರುತೆರೆಯಲ್ಲಿ ನಟಿಸುವುದು ಕಷ್ಟ ಎನ್ನಲಾಗಿತ್ತು. ಕನ್ನಡ ಕಿರುತೆರೆ ನಿರ್ಮಾಪಕರ ಸಂಘ 2 ವರ್ಷಗಳ ಕಾಲ ಅನಿರುದ್ಧ್ ಅವರನ್ನು ಯಾವುದೇ ಧಾರಾವಾಹಿ, ಶೋಗೆ ಆಯ್ಕೆ ಮಾಡಿಕೊಳ್ಳದಂತೆ ಒಕ್ಕೊರಲ ತೀರ್ಮಾನ ಕೈಗೊಂಡಿತ್ತು. ಬ್ಯಾನ್ ಎನ್ನುವ ಪದ ಬಳಸದೇ ಇದ್ದರೂ ಅದೇ ರೀತಿಯ ನಿರ್ಣಯಕ್ಕೆ ಬಂದಿದ್ದರು. ಆದರೆ ಅನಿರುದ್ಧ್ ಈಗ ಹೊಸ ಧಾರಾವಾಹಿಯಲ್ಲಿ ನಟಿಸುತ್ತಿರುವುದು ಅಭಿಮಾನಿಗಳಿಗೆ ಸಂತಸ ತಂದಿದೆ.

    ತನ್ನ ಪರ ವಹಿಸಿದ ಸತ್ಯ ಮೇಲೆ ಕಾರ್ತಿಕ್ ಗೆ ಲವ್ ಆಗುತ್ತಾ?ತನ್ನ ಪರ ವಹಿಸಿದ ಸತ್ಯ ಮೇಲೆ ಕಾರ್ತಿಕ್ ಗೆ ಲವ್ ಆಗುತ್ತಾ?

    'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಆರ್ಯವರ್ಧನ್ ಹಾಗೂ ಅನು ಸಿರಿಮನೆ ಪಾತ್ರಗಳು ವೀಕ್ಷಕರ ಮನಗೆದ್ದಿತ್ತು. ಹಾಗಾಗಿ ತಂಡದ ಜೊತೆ ರಾಜಿ ಸಂಧಾನ ಆಗುತ್ತದೆ. ಅನಿರುದ್ಧ್ ಮತ್ತೆ ವಾಪಸ್ ಬರುತ್ತಾರೆ ಅಂತಲೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಅದು ನಿಜವಾಗಲೇ ಇಲ್ಲ.

    'ಸೂರ್ಯವಂಶ' ಧಾರಾವಾಹಿ

    'ಸೂರ್ಯವಂಶ' ಧಾರಾವಾಹಿ

    ಶೀಘ್ರದಲ್ಲೇ ಉದಯವಾಹಿನಿಯಲ್ಲಿ 'ಸೂರ್ಯವಂಶ' ಧಾರಾವಾಹಿ ಪ್ರಸಾರವಾಗಲಿದೆ. ಮುಖ್ಯ ಪಾತ್ರದಲ್ಲಿ ಅನಿರುದ್ಧ್ ಜತ್ಕರ್ ಬಣ್ಣ ಹಚ್ಚಿದ್ದಾರೆ. ಮತ್ತೆ ಸೂಟು ಬೂಟು ಧರಿಸಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ 'ಸೂರ್ಯವಂಶ' ಸಿನಿಮಾ ಮಾಡಿ ಗೆದ್ದಿದ್ದ ಎಸ್‌. ನಾರಾಯಣ್ ಅದೇ ಟೈಟಲ್‌ನಲ್ಲಿ ಧಾರಾವಾಹಿ ನಿರ್ದೇಶನ ಮಾಡುತ್ತಿರುವುದು ವಿಶೇಷ. ಬರೀ ನಿರ್ದೇಶನ ಅಷ್ಟೇಅಲ್ಲ ಅನಿರುದ್ಧ್ ಜೊತೆಗೆ ಎಸ್‌. ನಾರಾಯಣ್ ಸಹ ಧಾರಾವಾಹಿಯಲ್ಲಿ ನಟಿಸ್ತಿದ್ದಾರೆ.

