'ಕಣ್ಮಣಿ' ಧಾರಾವಾಹಿಯಲ್ಲಿ ಇಂದು ಅಂಜಲಿಗೆ ಕಾದಿದೆ ಅಚ್ಚರಿ.!
ಕಿಶನ್ ನ ಮತ್ತೆ ಮೊದಲಿನಂತೆ ಮಾಡಲು, ಹೊಸ ಪ್ರಾಜೆಕ್ಟ್ ಒಪ್ಪಿಕೊಳ್ಳುವಂತೆ ಅವನ ಮನಪರಿವರ್ತಿಸಲು, ಅಂಜಲಿ ಅವನ ಮನೆಗೆ ಬರುತ್ತಾಳೆ. ಆಗ ಕಿಶನ್ ತಾಯಿ ಅವಳನ್ನ ಮನೆ ಸೊಸೆಯಂತೆ ನೋಡಿಕೊಳ್ಳುತ್ತಾರೆ. "ನೀವು ಒಪ್ಪದಿದ್ದರೂ ಈ ಮನೆ ಸೊಸೆ ನೀವೇ" ಎಂದು ಅಂಜಲಿಯನ್ನ ಕೀರ್ತಿ ರೇಗಿಸುತ್ತಾಳೆ.
ಅಂಜಲಿ ಕಿಶನ್ ನ ಭೇಟಿ ಮಾಡಿ, ಮತ್ತೆ ಕೆಲಸ ಮಾಡುವಂತೆ ಅವನಲ್ಲಿ ಉತ್ಸಾಹ ತುಂಬುತ್ತಾಳೆ. ಅವಳ ಮಾತಿಗೆ ಒಪ್ಪುವ ಕಿಶನ್ ತನ್ನ ಜೊತೆ ಅಂಜಲಿನೂ ಕೆಲಸ ಮಾಡುವಂತೆ ಕೇಳಿಕೊಳ್ಳುತ್ತಾನೆ.
ಅಂಜಲಿ ಕಿಶನ್ ನ ಒಪ್ಪಿಕೊಳ್ಳದೇ ಇರುವುದನ್ನ ಮನೆಯವರಿಂದ ಮುಚ್ಚಿಡಬೇಕು ಇಲ್ಲಾಂದ್ರೆ ಅವರು ಬೇಸರ ಮಾಡಿಕೊಳ್ಳುತ್ತಾರೆ ಎಂದು ಕೀರ್ತಿ, ಅಂಜಲಿ ಬಳಿ ಭಾಷೆ ತೆಗೆದುಕೊಳ್ಳುತ್ತಾಳೆ. ಯಾರಿಗೂ ಬೇಸರ ಮಾಡಬಾರದು ಎನ್ನುವ ಉದ್ದೇಶದಿಂದ ಅಂಜಲಿ ಕಿಶನ್ ಮನೆಯವರಿಗೆ ಸತ್ಯ ಹೇಳದೇ ಸುಮ್ಮನಾಗುತ್ತಾಳೆ.

ಕೀರ್ತಿ ಉಪಾಯ ಮಾಡಿ ಅಂಜಲಿ ಕಿಶನ್ ಒಟ್ಟಿಗೆ ಕೂತು ಟಿಫಿನ್ ಮಾಡುವಂತೆ ಮಾಡ್ತಾಳೆ. ಅಂಜಲಿಗೆ ಮುಜುಗರವಾದರೂ ಕಿಶನ್ ತಾಯಿ ಎದುರು ಸುಮ್ಮನಿರುತ್ತಾಳೆ.
ಇತ್ತ ಡಿಕೆ ಕಾವ್ಯಾಳ ಫೋಟೋ ನೋಡುತ್ತ, ಅವಳನ್ನ ನೆನಪಿಸಿಕೊಳ್ಳುತ್ತಾನೆ. ಡಿಕೆ ಕೈಯಿಂದ ತಪ್ಪಿಸಿಕೊಳ್ಳುಲು ಜಗದೀಶ್ ಸರ್ಕಸ್ ಮಾಡ್ತಾನೆ. ಖುಷಿಯಲ್ಲಿ ಅಂಜಲಿ ಜೊತೆ ಆಫೀಸ್ ಗೆ ಬರುವ ಕಿಶನ್, ತಮಗೆ ಸಿಕ್ಕಿರುವ ಪ್ರಾಜೆಕ್ಟ್ ಬಗ್ಗೆ ಎಲ್ಲರಿಗೂ ವಿವರಿಸುತ್ತಾರೆ. ಅಂಜಲಿ ಕೂಡ ಕೆಲವು ಸಲಹೆ ಕೊಡುತ್ತಾಳೆ. ತಮಗೆ ಪ್ರಾಜೆಕ್ಟ್ ಸಿಕ್ಕಿರುವ ಕಂಪನಿ ಹೆಸರು 'ಕಾವ್ಯ ಗಾರ್ಮೆಂಟ್ಸ್' ಎಂದು ಕಿಶನ್ ಹೇಳಿದಾಗ ಅಂಜಲಿ ಗಾಬರಿಯಾಗುತ್ತಾಳೆ. ಅದು ಡಿಕೆ ತನಗಾಗಿ ಕಟ್ಟಿಸಿದ ಕಂಪನಿ ಎಂದು ಬೆಚ್ಚಿಬೀಳ್ತಾಳೆ.
ಹಾಗಾದ್ರೆ ಅಂಜಲಿ ಕಿಶನ್ ಜೊತೆ ಡಿಕೆ ಪ್ರಾಜೆಕ್ಟ್ ಮಾಡಲು ಒಪ್ಪುತ್ತಾಳಾ? ತಪ್ಪದೇ ವೀಕ್ಷಿಸಿ ಇವತ್ತಿನ ಕುತೂಹಲ ಭರಿತ ಸಂಚಿಕೆ, 'ಕಣ್ಮಣಿ' ರಾತ್ರಿ 10ಕ್ಕೆ.


Click it and Unblock the Notifications











