Don't Miss!
- News ಬಿಎಂಟಿಸಿ & ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ದಿಢೀರ್ ಹೆಚ್ಚಳಕ್ಕೆ ಕಾರಣ ಏನು?-ಇಲ್ಲಿದೆ ಮಾಹಿತಿ
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Sports ಧೋನಿ ಎದುರು ಬಂದಾಗ ಕೆ.ಎಲ್ ರಾಹುಲ್ ಕ್ಯಾಪ್ ತೆಗೆದಿದ್ದೇಕೆ?: ಕಾರಣವೇನು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸ್ಯಾಂಡಲ್ ವುಡ್ ಸಾಧಕಿಯರಿಗೆ ಸ್ಟಾರ್ ಸುವರ್ಣದ ಗೌರವ ಸ್ಟಾರ್ ಮಹಾನಟಿ
ಕನ್ನಡದ ಮೇರು ನಟಿಯರ ಸಾಧನೆಯನ್ನು ಸನ್ಮಾನಿಸುವ ವೇದಿಕೆ ಸಜ್ಜಾಗಿತ್ತು, ಬೆಂಗಳೂರಿನ ಡೊಂಕ ಹಳ್ಳ ಮೈದಾನದಲ್ಲಿ. ಜಯಂತಿ, ಭಾರತಿ, ತಾರಾ, ಪ್ರಿಯಾಂಕ ಉಪೇಂದ್ರ, ಪ್ರಿಯಾಮಣಿ, ಹರಿಪ್ರಿಯಾ, ರಾಗಿಣಿ ದ್ವಿವೇದಿ ಮತ್ತು ರಚಿತಾ ರಾಮ್ ಅವರಿಗೆ ಸ್ಟಾರ್ ಸುವರ್ಣ ವಾಹಿನಿ 'ಮಹಾನಟಿ' ಪುರಸ್ಕಾರ ನೀಡಿ ಗೌರವಿಸಿದೆ.
ಈ ಸುಂದರ ಸಂಜೆಗೆ ಕರ್ನಾಟಕ ಚಲನಚಿತ್ರೋದ್ಯಮದ ಖ್ಯಾತನಾಮರು ಸಾಕ್ಷಿಯಾಗಿದ್ದರು. 5 ದಶಕಗಳ ಕಾಲ ಬೆಳ್ಳಿ ಪರದೆಮೇಲೆ ಅಭಿನಯ ಶಾರದೆಯಾಗಿ ಅಲಂಕೃತಗೊಂಡು 500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಹೆಗ್ಗಳಿಕೆ ಮಹಾನಟಿ ಜಯಂತಿಯವರದ್ದು. ಹಿರಿಯ ನಟ ರಾಜೇಶ್ ಮತ್ತು ನಟ ರಾಘವೇಂದ್ರ ರಾಜ್ ಕುಮಾರ್ ಜಯಂತಿಯವರಿಗೆ ಮಹಾನಟಿ ಪುರಸ್ಕಾರವನ್ನಿತ್ತು ಸನ್ಮಾನಿಸಿದರು.
ನಟಿ ಕೃಷಿ ತಾಪಂಡ, ಜಯಂತಿಯವರ ಪ್ರಖ್ಯಾತ ಗೀತೆಗಳಿಗೆ ಹೆಜ್ಜೆ ಹಾಕಿ ಅವರನ್ನು ಗೌರವಿಸಿದ್ದಾರೆ. ಮತ್ತೊಬ್ಬ ಮೇರುನಟಿ ಭಾರತಿಯವರು ಚಿತ್ರರಂಗಕ್ಕೆ ನೀಡಿರುವ ಕೊಡುಗೆಯನ್ನು ಗೌರವಿಸಿ ಅವರಿಗೆ ನಟ ಗೋಲ್ಡನ್ ಸ್ಟಾರ್ ಗಣೇಶ್ ಸನ್ಮಾನಿಸಿದರು.