    ಸಂತಸ ಹಂಚಿಕೊಂಡ ಅನಿರುದ್ಧ್

    ಸಂತಸ ಹಂಚಿಕೊಂಡ ಅನಿರುದ್ಧ್

    'ಸೂರ್ಯವಂಶ' ಧಾರಾವಾಹಿಯಲ್ಲಿ ನಟಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿರುವ ಅನಿರುದ್ಧ್ "ಅತ್ಯಂತ ಸಂತೋಷದಿಂದ ತಮ್ಮೆಲ್ಲರ ಜೊತೆ ಒಂದು ಸಿಹಿ ಸುದ್ದಿ ಹಂಚಿಕೊಳ್ಳುತ್ತಾ ಇದ್ದೇನೆ. ನಮ್ಮೆಲ್ಲರ ನೆಚ್ಚಿನ ಉದಯ ವಾಹಿನಿಯಲ್ಲಿ ಅತಿ ಶೀಘ್ರದಲ್ಲಿ ಪ್ರಸಾರವಾಗಲಿರುವ ಕಲಾ ಸಾಮ್ರಾಟ್ ಎಸ್. ನಾರಾಯಣ್ ಸರ್ ರವರ ರಚನೆ ಹಾಗೂ ನಿರ್ದೇಶನದ ಹೊಸ ಧಾರಾವಾಹಿ 'ಸೂರ್ಯವಂಶ' ದಲ್ಲಿ ನಾನು ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಾ ಇದ್ದೇನೆ. ಇದು ತಮ್ಮೆಲ್ಲರ ಹಾರೈಕೆ, ಆಶೀರ್ವಾದಗಳ ಫಲ. ತಮ್ಮ ಪ್ರೀತಿ, ಪ್ರೋತ್ಸಾಹ ನನ್ನ ಮೇಲೆ ಸದಾ ಇರುತ್ತೆ ಅನ್ನೋ ಭರವಸೆ ನನಗಿದೆ" ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

    ಹೊಸ ಮನೆ ಗೃಹ ಪ್ರವೇಶ

    ಹೊಸ ಮನೆ ಗೃಹ ಪ್ರವೇಶ

    ಇತ್ತೀಚೆಗೆ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಹೊಸ ಮನೆಯ ಗೃಹಪ್ರವೇಶ ನಡೆದಿತ್ತು. ಕೆಲ ದಿನಗಳಿಂದ ಹೊಸ ಮನೆಯ ನಿರ್ಮಾಣದ ಕೆಲಸಗಳಲ್ಲಿ ಓಡಾಡಿಕೊಂಡಿದ್ದರು. 70ರ ದಶಕದಲ್ಲಿ ಜಯನಗರದಲ್ಲಿ ದಾದಾ ಮನೆ ಕಟ್ಟಿಸಿದ್ದರು. ಅದನ್ನು ಕೆಡವಿ ಹೊಸ ಮನೆಯನ್ನು ನಿರ್ಮಾಣ ಮಾಡಲಾಗಿದೆ. 'ವಲ್ಮೀಕ' ಹೆಸರಿನ ಮನೆ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಚಿತ್ರರಂಗದ ಗಣ್ಯರು ಭಾಗಿ ಆಗಿದ್ದರು. ಮನೆ ಗೃಹಪ್ರವೇಶ ನಂತರ ಅನಿರುದ್ಧ್ ಹೊಸ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

    ಆರೂರು ಜಗದೀಶ್ ಏನಂತಾರೆ?

    ಆರೂರು ಜಗದೀಶ್ ಏನಂತಾರೆ?

    'ಜೊತೆ ಜೊತೆಯಲಿ' ಧಾರಾವಾಹಿ ಶೂಟಿಂಗ್ ವೇಳೆ ಅನಿರುದ್ಧ್ ಕಿರಿಕ್ ಮಾಡಿದ್ದರು ಎಂದು ನಿರ್ಮಾಪಕ ಆರೂರು ಜಗದೀಶ್ ಹೇಳಿದ್ದರು. ವಾಹಿನಿಯ ಮುಖ್ಯಸ್ಥರ ಜೊತೆ ಮಾತನಾಡಿ ಅನಿರುದ್ಧ್ ಅವರನ್ನು ಧಾರಾವಾಹಿಯಿಂದ ಕೈಬಿಟ್ಟಿದ್ದರು. 2 ವರ್ಷಗಳ ಕಾಲ ಕಿರುತೆರೆ ಕಾರ್ಯಕ್ರಗಳಿಂದ ದೂರ ಇಡುವಂತೆ ವಾಹಿನಿಗಳ ಮುಖ್ಯಸ್ಥರ ಜೊತೆ ಚರ್ಚೆಸಿದ್ದರು. ಇದೀಗ ಅನಿರುದ್ಧ್ 'ಸೂರ್ಯವಂಶ' ಧಾರಾವಾಹಿಯಲ್ಲಿ ನಟಿಸುತ್ತಿರುವ ಬಗ್ಗೆ ಜಗದೀಶ್ ಏನು ಹೇಳುತ್ತಾರೋ ಕಾದು ನೋಡಬೇಕು.

    English summary
    Jothe Jotheyali serial actor Anirudh jatkar to appear in new serial titled Suryavamsha. Anirudh surprises fans with good news. Know more.
    Thursday, December 8, 2022, 8:53
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X