Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಾಜಕೀಯಕ್ಕೆ ಬಂದು 'ತಪ್ಪು' ಮಾಡಿದೆ ಎಂದ ನಟಿ ಪೂಜಾ ಗಾಂಧಿ.!
'ಮುಂಗಾರು ಮಳೆ' ಸಿನಿಮಾ ಆದ್ಮೇಲೆ ಬಂದ ಅವಕಾಶಗಳನ್ನೆಲ್ಲ ಒಪ್ಪಿಕೊಂಡು, ಆಗಾಗ ಸೋಲು ಅನುಭವಿಸಿದ ನಟಿ ಪೂಜಾ ಗಾಂಧಿ ದಿಢೀರ್ ಅಂತ ರಾಜಕೀಯ ರಂಗಕ್ಕೂ ಧುಮುಕಿ, ಪಕ್ಷದಿಂದ ಪಕ್ಷಕ್ಕೆ ಹಾರಿ, ಚುನಾವಣೆಯಲ್ಲಿ ಸ್ಪರ್ಧಿಸಿ ಹೀನಾಯ ಸೋಲು ಕಂಡರು.
ಅದಾದ್ಮೇಲೆ, ಚಿತ್ರರಂಗಕ್ಕೆ ಮರಳಿದ ನಟಿ ಪೂಜಾ ಗಾಂಧಿ ರಾಜಕೀಯದ ಕಡೆ ಮುಖ ಮಾಡಲಿಲ್ಲ. ಇದಕ್ಕೆ ಕಾರಣ ಏನು ಎಂದು ಪ್ರಶ್ನಿಸಿದಾಗ, ''ರಾಜಕೀಯಕ್ಕೆ ಬಂದು ನಾನು ಮಿಸ್ಟೇಕ್ ಮಾಡಿದೆ'' ಎಂದು ನಟಿ ಪೂಜಾ ಗಾಂಧಿ ಕಲರ್ಸ್ ಸೂಪರ್ ವಾಹಿನಿಯ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಒಪ್ಪಿಕೊಂಡಿದ್ದಾರೆ. ಮುಂದೆ ಓದಿರಿ....
ರಾಜಕೀಯದಿಂದ ದೂರ ಉಳಿಯಲು ಕಾರಣ.?
''ಬೇಕು ಅಂತಲೇ ರಾಜಕೀಯದಿಂದ ದೂರ ಉಳಿದಿದ್ದೇನೆ. ನನ್ನ ವೃತ್ತಿ ಜೀವನದಲ್ಲಿ ರಾಜಕೀಯ ಅಧ್ಯಾಯ ಸ್ವಲ್ಪ ಬೇಗ ಬಂತು. ''ನಾನು ರಾಜಕೀಯಕ್ಕೆ ಬಹಳ ಬೇಗ ಬಂದು ತಪ್ಪು (ಮಿಸ್ಟೇಕ್) ಮಾಡಿದೆ'' ಎಂದು ಒಪ್ಪಿಕೊಳ್ಳುತ್ತೇನೆ'' ಅಂತ ನಟಿ ಪೂಜಾ ಗಾಂಧಿ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಹೇಳಿದರು.
ನನ್ನ ನಿರ್ಧಾರ ತಪ್ಪು.!
''ನಾನು ಮುಂಚೆ ಸೋಷಿಯಲ್ ಸರ್ವೀಸ್ ಮಾಡುತ್ತಿದ್ದೆ. ಹೀಗಾಗಿ ರಾಜಕೀಯಕ್ಕೆ ಬಂದರೆ ಇನ್ನೂ ದೊಡ್ಡ ಪ್ಲಾಟ್ ಫಾರ್ಮ್ ಸಿಗಬಹುದು ಎಂದು ಭಾವಿಸಿದ್ದೆ. ಆದ್ರೆ, ನಾನು ತೆಗೆದುಕೊಂಡಿದ್ದು ತಪ್ಪು ನಿರ್ಧಾರ'' - ಪೂಜಾ ಗಾಂಧಿ
ದೊಡ್ಡ ಪಾಠ ಕಲಿತಿದ್ದೇನೆ
''ನನ್ನ ಜೀವನದಲ್ಲಿ ಇದರಿಂದ ದೊಡ್ಡ ಪಾಠ ಕಲಿತಿದ್ದೇನೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ನನ್ನ ಪ್ರೊಡಕ್ಷನ್ ಹೌಸ್ ನಲ್ಲಿ ನಿರ್ಮಾಪಕಿ ಆಗಿ ಹೆಚ್ಚು ಸಿನಿಮಾಗಳನ್ನ ನಿರ್ಮಾಣ ಮಾಡುವಲ್ಲಿ ತೊಡಗಿಸಿಕೊಂಡಿದ್ದೇನೆ'' - ಪೂಜಾ ಗಾಂಧಿ
ನಾಳೆ ಏನಾಗುತ್ತೋ, ಗೊತ್ತಿಲ್ಲ
''ಮತ್ತೆ ರಾಜಕೀಯಕ್ಕೆ ಬರುತ್ತೇನೋ, ಇಲ್ವೋ ಗೊತ್ತಿಲ್ಲ. ನಾಳೆ ಏನಾಗುತ್ತೆ ಅಂತ ಯಾರಿಗೆ ಗೊತ್ತು'' ಎಂದಷ್ಟೇ ನಟಿ ಪೂಜಾ ಗಾಂಧಿ ಹೇಳಿದರು.