Don't Miss!
- Lifestyle ಕಂಡ ಕಂಡಲ್ಲಿ ಏಕೆ ಉಗುಳಬಾರದು ಗೊತ್ತಾ? ಈ ವಿಡಿಯೋ ನೋಡಿ..!
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- News ಮಂಡ್ಯದ ‘ಹಲವು ಸುಮಲತಾ’ ತಂತ್ರ ಬೆಂಗಳೂರು ಗ್ರಾಮಾಂತದಲ್ಲೂ ಬಂತಾ? ಮತ್ತೊಬ್ಬ ಡಾ ಸಿಎನ್ ಮಂಜುನಾಥ್ ಕಣಕ್ಕೆ!
- Sports IPL 2024: ರಾಜಸ್ಥಾನ್ ರಾಯಲ್ಸ್ vs ಡೆಲ್ಲಿ ಕ್ಯಾಪಿಟಲ್ಸ್ ರೋಚಕ ಪಂದ್ಯದ ಟಾಸ್ ವರದಿ, ಆಡುವ 11ರ ಬಳಗ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಭಿಮಾನಿಗಳಿಗೆ ಚಾಲೆಂಜ್ ನೀಡಿದ ಅನಿರುದ್ಧ್: ಸವಾಲ್ ಸ್ವೀಕರಿಸಲು ನೀವು ರೆಡಿನಾ?
Recommended Video
ಸಾಹಸಸಿಂಹ ವಿಷ್ಣುವರ್ಧನ್ ಅಳಿಯ ಅನಿರುದ್ಧ್ ಸದ್ಯ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡ ಕಿರುತೆರೆ ಲೋಕದಲ್ಲಿ ಸಂಚಲನ ಸೃಷ್ಟಿಸಿರುವ ಜೊತೆಜೊತೆಯಲಿ, ಕಡಿಮೆ ಅವಧಿಯಲ್ಲಿ ನಂಬರ್ ಒನ್ ಸ್ಥಾನವನ್ನು ಅಲಂಕರಿಸಿದೆ.
ಧಾರಾವಾಹಿಯಲ್ಲಿ ಅನಿರುದ್ಧ್ ಅವರ ಆರ್ಯವರ್ಧನ್ ಪಾತ್ರಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಸೀರಿಯಲ್ ಮೂಲಕ ಕನ್ನಡ ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾಗಿರುವ ಅನಿರುದ್ಧ್ ಈಗ ಅಭಿಮಾನಿಗಳಿಗೆ ಒಂದು ಚಾಲೆಂಜ್ ಹಾಕಿದ್ದಾರೆ. ಇತ್ತೀಚಿಗೆ ಫಿಟ್ ನೆಸ್ ಚಾಲೆಂಜ್ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಹಾಗೆ ಅನಿರುದ್ಧ್ ಕೂಡ ಒಂದು ಸವಾಲ್ ಎಸೆದಿದ್ದಾರೆ. ಅನಿರುದ್ಧ ನೀಡಿರುವ ಚಾಲೆಂಜ್ ಪರಿಸರ ಕಾಳಜಿ ಬಗ್ಗೆ.
ಕಿರುತೆರೆಯಲ್ಲಿ ದಾಖಲೆ ನಿರ್ಮಿಸಿದ ವಿಷ್ಣುವರ್ಧನ್ ಅಳಿಯ: ಎರಡನೇ ವಾರವೂ ನಂ.1
ಗಿಡನೆಡುವಂತೆ ಚಾಲೆಂಜ್ ಹಾಕಿದ ಅನಿರುದ್ಧ್
