Don't Miss!
- News Neha Hiremath: ನೇಹಾ ಹಿರೇಮಠ್ ಕೊಲೆ ಪ್ರಕರಣವನ್ನು ಎನ್ಐಎ ತನಿಖೆಗೆ ನೀಡಲು ವಿಎಚ್ಪಿ ಒತ್ತಾಯ
- Technology vivo: ವಿವೋ Y200i ಸ್ಮಾರ್ಟ್ಫೋನ್ ಲಾಂಚ್! 12GB RAM.. 6000mAh ಬ್ಯಾಟರಿ
- Automobiles ಸಣ್ಣ ಕುಟುಂಬಗಳಿಗೆ ಬೆಸ್ಟ್ ಕಾರು... 5.36 ಲಕ್ಷ ರೂ. ಬೆಲೆ... 34 ಕಿ.ಮೀ ಮೈಲೇಜ್!
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಒಂದೇ ವೇದಿಕೆಯಲ್ಲಿ ಕನ್ನಡದ ಖ್ಯಾತ ಹಾಸ್ಯ ನಟರ ಸಮ್ಮಿಲನ
ದಶಕಗಳ ಕಾಲ ಕನ್ನಡ ಕಲಾಭಿಮಾನಿಗಳನ್ನ ರಂಜಿಸಿದ್ದ ದಿಗ್ಗಜ ಹಾಸ್ಯ ನಟರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಾಧು ಕೋಕಿಲಾ, ಚಿಕ್ಕಣ್ಣ, ಕುರಿ ಪ್ರತಾಪ್ ಅಂತಹ ಯುವ ಕಲಾವಿದರ ಮುಂದೆ ಹಿರಿಯ ಹಾಸ್ಯನಟರು ಸ್ವಲ್ಪ ಹಿಂದಕ್ಕೆ ಸರಿದಿದ್ದಾರೆ. ಅಂತಹ ಕಲಾವಿದರು ಈಗ ನಿಮ್ಮ ಮನೆಗೆ ಬರ್ತಿದ್ದಾರೆ.
ಬ್ಯಾಂಕ್ ಜರ್ನಾಧನ್, ಉಮೇಶಣ್ಣ, ಲಕ್ಷ್ಮಿ ದೇವಿ, ಹೊನ್ನವಳ್ಳಿ ಕೃಷ್ಣ, ಬಿರಾದರ್ ಈ ಎಲ್ಲರೂ ಈ ವಾರಾಂತ್ಯಕ್ಕೆ ನಿಮ್ಮನ್ನು ಮನರಂಜಿಸಲು ಸಿದ್ದವಾಗಿದ್ದಾರೆ.
ಅರೇ, ವೀಕೆಂಡ್, ಮನರಂಜನೆ ಏನು ಅಂತ ಕನ್ ಫ್ಯೂಸ್ ಮಾಡ್ಕೋಬೇಡಿ. ಈ ಎಲ್ಲ ಕಾಲವಿದರು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಕಾರ್ಯಕ್ರಮ 'ಭರ್ಜರಿ ಕಾಮಿಡಿ'ಗೆ ಅತಿಥಿಗಳಾಗಿ ಬಂದಿದ್ದಾರೆ.
ಈ ಮೂಲಕ 'ಭರ್ಜರಿ ಕಾಮಿಡಿ'ಯಲ್ಲಿ ಈ ವಾರ ಮಸ್ತ್ ಮನರಂಜನೆ ಸಿಗೋದಂತೂ ಗ್ಯಾರೆಂಟಿ. ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ನಿಮ್ಮ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ. ನಟಿ ರಾಗಿಣಿ, ಹಿರಿಯ ನಟ ದೊಡ್ಡಣ್ಣ, ನಿರ್ದೇಶಕ ಗುರುಪ್ರಸಾದ್ ಈ ಕಾರ್ಯಕ್ರಮದ ತಿರ್ಪುಗಾರರಾಗಿದ್ದು, 'ಅಗ್ನಿಸಾಕ್ಷಿ'ಯ ಖ್ಯಾತಿಯ ವೈಷ್ಣವಿ ನಿರೂಪಣೆ ಮಾಡುತ್ತಿದ್ದಾರೆ.