Don't Miss!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Sports DC vs GT IPL 2024: ಡೆಲ್ಲಿ ಕೋಟೆಯಲ್ಲಿ ವಿಜಯದ ಪತಾಕೆ ಹಾರಿಸುತ್ತಾ ಗುಜರಾತ್?; ಟಾಸ್ ವರದಿ, ಆಡುವ ಬಳಗ
- News ಲೋಕಸಭಾ ಚುನಾವಣೆ 2024: ಮತದಾನಕ್ಕೆ ಸಕಲ ಮಂಡ್ಯ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ
- Lifestyle 5 ಸೆಕೆಂಡ್ನಲ್ಲಿ ಈ ಚಿತ್ರದಲ್ಲಿರುವ ಮೇಕೆ ಮಾಲೀಕನ ಹುಡುಕಿ..! ಎಲ್ಲಿದ್ದಾನೆ ಗೊತ್ತಾ?
- Technology Bengaluru: ಆ ಆಪ್ ಇನ್ಸ್ಟಾಲ್ ಮಾಡಿದ್ದೇ ತಡ 5.2 ಕೋಟಿ ರೂ. ಮಾಯ.. ನೀವು ಎಚ್ಚರ
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸುದೀಪ್ ಗೂ ಮೊದಲೇ ಶಿವಣ್ಣನ ಜೊತೆ ನಟಿಸಬೇಕಿತ್ತು 'ಸ್ಪರ್ಶ' ರೇಖಾ.!
ಎಲ್ಲರಿಗೂ ಗೊತ್ತಿರುವ ಹಾಗೇ ಕಿಚ್ಚ ಸುದೀಪ್ ರವರ ವೃತ್ತಿ ಜೀವನಕ್ಕೆ ಬಿಗ್ ಬ್ರೇಕ್ ಕೊಟ್ಟ ಸಿನಿಮಾ 'ಸ್ಪರ್ಶ'. ಇದೇ ಚಿತ್ರದಿಂದ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟವರು ನಟಿ ರೇಖಾ.
ಮಾಡೆಲಿಂಗ್ ಮಾಡುತ್ತಿದ್ದ ರೇಖಾ ರವರ ಫೋಟೋಗಳನ್ನ ನೋಡಿದ ಮೇಲೆ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ 'ಸ್ಪರ್ಶ' ಚಿತ್ರಕ್ಕೆ ರೇಖಾ ರವರನ್ನ ಆಯ್ಕೆ ಮಾಡಿಕೊಂಡರು.
ಆದ್ರೆ, ಇದಕ್ಕೂ ಮೊದಲೇ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ರವರ ಜೊತೆ ರೇಖಾ ನಟಿಸಬೇಕಿತ್ತು ಅನ್ನೋದು ನಿಮಗೆ ಗೊತ್ತಾ.? ಗೊತ್ತಿಲ್ಲ ಅಂದ್ರೆ ಪೂರ್ತಿ ವಿವರ ಓದಿರಿ...
'ಇಂದ್ರ ಧನುಷ್' ಚಿತ್ರಕ್ಕಾಗಿ ಕರೆ ಬಂದಿತ್ತು
ಮಾಡೆಲ್ ಆಗಿದ್ದ ರೇಖಾ ರವರನ್ನ ಶಿವರಾಜ್ ಕುಮಾರ್ ರವರ 'ಇಂದ್ರ ಧನುಷ್' ಚಿತ್ರದಲ್ಲಿ ನಾಯಕಿ ಮಾಡಬೇಕು ಎಂದು ವಿ.ಮನೋಹರ್ ನಿರ್ಧರಿಸಿದ್ದರು. ಅದಕ್ಕಾಗಿ ರೇಖಾ ರವರ ಜೊತೆ ಮಾತುಕತೆ ಕೂಡ ನಡೆದಿತ್ತು. ಮೊದಲು ಗ್ರೀನ್ ಸಿಗ್ನಲ್ ಕೊಟ್ಟಿದ್ದ ನಟಿ ರೇಖಾ ಬಳಿಕ 'ಇಂದ್ರ ಧನುಷ್' ಚಿತ್ರದಲ್ಲಿ ನಟಿಸಲು ಒಲ್ಲೆ ಎಂದರು. ಅದಕ್ಕೆ ಕಾರಣ....
ರೇಖಾ ಕನಸು
'ಇಂದ್ರ ಧನುಷ್' ಚಿತ್ರೀಕರಣದ ಡೇಟ್ಸ್ ಹಾಗೂ ಮೌಂಟೇನಿಯರಿಂಗ್... ಎರಡೂ ಕ್ಲಾಶ್ ಆಗುತ್ತಿದ್ದರಿಂದ ತಮ್ಮ ವರ್ಷಗಳ ಬಯಕೆ ಮೌಂಟೇನಿಯರಿಂಗ್ ನ ಆಯ್ಕೆ ಮಾಡಿಕೊಂಡು 'ಇಂದ್ರ ಧನುಷ್' ಆಫರ್ ನ ರಿಜೆಕ್ಟ್ ಮಾಡಿದ್ರಂತೆ ರೇಖಾ.
ಆಮೇಲೆ ಬಂದಿದ್ದು 'ಸ್ಪರ್ಶ' ಆಫರ್
ಮೌಂಟೇನಿಯರಿಂಗ್ ಮುಗಿಸಿಕೊಂಡು ಬಂದ್ಮೇಲೆ 'ಸ್ಪರ್ಶ' ಚಿತ್ರಕ್ಕಾಗಿ ಸುನೀಲ್ ಕುಮಾರ್ ದೇಸಾಯಿ ಆಫರ್ ಮಾಡಿದ್ರಂತೆ. ಅಲ್ಲಿಂದ ರೇಖಾ ರವರ ಚಿತ್ರರಂಗದ ಪಯಣ ಆರಂಭ ಆಯ್ತು.
'ಸೂಪರ್ ಟಾಕ್ ಟೈಮ್'ನಲ್ಲಿ ರೇಖಾ
ಈ ವಿಚಾರವನ್ನ ನಟಿ ರೇಖಾ ಕಲರ್ಸ್ ಸೂಪರ್ ವಾಹಿನಿಯ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಬಹಿರಂಗ ಪಡಿಸಿದರು. ಗಾಯಕ ರಾಜೇಶ್ ಕೃಷ್ಣನ್, ನಟಿ ಭಾವನಾ ಜೊತೆ ಸೂಪರ್ ಟಾಕ್ ಟೈಮ್ ಕಾರ್ಯಕ್ರಮದಲ್ಲಿ ರೇಖಾ ಪಾಲ್ಗೊಂಡಿದ್ದರು.