ದಶಕದ ಬಳಿಕ ಧಾರಾವಾಹಿ ಪ್ರಪಂಚದಲ್ಲಿ ರಾಘವೇಂದ್ರ ರಾಜ್ ಕುಮಾರ್
ಮಹಾನಟಿ ಕಾರ್ಯಕ್ರಮದಲ್ಲಿ ಶ್ರೇಷ್ಠ ಅಭಿನೇತ್ರಿ ತಾರಾ ಅವರನ್ನು ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸನ್ಮಾನಿಸಿದರು. ಈ ಸಂದರ್ಭದಲ್ಲಿ ನಟಿ ತಾರಾ ಚಿತ್ರರಂಗದ ನಡವಳಿಕೆ ಕುರಿತಾಗಿ ಮಾತನಾಡಿದ್ದಾರೆ. ಚಿತ್ರರಂಗದ ಪಯಣದಲ್ಲಿ ನಾಯಕನೊಬ್ಬನ ಮೈಲಿಗಲ್ಲುಗಳನ್ನು ಸಂಭ್ರಮಿಸುವ ಉದ್ಯಮ, ಆ ಸಾಧನೆಯಲ್ಲಿ ನಾಯಕಿಯರ ಪಾತ್ರವೂ ಇದೆ ಎಂಬುದನ್ನು ಬಹಳ ಜಾಣತನದಿಂದ ಮರೆತಿದೆ ಎಂದರು. ಮಹಾನಟಿ ಪುರಸ್ಕಾರ ಸಂದಿರುವುದು ಮಹಿಳೆಯಾಗಿ, ಕಲಾವಿದೆಯಾಗಿ ಬಹಳ ಹೆಮ್ಮೆಯ ವಿಷಯ ಎಂದು ಅಭಿಪ್ರಾಯಪಟ್ಟರು.
ಸಂಭಾವನೆಯಲ್ಲಿ, ಸತ್ಕಾರದಲ್ಲಿ ಮಹಿಳೆಯರನ್ನು ಕಡೆಗಣಿಸಿ, ಅವರ ಅಂದಚಂದವನ್ನು ಮಾತ್ರ ಬಂಡವಾಳ ಮಾಡಿಕೊಂಡು ಚಿತ್ರರಂಗ ವಿಜೃಂಭಿಸುತ್ತದೆ, ನಮ್ಮ ವೃತ್ತಿಜೀವನದಲ್ಲಿ , ಚಿತ್ರಗಳಲ್ಲಿ, ಕಥೆಗಳಲ್ಲಿ ಹೆಣ್ಣನ್ನು ಗೌರವಿಸುವ ಕೆಲಸವಾಗಬೇಕು, ಇದನ್ನು ಮಾಡುತ್ತಿರುವ ವಾಹಿನಿಯ ಪ್ರಯತ್ನ ಶ್ಲಾಘನೀಯ ಎಂದಿದ್ದಾರೆ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್.
ನಟಿ ಪ್ರಿಯಾಂಕ ಉಪೇಂದ್ರ ಅವರನ್ನು ಸನ್ಮಾನಿಸಿ ಮಾತಾನಾಡಿದ ನಿರ್ದೇಶಕ ನಾಗಾಭರಣ, ಕಲಾವಿದೆಯರನ್ನು, ಅವರ ಸಾಧನೆಯನ್ನು ಪ್ರಶಂಸಿಸುವ ಕಾರ್ಯಕ್ರಮ ಎಂದೋ ಆಗಬೇಕಿತ್ತು , ಮಹಾನಟಿಯರ ಸಾಧನೆಯನ್ನು ಗುರುತಿಸಿ, ಗೌರವಿಸಿ, ಸ್ಫೂರ್ತಿದಾಯಿಯಾಗುವ ಹೆಮ್ಮೆಯ ಕಾರ್ಯಕ್ರಮ ನೀಡಿರುವ ಸ್ಟಾರ್ ಸುವರ್ಣದ ಈ ನಿಲುವಿಗೆ ಹ್ಯಾಟ್ಸ್ ಆಫ್ ಎಂದರು. ಪ್ರಿಯಾಂಕ ಉಪೇಂದ್ರ ಅವರ ಈ ಸಾಧನೆಗೆ ವೇದಿಕೆಯಲ್ಲಿ ಸಾಕ್ಷಿಯಾಗಿದ್ದರು ಅವರ ತಾಯಿ, ಅತ್ತೆ ಮತ್ತು ಸ್ನೇಹಿತೆ ಪಲ್ಲವಿ ಗುರುಕಿರಣ್.
