ತೆಲುಗಿನ ರಿಯಾಲಿಟಿ ಶೋನಲ್ಲಿ ತಾಯ್ನಾಡಿನ ಬಗ್ಗೆ ಅಭಿಮಾನ ಮೆರೆದ ರಶ್ಮಿಕಾ.!

By Harshitha

Recommended Video

ಯಾರ್ ಹೇಳಿದ್ದು ರಶ್ಮಿಕಾಗೆ ಕನ್ನಡ ಭಾಷೆ, ನಾಡಿನ ಮೇಲೆ ಪ್ರೀತಿ ಇಲ್ಲ ಅಂತ..! | Filmibeat Kannada

ಕನ್ನಡ ಚಿತ್ರರಂಗದಲ್ಲಿ ರಶ್ಮಿಕಾ ಮಂದಣ್ಣ ಎಷ್ಟು ಫೇಮಸ್ಸೋ, ತೆಲುಗು ಚಿತ್ರರಂಗದಲ್ಲಿಯೂ ಅಷ್ಟೇ ಜನಪ್ರಿಯತೆ ಪಡೆದಿದ್ದಾರೆ. ಸ್ಯಾಂಡಲ್ ವುಡ್ ಹಾಗೂ ಟಾಲಿವುಡ್ ನಲ್ಲಿ ರಶ್ಮಿಕಾ ಮಂದಣ್ಣ ಸಿಕ್ಕಾಪಟ್ಟೆ ಅಭಿಮಾನಿಗಳನ್ನು ಹೊಂದಿದ್ದಾರೆ.

ಕನ್ನಡದಲ್ಲಿ ಬಹುಬೇಡಿಕೆಯ ನಟಿ ಆಗಿರುವ ರಶ್ಮಿಕಾ ಮಂದಣ್ಣಗೆ ತೆಲುಗಿನಲ್ಲಿಯೂ ಅವಕಾಶಗಳ ಮಹಾಪೂರವೇ ಹರಿದು ಬರುತ್ತಿದೆ. ಪಕ್ಕದ ರಾಜ್ಯದಲ್ಲಿ ರಶ್ಮಿಕಾ ಖ್ಯಾತಿ ಪಡೆದಿದ್ದರೂ, ತಾಯ್ನಾಡು ಹಾಗೂ ಹುಟ್ಟಿದ ಊರಿನ ಬಗೆಗಿನ ಅಭಿಮಾನ ಆಕೆಗೆ ಕೊಂಚ ಕೂಡ ಕಮ್ಮಿ ಆಗಿಲ್ಲ. ಅದಕ್ಕೆ ಸಾಕ್ಷಿ ಇಲ್ಲಿದೆ...

ಕನ್ನಡ ಚಿತ್ರಗಳ ಪತ್ರಿಕಾಗೋಷ್ಟಿಯಲ್ಲಿ ರಶ್ಮಿಕಾ ಕನ್ನಡದಲ್ಲಿ ಮಾತನಾಡಲ್ಲ, ಆದ್ರೆ ತೆಲುಗು ಸಿನಿಮಾದ ಸಮಾರಂಭಗಳಲ್ಲಿ ತೆಲುಗು ಮಾತನಾಡುತ್ತಾರೆ ಅಂತೆಲ್ಲಾ ರಶ್ಮಿಕಾ ಬಗ್ಗೆ ಟ್ರೋಲ್ ಮಾಡಲಾಗಿತ್ತು.

ಆದ್ರೆ, ಅದೇ ರಶ್ಮಿಕಾ ತೆಲುಗಿನ ರಿಯಾಲಿಟಿ ಶೋವೊಂದರಲ್ಲಿ ''ನಾನು ಕೊಡಗಿನವಳು'' ಅಂತ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಸಂಪೂರ್ಣ ಮಾಹಿತಿ ಇಲ್ಲಿದೆ, ಓದಿರಿ...

ತೆಲುಗಿನ ರಿಯಾಲಿಟಿ ಶೋನಲ್ಲಿ ರಶ್ಮಿಕಾ

ತೆಲುಗಿನ ರಿಯಾಲಿಟಿ ಶೋನಲ್ಲಿ ರಶ್ಮಿಕಾ

ತೆಲುಗಿನ ಡ್ಯಾನ್ಸ್ ರಿಯಾಲಿಟಿ ಶೋ 'ಆಟ ಜ್ಯೂನಿಯರ್ಸ್'ನಲ್ಲಿ ಸೆಲೆಬ್ರಿಟಿ ಜಡ್ಜ್ ಆಗಿ ರಶ್ಮಿಕಾ ಮಂದಣ್ಣ ಪಾಲ್ಗೊಂಡಿದ್ದರು. ರಶ್ಮಿಕಾ ಮಂದಣ್ಣ ಅಭಿನಯದ 'ಗೀತ ಗೋವಿಂದಂ' ಸಿನಿಮಾ ಹಿಟ್ ಆಗಿರುವ ಕಾರಣ ರಿಯಾಲಿಟಿ ಶೋನಲ್ಲಿ ಅತಿಥಿ ತೀರ್ಪುಗಾರರಾಗಿ ರಶ್ಮಿಕಾ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಕರ್ನಾಟಕದ ಸ್ಪರ್ಧಿ.!

