Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಕಣ್ಮಣಿ' ಕಲ್ಯಾಣ: ಅಂಜಲಿ-ಕಿಶನ್ ಮದುವೆಗೆ ಡಿಕೆ ಅಡ್ಡಿ.?
ಉದಯ ಟಿವಿಯಲ್ಲಿ ರಾತ್ರಿ 10 ಗಂಟೆಗೆ ಪ್ರಸಾರ ಆಗುತ್ತಿರುವ 'ಕಣ್ಮಣಿ' ಧಾರಾವಾಹಿ ಹೊಸ ತಿರುವಿನೊಂದಿಗೆ ನಿಮ್ಮ ಮನೆಗೆ ಬರಲಿದೆ. ಎಲ್ಲ ಅಡೆತಡೆಗಳನ್ನ ಮೀರಿ ಕಿಶನ್-ಅಂಜಲಿ ಮದುವೆ ಸಂಭ್ರಮದಿಂದ ನಡೆಯುತ್ತಿದೆ.
ಡಿಕೆಯ ಬಂಧನದಿಂದ ತಪ್ಪಿಸಿಕೊಂಡು ಬಂದ ಕಾವ್ಯ, ಅಂಜಲಿಯಾಗಿ ಕಿಶನ್ ಜೊತೆ ಹೊಸ ಬಾಳಿಗೆ ಕಾಲಿಡುತ್ತಿದ್ದಾಳೆ. ಕಿಶನ್ ಪ್ರೀತಿಯನ್ನ ತಿರಸ್ಕಾರ ಮಾಡಲಾಗದ ಅಂಜಲಿ ಡಿಕೆಯ ಭಯದಲ್ಲೂ ಮದುವೆಗೆ ತಯಾರಾಗಿದ್ದಾಳೆ.
ಅಂಜಲಿಯ ಗಂಡ ಡಿಕೆ ಎಂಬ ವಿಷಯ ತಿಳಿಯದೇ ಕಿಶನ್ ಅವನನ್ನು ಮದುವೆಗೆ ಆಹ್ವಾನಿಸಿದ್ದಾನೆ. ಡಿಕೆ ಮದುವೆಗೆ ಬಾರದಂತೆ ತಡೆಯಲು ಅಂಜಲಿ ಜೊತೆ ಡಿಕೆ ಭಾವ ಭಾಸ್ಕರ್ ಕೈ ಜೋಡಿಸಿದ್ರೆ, ಅಂಜಲಿ ತಂದೆಯೂ ಮನೆಕೆಲಸದವನಾಗಿ ಮಗಳ ಮದುವೆಗೆ ಅಡ್ಡಿಯಾಗದಂತೆ ಕಾಯುತ್ತಿದ್ದಾನೆ.
ಡಿಕೆ ಮುಂದೆ ಜಗದೀಶ್ ಬಣ್ಣ ಬಯಲಾಗುತ್ತಾ.? 'ಕಣ್ಮಣಿ'ಯಲ್ಲಿ ಇಂದು ಏನಾಗ್ಬಹುದು.?
ಡಿಕೆಯಿಂದ, ಕಿಶನ್-ಅಂಜಲಿ ಮದುವೆ ನಿಂತು ಹೋಗುತ್ತಾ? ಮತ್ತೆ ಅಂಜಲಿ ಡಿಕೆ ಕೈವಶವಾಗ್ತಾಳಾ? ಮುಂದೆ ಕಿಶನ್ ಏನಾಗ್ತಾನೆ? ಹೀಗೆ ಹಲವು ತಿರುವುಗಳೊಂದಿಗೆ 'ಕಣ್ಮಣಿ' ರಾತ್ರಿ 10 ಗಂಟೆಗೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.
ಮದುವೆಗೆ ಉದಯ ಕುಟುಂಬದ ಇತರೆ ಧಾರಾವಾಹಿಯ ನಟ-ನಟಿಯರು ಆಗಮಿಸಲಿದ್ದು ಮದುವೆಗೆ ಮತ್ತಷ್ಟು ರಂಗು ತರಿಸಲಿದ್ದಾರೆ. 'ಮಾನಸ ಸರೋವರ' ಧಾರಾವಾಹಿಯ ನಾಯಕಿ ಸುನಿಧಿ, 'ಬ್ರಹ್ಮಾಸ್ತ್ರ'ದಿಂದ ಶಿವರಂಜಿನಿ, ಸಂತು, ಖುಷಿ ಮತ್ತು ಆನಂದ್ ಕಥೆಗೆ ಪೂರಕವಾಗಿ ಮದುವೆಗೆ ಬರಲಿದ್ದಾರೆ.
'ಕಣ್ಮಣಿ' ಧಾರಾವಾಹಿಯಲ್ಲಿ ಇಂದು ಅಂಜಲಿಗೆ ಕಾದಿದೆ ಅಚ್ಚರಿ.!
ತ್ರಿಕೋನ ಕಥೆಯ 'ಕಣ್ಮಣಿ' ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 10.00ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.