"ನಿಮ್ಮ ಕೈಲಾದಷ್ಟು ಗಿಡಗಳನ್ನು ನೆಡಬೇಕು. ಒಂದು ವೇಳೆ ಗಿಡ ನೆಡಲು ಸ್ಥಳಾವಕಾಶ ಇಲ್ಲ ಅಂದ್ರೆ ಮನೆಯ ಬಳಿಯೆ ಪಾಟ್ ನಲ್ಲಿಯೆ ಒಂದು ಗಿಡವನ್ನು ನೆಡಬಹುದು. ಗಿಡ ನೆಡುವ ಫೋಟೋವನ್ನು ಶೇರ್ ಮಾಡಿ" ಎಂದು ಹೇಳಿದ್ದಾರೆ ಅಲ್ಲದೆ ಗಿಡ ನೆಡುವ ಫೋಟೋವನ್ನು ಅನಿರುಧ್ಧ್ ಅವರಿಗೆ ಕಳುಹಿಸುವುದಲ್ಲಿದೆ 10 ಜನ ಸ್ನೇಹಿತರಿಗೆ ಟ್ಯಾಗ್ ಮಾಡಬೇಕು. ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಕನ್ನಡ ಕಿರುತೆರೆ ಲೋಕದಲ್ಲಿ ದಾಖಲೆ ಬರೆದ ವಿಷ್ಣುವರ್ಧನ್ ಅಳಿಯ ಅನಿರುದ್ಧ್
ಅದೃಷ್ಟಶಾಲಿಗೆ ವಿಶೇಷ ಉಡುಗೊರೆ
ಅನಿರುದ್ಧ ಅವರಿಗೆ ಕಳುಹಿಸಿದ ಫೋಟೋವನ್ನು ಸಾಧ್ಯವಾದಷ್ಟು ಅವರ ಫೇಸ್ ಬುಕ್ ಪೇಜ್ ನಲ್ಲಿ ಶೇರ್ ಮಾಡುತ್ತಾರಂತೆ. ಯಾರ ಪೋಸ್ಟ್ ಗೆ ಅತೀ ಹೆಚ್ಚು ಲೈಕ್ ಬರುತ್ತೋ ಅವರಿಗೆ ಅನಿರುದ್ಧ್ ಕಡೆಯಿಂದ ಬಹುಮಾನ ಕೂಡ ಸಿಗಲಿದೆ. ಆದ್ರೆ ಗಿಡಗಳನ್ನು ನೆಟ್ಟು ಸುಮ್ಮನಾಗುವುದಲ್ಲ. ಅದನ್ನು ಚೆನ್ನಾಗಿ ಪೋಷಿಸಬೇಕು. ಒಂದು ತಿಂಗಳ ನಂತರ ಒಬ್ಬ ಅದೃಷ್ಟಶಾಲಿಯ ಮನೆಗೆ ವಿಶೇಷ ಉಡುಗೊರೆ ತಲುಪಲಿದೆ.
ಚಾಲೆಂಜ್ ಸ್ವೀಕರಿಸಿದ ಅಭಿಮಾನಿಗಳು
ಸಾಕಷ್ಟು ಜನ ಅನಿರುದ್ಧ್ ಹಾಕಿದ ಚಾಲೆಂಜ್ ಅನ್ನು ಸ್ವೀಕರಿಸುತ್ತಿದ್ದಾರೆ. ಈಗಾಗಲೆ ಅಭಿಮಾನಿಗಳು ಗಿಡಿಗಳನ್ನು ನೆಟ್ಟು ಫೋಟೋವನ್ನು ಕ್ಲಿಕ್ಕಿಸಿಕೊಂಡು ಅನಿರುದ್ಧ್ ಅವರಿಗೆ ಶೇರ್ ಮಾಡುತ್ತಿದ್ದಾರೆ. ಆಯ್ದ ಕೆಲವು ಫೋಟೋಗಳನ್ನು ಅನಿರುದ್ಧ್ ತನ್ನ ಪೇಜ್ ನಲ್ಲಿ ಶೇರ್ ಮಾಡುತ್ತಿದ್ದಾರೆ.
ಧಾರಾವಾಹಿ ಪ್ರಪಂಚಕ್ಕೆ ರೀ ಎಂಟ್ರಿ ಕೊಟ್ಟ ವಿಷ್ಣು ದಾದನ ಅಳಿಯ ಅನಿರುದ್ಧ್
ಮೂರು ವಾರಗಳನ್ನು ಪೂರೈಸಿದ ದಾರಾವಾಹಿ
"ಜೊತೆಜೊತೆಯಲಿ ಮೂರು ವಾರಗಳ ಪಯಣವನ್ನು ಯಶಸ್ವಿಗೊಳಿಸಿದ್ದು ನೀವುಗಳು. ನಿಮ್ಮಿಂದಲೇ ಈ ದಾಖಲೆಗಳು. ನಿಮ್ಮ ಅಭಿಮಾನದಿಂದಲೇ ಎಲ್ಲವೂ. ನಿಮ್ಮ ಪ್ರೀತಿಗೆ ನಾವು ಸದಾ ಚಿರಋಣಿ. ನಿಮ್ಮ ಪ್ರೀತಿ ಸದಾ ನಮ್ಮ ತಂಡದ ಮೇಲಿರಲಿ" ಎಂದು ಅನಿರುದ್ಧ ಹೇಳಿಕೊಂಡಿದ್ದಾರೆ. ಧಾರಾವಾಹಿ ಪ್ರಾರಂಭವಾದಾಗಿನಿಂದಲೂ ಉತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು ಪ್ರೇಕ್ಷಕರು ಧಾರಾವಾಹಿಯನ್ನು ಮೆಚ್ಚಿಕೊಂಡಿದ್ದಾರೆ.