ಕಾರ್ಯಕ್ರಮದಲ್ಲಿ ಕರ್ನಾಟಕದ ಸ್ಪರ್ಧಿ.!

'ಆಟ ಜ್ಯೂನಿಯರ್ಸ್'ನಲ್ಲಿ ಮಹಾಲಕ್ಷ್ಮಿ ಎಂಬ ಪುಟಾಣಿ ಸ್ಪರ್ಧಿಯಾಗಿ ಭಾಗವಹಿಸುತ್ತಿದ್ದಾಳೆ. ಈಕೆ ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಹುಡುಗಿ. ಮಹಾಲಕ್ಷ್ಮಿ ಕರ್ನಾಟಕದವಳು ಅಂತ ಗೊತ್ತಾದ ಕೂಡಲೆ ರಶ್ಮಿಕಾ ಮೊಗದಲ್ಲಿ ಮಂದಹಾಸ ಮೂಡಿತು.

ನಿರೂಪಕ ಕೇಳಿದ್ದೇನು.?

ನಿರೂಪಕ ಕೇಳಿದ್ದೇನು.?

ಮಹಾಲಕ್ಷ್ಮಿಯ ನೃತ್ಯ ಪ್ರದರ್ಶನ ಮುಗಿದ ಮೇಲೆ, ''ಈಕೆಯ ಊರು ಯಾವುದು ಅಂತ ಕೇಳಿ'' ಎಂದು ರಶ್ಮಿಕಾಗೆ ಹೇಳಿದರು. ರಶ್ಮಿಕಾ ಕೇಳಿದಾಗ, ''ಕರ್ನಾಟಕ'' ಎಂದು ಮಹಾಲಕ್ಷ್ಮಿ ಉತ್ತರಿಸಿದರು.

ರಶ್ಮಿಕಾ ಪ್ರತಿಕ್ರಿಯೆ ಹೇಗಿತ್ತು.?

ರಶ್ಮಿಕಾ ಪ್ರತಿಕ್ರಿಯೆ ಹೇಗಿತ್ತು.?

'ಕರ್ನಾಟಕ' ಅಂತ ಕೇಳಿದ ಕೂಡಲೆ, ''ಓ.. ಸೂಪರ್.. ಐ ಲವ್ ಯು'' ಎಂದು ಮಹಾಲಕ್ಷ್ಮಿಗೆ ರಶ್ಮಿಕಾ ಹೇಳಿದರು. ಅಲ್ಲದೇ, ಕೂತ ಜಾಗದಿಂದಲೇ ಮಹಾಲಕ್ಷ್ಮಿಗೆ ಅಪ್ಪುಗೆ ನೀಡಿದರು.

ನಾನು ಕೊಡಗು.!

ನಾನು ಕೊಡಗು.!

''ನಾನು ಕೊಡಗು'' ಅಂತ ರಶ್ಮಿಕಾ ಹೇಳುತ್ತಿದ್ದಂತೆಯೇ, 'ಕೊಡಕ (ಮಗ)' ಅಂತ ನಿರೂಪಕ ತಮಾಷೆ ಮಾಡಿದರು. ಆಮೇಲೆ, 'ಕೊಡಗು ಜಿಲ್ಲೆ' ಎಂದು ರಶ್ಮಿಕಾ ಹೇಳಿದರು. ಆಗ ಮಹಾಲಕ್ಷ್ಮಿ, ''ನನ್ನದು ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕು'' ಎಂದು ಹೇಳಿದಳು.

ಕನ್ನಡ ಪ್ರತಿಭೆಯನ್ನ ಹೊಗಳಿದ ತೀರ್ಪುಗಾರರು

ಕನ್ನಡ ಪ್ರತಿಭೆಯನ್ನ ಹೊಗಳಿದ ತೀರ್ಪುಗಾರರು

ಮಹಾಲಕ್ಷ್ಮಿಯ ನೃತ್ಯ ನೋಡಿ ತೀರ್ಪುಗಾರರು ಹೊಗಳಿದರು. ಅವರ ಪರ್ಫಾಮೆನ್ಸ್ ಗೆ ಭಾರಿ ಮೆಚ್ಚುಗೆ ಲಭಿಸಿತು.

More from Filmibeat

English summary
Kannada Actress Rashmika Mandanna speaks about Kodagu in Telugu Reality shows.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X