Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಊರು ಬಿಟ್ಟು ಹೋಗ್ತಾಳಾ ಅಂಜಲಿ.? ಡಿಕೆ-ಅಂಜಲಿ ಸೇರುವುದು ಯಾವಾಗ.?
ಆಕ್ಸಿಡೆಂಟ್ ಆದ ಹಾಗೆ ನಟಿಸುತ್ತಿರುವ ಅಂಜಲಿ, ಆಸ್ಪತ್ರೆಯಿಂದಲೇ ಕಿಶನ್ ಗೆ ಸಹಾಯ ಮಾಡುತ್ತಾಳೆ. ಇನ್ನೂ ಎಕ್ಸಿಬಿಷನ್ ನಲ್ಲಿ ಡಿಕೆ ಹಾಗೂ ಕಿಶನ್ ಆಕಸ್ಮಿಕವಾಗಿ ಭೇಟಿ ಆಗುತ್ತಾರೆ. ಈ ವೇಳೆ ಅಂಜಲಿ ಆಸ್ಪತ್ರೆಯಲ್ಲಿ ಇರುವ ವಿಷಯ ಡಿಕೆಗೆ ಗೊತ್ತಾಗುತ್ತೆ. ಕೂಡಲೆ ಅಂಜಲಿಯನ್ನ ನೋಡಲು ಆಸ್ಪತ್ರೆಗೆ ಹೋಗುತ್ತಾನೆ ಡಿಕೆ.
ಅಂಜಲಿ ಮತ್ತು ಅವಳ ಅಕ್ಕ ಉಪಾಯ ಮಾಡಿ ಅವಳ ಜಾಗಕ್ಕೆ ಬೇರೆಯೊಬ್ಬರನ್ನ ಮಲಗಿಸಿ ಡಿಕೆ ಕಣ್ಣಿಂದ ತಪ್ಪಿಸಿಕೊಳ್ಳುತ್ತಾರೆ. ಅಂಜಲಿ ಆಸ್ಪತ್ರೆಯಿಂದ ಮನೆಗೆ ಬರುವಷ್ಟರಲ್ಲಿ ಕಿಶನ್ ತಾಯಿ ಅವಳ ಮನೆಗೆ ಬಂದು, ಮದುವೆ ಬಗ್ಗೆ ಪ್ರಸ್ತಾಪ ಮಾಡ್ತಾರೆ.
ಇತ್ತ ಅಂಜಲಿಗೆ ನಿಜ ಹೇಳಲಾಗದೇ ಕೊರಗುತ್ತಾಳೆ. ''ತನಗೆ ಮದುವೆಯಾಗಿದೆ'' ಎಂದು ಅಂಜಲಿ ಹೇಳಿದ್ರೂ, ಅದನ್ನ ಕಿಶನ್ ಕೇಳುವುದಿಲ್ಲ. "ನಿಮ್ಮ ಗಂಡನನ್ನ ನನ್ನ ಮುಂದೆ ತಂದು ನಿಲ್ಲಿಸಿ, ಆಗ ನಾನು ಒಪ್ಪುವೆ" ಎಂದು ಕಿಶನ್ ಹೇಳುತ್ತಾನೆ.
ಗಾಬರಿಗೊಂಡ ಅಂಜಲಿ: ಏನಾಗುವುದು ಇಂದು 'ಕಣ್ಮಣಿ'ಯಲ್ಲಿ.?
ಇತ್ತ ಸುಧಾ ಕೈಗೆ ಭಾಸ್ಕರ್ ಹಣ ಸಮೇತ ಸಿಕ್ಕಿಹಾಕಿಕೊಳ್ಳುತ್ತಾನೆ. ಆ ಹಣವನ್ನ ಡಿಕೆ ಕೈಗೆ ಒಪ್ಪಿಸುವ ಸುಧಾ ತನ್ನ ಗಂಡನ ಬಗ್ಗೆ ಸತ್ಯ ಹೇಳುವುದಿಲ್ಲ. ಅಪರಿಚಿತ ವ್ಯಕ್ತಿ ತನ್ನ ಕೋಣೆಯಲ್ಲಿ ಇಷ್ಟೊಂದು ಹಣ ಇಡೋದಕ್ಕೆ ಸಾಧ್ಯ ಇಲ್ಲ. ಇದರಲ್ಲಿ ತನ್ನ ಮನೆಯವರ ಕೈವಾಡ ಇದೆ ಎಂದು ಅವರನ್ನ ಕಂಡುಹಿಡಿಯಲು ಡಿಕೆ ಮುಂದಾಗುತ್ತಾನೆ.
ಅಂಜಲಿಯ 'ಆಕ್ಸಿಡೆಂಟ್' ನಾಟಕದ ಗುಟ್ಟು ರಟ್ಟಾಗುತ್ತಾ.?
ಇನ್ನೊಂದು ಕಡೆ ಕಿಶನ್ ಚಿಕ್ಕಪ್ಪ "ಡಿಕೆ ಎದುರು ಬಂದು ನಿಲ್ಲಿ, ನನ್ನ ಪ್ರಾಣ ಉಳಿಸಿ" ಎಂದು ಪದೇ ಪದೇ ಅಂಜಲಿಯನ್ನ ಕಾಡುತ್ತಾರೆ. ಕಿಶನ್ ನಿಂದ, ಅವನ ಚಿಕ್ಕಪ್ಪನಿಂದ ತಪ್ಪಿಸಿಕೊಳ್ಳಲು ಊರು ಬಿಟ್ಟು ಹೋಗಲು ನಿರ್ಧರಿಸುತ್ತಾಳೆ ಅಂಜಲಿ. ಅಷ್ಟರಲ್ಲಿ ಡಿಕೆ ಅಸ್ಸಿಸ್ಟೆಂಟ್ ಅಂಜಲಿಯನ್ನ ನೋಡಿ ಕಾವ್ಯ ಎಂದು ಗುರುತಿಸಿ, ಡಿಕೆಗೆ "ಕಾವ್ಯ ಬದುಕಿದ್ದಾರೆ" ಎಂದು ವಿಷಯ ತಿಳಿಸುತ್ತಾನೆ.
ಹಾಗಾದ್ರೆ ಸಿಕ್ಕ ಸುಳಿವು ಹಿಡಿದು ಅಂಜಲಿ ಇರೋ ಜಾಗಕ್ಕೆ ಬಂದುಬಿಡ್ತಾನಾ ಡಿಕೆ? ತಪ್ಪದೇ ವೀಕ್ಷಿಸಿ ಇವತ್ತಿನ ಕುತೂಹಲ ಭರಿತ ಸಂಚಿಕೆ. ಕಣ್ಮಣಿ ರಾತ್ರಿ 10ಕ್ಕೆ.