Don't Miss!
- News India Rain: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರೀ ಮಳೆ, ಹಿಮಪಾತ ಸಾಧ್ಯತೆ: ಭಾರತದ ಈ ಭಾಗದಲ್ಲಿ ತಂಪೆರೆಯಲಿರುವ ವರುಣ
- Finance ಸಂಸ್ಥೆಯ ಎಲ್ಲ 30,000 ಉದ್ಯೋಗಿಗಳಿಗೆ ವರ್ಕ್ ಫಮ್ ಹೋಂ ನೀಡಿದ ಟೆಕ್ ಕಂಪೆನಿ
- Technology Earbuds: 2000 ರೂ. ಒಳಗೆ ಲಭ್ಯ ಇರುವ ಅತ್ಯುತ್ತಮ ಇಯರ್ಬಡ್ಸ್! ಸಖತ್ ಫೀಚರ್ಸ್...
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಗೋಲ್ಡನ್ ಸ್ಟಾರ್' ಗಣೇಶ್ ಬಗ್ಗೆ ದುನಿಯಾ ವಿಜಯ್ ಏನಂದರು.?
2006-07.... ನಟ ಗಣೇಶ್ ಹಾಗೂ ದುನಿಯಾ ವಿಜಯ್ ರವರ ನಸೀಬು ಬದಲಿಸಿದ ವರ್ಷಗಳು.
2006ರಲ್ಲಿ ಬಿಡುಗಡೆ ಆದ 'ಮುಂಗಾರು ಮಳೆ' ಸಿನಿಮಾ ಗಣೇಶ್ ಗೆ ಲಕ್ ತಂದುಕೊಟ್ಟರೆ, 2007ರಲ್ಲಿ ರಿಲೀಸ್ ಆದ 'ದುನಿಯಾ' ಸಿನಿಮಾದಿಂದಾಗಿ ವಿಜಿ ಬದುಕಿನ ಭಾಗ್ಯದ ಬಾಗಿಲು ತೆರೆಯಿತು.
ಅಸಲಿಗೆ, ಸಿನಿಮಾಗಳಲ್ಲಿ 'ಹೀರೋ' ಆಗಿ ಗುರುತಿಸಿಕೊಳ್ಳುವುದಕ್ಕೂ ಮುಂಚಿನಿಂದಲೂ ಗಣೇಶ್ ಹಾಗೂ ದುನಿಯಾ ವಿಜಯ್ ಪಕ್ಕಾ ದೋಸ್ತಿಗಳು. ಇವತ್ತು ಇಬ್ಬರೂ 'ಸ್ಟಾರ್' ನಟರು. ಆದರೂ, ಇಬ್ಬರ ದೋಸ್ತಿಯಲ್ಲಿ ಕೊಂಚ ಕೂಡ ವ್ಯತ್ಯಾಸ ಆಗಿಲ್ಲ. ಅದಕ್ಕೆ ಸಾಕ್ಷಿ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ದುನಿಯಾ ವಿಜಯ್ ಆಡಿದ ಮಾತುಗಳು.
ಗಣೇಶ್ ಜೊತೆ ನಟಿಸಲು ಒಲ್ಲೆ ಎಂದಿದ್ದರು ಕನ್ನಡ ಚಿತ್ರರಂಗದ ನಾಯಕಿಯರು.!
ಗಣೇಶ್ ಮಾಡಿರುವ ಸಾಧನೆ ಕುರಿತು 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ದುನಿಯಾ ವಿಜಯ್ ''ಹ್ಯಾಟ್ ಆಫ್'' ಹೇಳಿದರು.
'ಕಾಮಿಡಿ ಟೈಮ್' ಗಣೇಶ್ ನ ಹೀರೋ ಮಾಡ್ತಿದ್ದೀರಾ.. ತಲೆ ಕೆಟ್ಟಿದ್ಯಾ ನಿಮಗೆ.?
''ತಾಳ್ಮೆ ತುಂಬಾ ಇಟ್ಟುಕೊಂಡಿದ್ದರೆ, ದೊಡ್ಡ ಮಟ್ಟಕ್ಕೆ ಹೋಗಬಹುದು ಎನ್ನುವುದಕ್ಕೆ ಉದಾಹರಣೆಯೇ ನಮ್ಮ ಗಣೇಶ್. ನಿನ್ನ ಸಾಧನೆಗೆ ನಿಜವಾಗಲೂ ಹ್ಯಾಟ್ಸ್ ಆಫ್. ಅವತ್ತು ಬಾಡಿಗೆ ಕಟ್ಟಲು ಗಣೇಶ್ ಒದ್ದಾಡುತ್ತಿದ್ದ. ಈಗ ಅರಮನೆಯಲ್ಲಿ ಇದ್ದಾನೆ. ನನಗೆ ಅದು ತುಂಬಾ ಖುಷಿ'' ಎಂದರು ನಟ ದುನಿಯಾ ವಿಜಯ್.