Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಊರು ಬಿಟ್ಟು ಹೋಗ್ತಾಳಾ ಅಂಜಲಿ.? ಡಿಕೆ-ಅಂಜಲಿ ಸೇರುವುದು ಯಾವಾಗ.?
ಆಕ್ಸಿಡೆಂಟ್ ಆದ ಹಾಗೆ ನಟಿಸುತ್ತಿರುವ ಅಂಜಲಿ, ಆಸ್ಪತ್ರೆಯಿಂದಲೇ ಕಿಶನ್ ಗೆ ಸಹಾಯ ಮಾಡುತ್ತಾಳೆ. ಇನ್ನೂ ಎಕ್ಸಿಬಿಷನ್ ನಲ್ಲಿ ಡಿಕೆ ಹಾಗೂ ಕಿಶನ್ ಆಕಸ್ಮಿಕವಾಗಿ ಭೇಟಿ ಆಗುತ್ತಾರೆ. ಈ ವೇಳೆ ಅಂಜಲಿ ಆಸ್ಪತ್ರೆಯಲ್ಲಿ ಇರುವ ವಿಷಯ ಡಿಕೆಗೆ ಗೊತ್ತಾಗುತ್ತೆ. ಕೂಡಲೆ ಅಂಜಲಿಯನ್ನ ನೋಡಲು ಆಸ್ಪತ್ರೆಗೆ ಹೋಗುತ್ತಾನೆ ಡಿಕೆ.
ಅಂಜಲಿ ಮತ್ತು ಅವಳ ಅಕ್ಕ ಉಪಾಯ ಮಾಡಿ ಅವಳ ಜಾಗಕ್ಕೆ ಬೇರೆಯೊಬ್ಬರನ್ನ ಮಲಗಿಸಿ ಡಿಕೆ ಕಣ್ಣಿಂದ ತಪ್ಪಿಸಿಕೊಳ್ಳುತ್ತಾರೆ. ಅಂಜಲಿ ಆಸ್ಪತ್ರೆಯಿಂದ ಮನೆಗೆ ಬರುವಷ್ಟರಲ್ಲಿ ಕಿಶನ್ ತಾಯಿ ಅವಳ ಮನೆಗೆ ಬಂದು, ಮದುವೆ ಬಗ್ಗೆ ಪ್ರಸ್ತಾಪ ಮಾಡ್ತಾರೆ.
ಇತ್ತ ಅಂಜಲಿಗೆ ನಿಜ ಹೇಳಲಾಗದೇ ಕೊರಗುತ್ತಾಳೆ. ''ತನಗೆ ಮದುವೆಯಾಗಿದೆ'' ಎಂದು ಅಂಜಲಿ ಹೇಳಿದ್ರೂ, ಅದನ್ನ ಕಿಶನ್ ಕೇಳುವುದಿಲ್ಲ. "ನಿಮ್ಮ ಗಂಡನನ್ನ ನನ್ನ ಮುಂದೆ ತಂದು ನಿಲ್ಲಿಸಿ, ಆಗ ನಾನು ಒಪ್ಪುವೆ" ಎಂದು ಕಿಶನ್ ಹೇಳುತ್ತಾನೆ.
ಗಾಬರಿಗೊಂಡ ಅಂಜಲಿ: ಏನಾಗುವುದು ಇಂದು 'ಕಣ್ಮಣಿ'ಯಲ್ಲಿ.?
ಇತ್ತ ಸುಧಾ ಕೈಗೆ ಭಾಸ್ಕರ್ ಹಣ ಸಮೇತ ಸಿಕ್ಕಿಹಾಕಿಕೊಳ್ಳುತ್ತಾನೆ. ಆ ಹಣವನ್ನ ಡಿಕೆ ಕೈಗೆ ಒಪ್ಪಿಸುವ ಸುಧಾ ತನ್ನ ಗಂಡನ ಬಗ್ಗೆ ಸತ್ಯ ಹೇಳುವುದಿಲ್ಲ. ಅಪರಿಚಿತ ವ್ಯಕ್ತಿ ತನ್ನ ಕೋಣೆಯಲ್ಲಿ ಇಷ್ಟೊಂದು ಹಣ ಇಡೋದಕ್ಕೆ ಸಾಧ್ಯ ಇಲ್ಲ. ಇದರಲ್ಲಿ ತನ್ನ ಮನೆಯವರ ಕೈವಾಡ ಇದೆ ಎಂದು ಅವರನ್ನ ಕಂಡುಹಿಡಿಯಲು ಡಿಕೆ ಮುಂದಾಗುತ್ತಾನೆ.
ಅಂಜಲಿಯ 'ಆಕ್ಸಿಡೆಂಟ್' ನಾಟಕದ ಗುಟ್ಟು ರಟ್ಟಾಗುತ್ತಾ.?
ಇನ್ನೊಂದು ಕಡೆ ಕಿಶನ್ ಚಿಕ್ಕಪ್ಪ "ಡಿಕೆ ಎದುರು ಬಂದು ನಿಲ್ಲಿ, ನನ್ನ ಪ್ರಾಣ ಉಳಿಸಿ" ಎಂದು ಪದೇ ಪದೇ ಅಂಜಲಿಯನ್ನ ಕಾಡುತ್ತಾರೆ. ಕಿಶನ್ ನಿಂದ, ಅವನ ಚಿಕ್ಕಪ್ಪನಿಂದ ತಪ್ಪಿಸಿಕೊಳ್ಳಲು ಊರು ಬಿಟ್ಟು ಹೋಗಲು ನಿರ್ಧರಿಸುತ್ತಾಳೆ ಅಂಜಲಿ. ಅಷ್ಟರಲ್ಲಿ ಡಿಕೆ ಅಸ್ಸಿಸ್ಟೆಂಟ್ ಅಂಜಲಿಯನ್ನ ನೋಡಿ ಕಾವ್ಯ ಎಂದು ಗುರುತಿಸಿ, ಡಿಕೆಗೆ "ಕಾವ್ಯ ಬದುಕಿದ್ದಾರೆ" ಎಂದು ವಿಷಯ ತಿಳಿಸುತ್ತಾನೆ.
ಹಾಗಾದ್ರೆ ಸಿಕ್ಕ ಸುಳಿವು ಹಿಡಿದು ಅಂಜಲಿ ಇರೋ ಜಾಗಕ್ಕೆ ಬಂದುಬಿಡ್ತಾನಾ ಡಿಕೆ? ತಪ್ಪದೇ ವೀಕ್ಷಿಸಿ ಇವತ್ತಿನ ಕುತೂಹಲ ಭರಿತ ಸಂಚಿಕೆ. ಕಣ್ಮಣಿ ರಾತ್ರಿ 10ಕ್ಕೆ.