ವಿಚ್ಚೇದನದ ವದಂತಿ : ಡಿವೋರ್ಸ್ ಆದರೆ ನಿಮಗೆ ಖುಷಿನಾ. ಕೆರಳಿದ ಖ್ಯಾತ ನಟಿ
ಬಣ್ಣದ ಲೋಕದಲ್ಲಿ ಕಿತಾಪತಿ ಮಾಡಲು ಕಿರಾತಕರು ಹೊಂಚು ಹಾಕಿ ಕಾದು ಕುಂತಿರುತ್ತಾರೆ. ಹಾಗಂತೆ-ಹೀಗಂತೆ ಎಂದು ಕತ್ತಲಲ್ಲಿ ಗುಂಡು ಹಾರಿಸುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಇಲ್ಲ ಸಲ್ಲದ ಸುದ್ದಿಯನ್ನು ತೇಲಿ ಬಿಟ್ಟು ಅದೆಲ್ಲೋ ಕುಳಿತು ಮಜಾ ನೋಡುತ್ತಾರೆ.
ಹೀಗೆ ಹರಿಬಿಡಲಾದ ಸುದ್ದಿಯಲ್ಲಿ ಸತ್ಯಾಂಶ ಇಲ್ಲ ಎನ್ನುವ ವಿಚಾರ ಗೊತ್ತಿದ್ದ ಹಿನ್ನೆಲೆ ಹಲವರು ಸುಮ್ಮನಾಗುತ್ತಾರೆ. ಪ್ರತಿಕ್ರಿಯೆ ನೀಡಲು ಹೋಗುವುದಿಲ್ಲ. ಯಾರು ಏನೇ ಅಂದರೂ ಯಾವುದಕ್ಕೂ ಕೇರ್ ಮಾಡದೇ ಬದುಕುತ್ತಾರೆ.

ಮತ್ತೂ ಕೆಲವರು ತಮ್ಮ ಕುರಿತ ಈ ಇಲ್ಲ ಸಲ್ಲದ ಮಾತುಗಳನ್ನು ಕೇಳಿ ಕೆರಳಿ ಕೆಂಡವಾಗುತ್ತಾರೆ. ಕೆಲವರು ನ್ಯಾಯಾಲಯದ ಮೊರೆ ಹೋಗುತ್ತಾರೆ. ಇನ್ನು ಕೆಲವರು ತಮ್ಮ ಸೋಶಿಯಲ್ ಮೀಡಿಯಾ ಮೂಲಕ ತಮ್ಮ ಕುರಿತು ಸುಳ್ಳು ಸುದ್ದಿ ಹಬ್ಬಿಸುವರಿಗೆ ಉಗಿದು ಉಪ್ಪಿನಕಾಯಿ ಹಾಕುತ್ತಾರೆ. ಉದಾಹರಣೆಗೆ ಕನಿಕಾ ಮಹೇಶ್ವರಿ ಅವರನ್ನೇ ತೆಗೆದುಕೊಳ್ಳಿ.
ಹೌದು. ಕನಿಕಾ ಮಹೇಶ್ವರಿ.. ಹಿಂದಿ ಕಿರುತೆರೆಯ ಖ್ಯಾತ ಚೆಲುವೆ. ವಿಲನ್ ಪಾತ್ರಕ್ಕೆ ಹೆಸರುವಾಸಿ ಇವರು. "ಕಭಿ ಆಯೇ ನಾ ಜುದಾಯಿ" ಧಾರಾವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟ ಕನಿಕಾಗೆ "ದಿಯಾ ಔರ್ ಬಾತಿ ಹಮ್ " ಅಪಾರವಾದ ಜನಪ್ರಿಯತೆಯನ್ನು ತಂದು ಕೊಡ್ತು.

"ಕಹಾನಿ ಘರ್ ಘರ್ ಕೀ".. " ಗೀತ್ -ಹುಯಿ ಸಬ್ಸೆ ಪರಾಯಿ".. "ರಾಜಾ ಕೀ ಆಯೇಗಿ ಬಾರಾತ್".. " ತು ಸೂರಜ್ ಮೈ ಸಾಂಜ್ ಪಿಯಾಜಿ".. ಇವರ ಕೆಲ ಖ್ಯಾತ ಧಾರಾವಾಹಿಗಳು.


Click it and Unblock the Notifications