Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಿಡಿದೆದ್ದ ಅನು ಸಿರಿಮನೆ, ಮುಂದೈತೆ ಮಾರಿ ಹಬ್ಬ!
'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಅನುಸಿರಿಮನೆಗೆ ಈಗ ಎಲ್ಲಾ ಸತ್ಯವೂ ಅರ್ಥವಾಗಿದೆ. ತಾನು ಹುಟ್ಟಿರುವುದೇ ರಾಜ ವರ್ಧರ್ನ್ ಹಾಗೂ ರಾಜನಂದಿನಿ ಸಾವಿಗೆ ನ್ಯಾಯ ಕೊಡಿಸುವುದಕ್ಕೆ ಎಂಬುದನ್ನು ಅರ್ಥ ಮಾಡಿಕೊಂಡಿದ್ದಾಳೆ.
ಈಗ ಆರ್ಯವರ್ಧನ್ ನಿಂದ ಎಲ್ಲಾ ಆಡಳಿತವನ್ನು ಹರ್ಷವರ್ಧನ್ಗೆ ಶಿಫ್ಟ್ ಮಾಡಲು ಮುಂದಾಗಿದ್ದಾಳೆ. ಈ ಬಗ್ಗೆ ಈಗಾಗಲೇ ಮೀರಾ ಪ್ರಶ್ನೆ ಮಾಡಿದ್ದಕ್ಕೆ ವಾರ್ನ್ ಕೂಡ ಮಾಡಿದ್ದಳು. ಆದರೆ ಮೀರಾ ಈ ಎಲ್ಲಾ ವಿಚಾರವನ್ನು ಆರ್ಯವರ್ಧನ್ಗೆ ಹೇಳಬೇಕು ಎಂದು ಅಂದುಕೊಂಡಿದ್ದಾಳೆ.
ಬೆಟ್ಟದ ಹೂ: ಮಂದಾರ ಮಾತಿನಿಂದ ಹೂವಿ ಮೇಲೆ ಅನುಮಾನ ಶುರು ಮಾಡಿದಳಾ ಮಾಲಿನಿ?
ಲಂಡನ್ನಿಂದ ಆರ್ಯವರ್ಧನ್ ಮನೆಗೆ ಬಂದಿದ್ದು, ಅನು ಸ್ವಾಗತಿಸಿದ್ದಾಳೆ. ಬೆಳಗೆದ್ದು ಆಫೀಸಿಗೆ ಹೋಗಲು ತಯಾರಾದ ಆರ್ಯನನ್ನು ತಡೆಯಲು ಮಾಸ್ಟರ್ ಪ್ಲಾನ್ ಮಾಡಿದ್ದಾಳೆ. ಆರ್ಯನ ಫೋನ್ಗೆ ಮೀರಾ ಕರೆ ಮಾಡಿದ್ದಾಳೆ. ಆದರೆ ಅನು ಫೋನ್ ಸ್ವಿಚ್ ಆಫ್ ಮಾಡಿದ್ದಾಳೆ.
ಆರ್ಯಗೆ ಹುಷಾರಿಲ್ಲ ಎಂದು ಹೇಳಿದ ಅನು ಕಷಾಯ ತಯಾರಿಸಿದ್ದಾಳೆ. ಶಾರದಾ ದೇವಿ ಬಳಿ ಆರ್ಯಗೆ ಹುಷಾರಿಲ್ಲಾದಿದ್ದರೂ ಸುಳ್ಳು ಹೇಳುತ್ತಾರೆ. ಅವರು ಇವತ್ತು ಮನೆಯಲ್ಲೇ ರೆಸ್ಟ್ ಮಾಡಲಿ ಎಂದು ಹೇಳಿದ್ದಾಳೆ. ಆಫೀಸಿಗೆ ಹೋಗಲೆಂದು ಹೊರಟು ಬಂದ ಆರ್ಯನನ್ನು ಎಲ್ಲರೂ ಸೇರಿ ತಡೆದಿದ್ದಾರೆ. ಅನು ಹಾಗೂ ಹರ್ಷ ಇಬ್ಬರು ಆಫೀಸಿಗೆ ಹೊರಟಿದ್ದು, ಅನು ದಾರಿ ಮಧ್ಯೆ ಮೀರಾ ಮನೆಗೆ ಹೋಗಿದ್ದಾಳೆ.
'ಸರ್ಕಾರು ವಾರಿ ಪಾಟ' ಭರ್ಜರಿ ಕಲೆಕ್ಷನ್: ಮತ್ತೆ ಗೆದ್ದ ಮಹೇಶ್ ಬಾಬು!