ಹಿರಿಯ ನಟ ದ್ವಾರಕೀಶ್ ನಟಿ ಪ್ರಿಯಾಮಣಿಗೆ ಮಹಾನಟಿ ಪ್ರಶಸ್ತಿ ನೀಡಿ, ಪ್ರಿಯಾ ನಮ್ಮ ಮನೆ ಮಗಳು ಎಂದು ಅಭಿಮಾನ ವ್ಯಕ್ತಪಡಿಸಿದರು. ನಟಿಯರಾದ ಹರಿಪ್ರಿಯಾ, ರಾಗಿಣಿ ಮತ್ತು ರಚಿತಾ ರಾಮ್ ತಮ್ಮ ಸಾಧನೆಯ ಹಾದಿಯಲ್ಲಿ ಬಂದ ಸವಾಲುಗಳು ಮತ್ತು ತಮಗೆ ಪ್ರೀತಿ ತೋರಿಸಿದ ಕುಟುಂಬ ಮತ್ತು ಅಭಿಮಾನಿಗಳನ್ನು ನೆನೆದು ಭಾವುಕರಾದರು. ನಟ ಶ್ರೀಮುರುಳಿ, ಡಿಐಜಿ ಡಿ.ರೂಪ ಮತ್ತು ನಿರ್ದೇಶಕರಾದ ಚೇತನ್ ಮತ್ತು ಸಂತು ಈ ಸಾಧಕಿಯರಿಗೆ ಮಹಾನಟಿ ಪ್ರಶಸ್ತಿ ನೀಡಿ ಗೌರವಿಸಿದರು.
ಕನಸು ಕಾಣುವ ಮುಗ್ಧ ಮನಸುಗಳ ಕಥೆ 'ನನ್ ಹೆಂಡ್ತಿ ಎಂಬಿಬಿಎಸ್'
ಸ್ಟಾರ್ ಸುವರ್ಣ ವಾಹಿನಿಯ ಸತ್ಯಂ ಶಿವಂ ಸುಂದರಂ, ಮರಳಿ ಬಂದಳು ಸೀತೆ, ನನ್ ಹೆಂಡ್ತಿ ಎಂಬಿಬಿಎಸ್, ಮುದ್ದುಲಕ್ಷ್ಮಿ, ಮೌನರಾಗ, ಅಮೃತವರ್ಷಿಣಿ, ಸರ್ವ ಮಂಗಳ ಮಾಂಗಲ್ಯೇ, ಬಯಸದೆ ಬಳಿ ಬಂದೆ ಧಾರವಾಹಿಯ ಕಲಾವಿದರು ಈ ಮಾಹಾನಟಿಯರ ಚಿತ್ರಗೀತೆಗಳಿಗೆ ಹೆಜ್ಜೆ ಹಾಕಿ ಗೌರವ ಸಮರ್ಪಿಸಿದ್ದಾರೆ. ಗಾಯಕ ರಘು ದೀಕ್ಷಿತ್ ಈ ಮಹಾನಟಿಯರಿಗೆ ತಮ್ಮ ಗಾಯನದ ಮೂಲಕ ನಮಿಸಿದ್ದಾರೆ.
ಮಹಾನಟಿ ಬರಿ ಮನೋರಂಜನೆಯ ಕಾರ್ಯಕ್ರಮವಾಗದೆ, ಚಿತ್ರರಂಗದಲ್ಲಿ ಅಗ್ರ ಸಾಧನೆಗೈದಿರುವ ಮಾಹಾನ್ ಕಲಾವಿದೆಯರನ್ನು ಗೌರವಿಸುವ ಅರ್ಥಪೂರ್ಣ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮವನ್ನು ಏಪ್ರಿಲ್ 6ರಂದು ಸಂಜೆ 6.30ಕ್ಕೆ ವೀಕ್ಷಕರಿಗೆ ಯುಗಾದಿ ಹಬ್ಬದ ಕೊಡುಗೆಯಾಗಿ ಸ್ಟಾರ್ ಸುವರ್ಣ ವಾಹಿನಿ ಪ್ರಸಾರ ಮಾಡುತ್ತಿದೆ.