Don't Miss!
- News ಆಕ್ಸಿಸ್ ಬ್ಯಾಂಕ್ಗೆ ಬರೋಬ್ಬರಿ 7,129 ಕೋಟಿ ರೂಪಾಯಿ ಲಾಭ!
- Sports IPL 2024: ಆರ್ಸಿಬಿಗೆ ವಿರಾಟ್, ಪಾಟಿದಾರ್ ಆಸರೆ: ಹೈದರಾಬಾದ್ಗೆ ಸವಾಲಿನ ಟಾರ್ಗೆಟ್
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕನ್ನಡದ 'ಈ' ನಟಿ ಕಂಡ್ರೆ ರವಿಶಂಕರ್ ಗೆ ಸಿಕ್ಕಾಪಟ್ಟೆ ಇಷ್ಟ.!
ರವಿಶಂಕರ್ ಗೊತ್ತಲ್ವಾ.? ಅದೇ, 'ಸಿಲ್ಲಿ ಲಲ್ಲಿ' ಧಾರಾವಾಹಿಯಲ್ಲಿ ಡಾಕ್ಟರ್ ವಿಠಲ್ ರಾವ್ ಆಗಿ ನಿಮ್ಮೆಲ್ಲರ ಮನ ಗೆದ್ದು, ಚಿತ್ರರಂಗದ 'ಪಯಣ' ಶುರು ಮಾಡಿ, 'ನಂಜನಗೂಡು ನಂಜುಂಡ', 'ದೇವ್ರಾಣೆ', 'ಜೈಲಲಿತಾ' ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿರುವ ರವಿಶಂಕರ್ ಗೌಡಗೆ ಕನ್ನಡದ 'ಈ' ನಟಿ ಕಂಡ್ರೆ ಸಿಕ್ಕಾಪಟ್ಟೆ ಇಷ್ಟವಂತೆ.!
ಯಾರಪ್ಪಾ ಅದು ಅಂತೀರಾ.? ಅದು ಬೇರೆ ಯಾರೂ ಅಲ್ಲ 'ಚಿರು', 'ಪ್ರೇಮ್ ಅಡ್ಡ', 'ಗೂಗ್ಲಿ', 'ಮಾಸ್ತಿ ಗುಡಿ' ಮುಂತಾದ ಚಿತ್ರಗಳಲ್ಲಿ ಮಿಂಚಿರುವ ನಟಿ ಕೃತಿ ಖರಬಂಧ.
ಹೌದು, ನಟಿ ಕೃತಿ ಖರಬಂಧ ಮೇಲೆ ನಟ ರವಿಶಂಕರ್ ಗೌಡ ಅವರಿಗೆ ಕ್ರಶ್ ಆಗಿದ್ಯಂತೆ. ಹಾಗಂತ ಸ್ವತಃ ರವಿಶಂಕರ್ ಗೌಡ 'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ಲವ್ಲಿ ಸ್ಟಾರ್ ಪ್ರೇಮ್ ಗೆ ಪ್ರಪೋಸ್ ಮಾಡಿದ ಕನ್ನಡ 'ಹೀರೋಯಿನ್' ಯಾರು.?
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮಕ್ಕೆ ಪ್ರೇಮ್ ಹಾಗೂ ರವಿಶಂಕರ್ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದ ಮೊದಲ ಸೆಗ್ಮೆಂಟ್ (ಸತ್ಯನಾ.. ಧೈರ್ಯನಾ..) ನಲ್ಲಿ 'ಸತ್ಯ'ವನ್ನ ಹೇಳಲು ರವಿಶಂಕರ್ ಆಯ್ಕೆ ಮಾಡಿಕೊಂಡರು.
ಆಗ ''ನಿಮ್ಮ ಸೆಲೆಬ್ರಿಟಿ ಕ್ರಶ್ ಯಾರು?'' ಅಂತ ಶಿವಣ್ಣ ಕೇಳಿದ್ದಕ್ಕೆ ''ಕೃತಿ ಖರಬಂಧ'' ಎಂದರು ನಟ ರವಿಶಂಕರ್ ಗೌಡ.