ಆಫೀಸಿಗೆ ಇವತ್ತು ನಿಮ್ಮ ಬಾಸ್ ಅಂದರೆ ಆರ್ಯ ಬರುತ್ತಿಲ್ಲ. ಅವರು ಬಂದ ಕೂಡಲೇ ಆಫೀಸಿನಲ್ಲಿ ಏನೆಲ್ಲಾ ಬದಲಾವಣೆಯಾಗಿದೆ ಎಂದು ವರದಿ ಒಪ್ಪಿಸಬೇಕು ಎಂದು ಕೊಂಡಿದ್ದೀಯಾ ಅಲ್ವಾ? ಆದರೆ ಅದನ್ನು ಮರೆತುಬಿಡು. ಯಾವುದೇ ಕಾರಣಕ್ಕೂ ಆಫೀಸ್ನಲ್ಲಿ ನಡೆದಿದ್ದನ್ನು ಆರ್ಯಗೆ ಹೇಳಬಾರದು. ಆಮೇಲೆ ಇವತ್ತು ಆರ್ಯ ಸರ್ ಆಫೀಸ್ಗೆ ಬರುತ್ತಿಲ್ಲ. ನೆನಪಿಟ್ಟುಕೊ. ಆರ್ಯವರ್ಧನ್ ಈ ಆಫೀಸಿಗೆ ಓನರ್ ಅಲ್ಲ. ಬದಲಿಗೆ ಕೇರ್ ಟೇಕರ್ ಅಷ್ಟೇ. ಆರ್ಯನಿಗೆ ಏನಾದರೂ ಹೇಳಬೇಕು ಎಂದುಕೊಂಡಿದ್ದರೆ. ಅದನ್ನು ಮರೆತು ಬಿಡು. ಇದು ನನ್ನ ಆರ್ಡರ್ ಅಂತಾನಾದರೂ ತಿಳಿದುಕೋ. ಇಲ್ಲವೇ ನನ್ನ ವಾರ್ನಿಂಗ್ ಅಂತನಾದರೂ ತಿಳಿದುಕೋ. ಬಟ್ ಹೇಳಿದ್ದನ್ನಷ್ಟೇ ಮಾಡು. ನಿನ್ನ ನೀಯತ್ತು, ನಿಷ್ಠೆಯನ್ನು ಆರ್ಯ ಸರ್ಗೆ ಮಾತ್ರ ತೋರಿಸುವುದಲ್ಲ. ಆಫೀಸಿನ ಮೇಲೂ ತೋರಿಸು ಎಂದು ಹೇಳುತ್ತಾಳೆ.
ಇತ್ತ ಆರ್ಯ ಮನೆಗೆ ಪುಷ್ಪ ಮತ್ತು ಸುಬ್ಬು ಬಂದಿದ್ದಾರೆ. ಅನು ವಿಚಿತ್ರವಾಗಿ ಮಾತನಾಡಿದ್ದು, ತಾನೇ ರಾಜನಂದಿನಿ ಎಂದು ಕೊಂಡಿರುವುದು ಎಲ್ಲವೂ ಪುಷ್ಪ ಹಾಗೂ ಸುಬ್ಬು ಮನದಲ್ಲಿ ಆತಂಕವನ್ನು ಸೃಷ್ಟಿ ಮಾಡಿದೆ. ಅನುಗೆ ಏನಾಗಿದೆ? ಯಾಕೆ ಹೀಗೆ ಮಾತನಾಡುತ್ತಿದ್ದಾಳೆ? ಅತ್ತೆ ಮನೆಯಲ್ಲೂ ಹೀಗೆ ನಡೆದುಕೊಳ್ಳುತ್ತಿದ್ದಾಳಾ ಅನ್ನೋ ಅನುಮಾನದಲ್ಲಿ ಇಬ್ಬರೂ ಆರ್ಯನ ಮನೆಗೆ ಬಂದಿದ್ದಾರೆ. ಆಫೀಸ್ಗೆ ಹೋಗದೆ ಮನೆಯಲ್ಲೇ ಕುಳಿತಿರುವ ಆರ್ಯ ಶಾರದಾ ದೇವಿ ಜೊತೆಗೆ ಮಾತನಾಡುತ್ತಿದ್ದಾನೆ. ಇತ್ತ ಪುಷ್ಪ ಹಾಗೂ ಸುಬ್ಬು ಬಂದಿದ್ದಕ್ಕೆ ಖುಷಿ ಪಟ್ಟಿದ್ದಾನೆ. ಆದರೆ ಇವರಿಬ್ಬರು ಬಂದಿರುವುದು ಅನುಗೆ ಗೊತ್ತಿಲ್ಲ.
ಕಾರ್ತಿಕ್ ಜೊತೆ ಮದುವೆಯಾಗುವುದಿಲ್ಲ ಎಂದ ಸತ್ಯ!
ಆಫೀಸಿಗೆ ಬಂದ ಮೀರಾ ಶಾಕ್ ಆಗಿದ್ದಾಳೆ. ಝೇಂಡೇ ಬಳಿ ತನ್ನ ಮನದ ಗೊಂದಲವನ್ನು ಹೇಳಿಕೊಂಡಿದ್ದಾಳೆ. ಅನು ಮೊದಲಿನಂತಿಲ್ಲ. ಅವಳಿಗೆ ಏನಾಗಿದೆ.? ಯಾಕೆ ಹೀಗಾಡುತ್ತಿದ್ದಾಳೆ ಎಂದು ಮೀರಾ ಹೇಳಿದ್ದಾಳೆ. ಏನಾಯ್ತು ಎಂದು ಝೇಂಡೇ ಕೇಳಿದ್ದಕ್ಕೆ, ಅನು ಓನರ್ ರೀತಿ ಮಾತನಾಡುತ್ತಿದ್ದಾಳೆ. ಅವಳಿಗೆ ಇಷ್ಟು ಕಾನ್ಫಿಡೆನ್ಸ್, ಧೈರ್ಯ ಎಲ್ಲಿಂದ ಬಂತು ಎಂದು ಪ್ರಶ್ನಿಸಿದ್ದಾಳೆ. ಇದಕ್ಕೆ ಝೇಂಡೇ ಕೂಡ ಶಾಕ್ ಆಗಿದ್ದಾನೆ.