Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಿರ್ದೇಶಕ ಪ್ರೇಮ್ ಈ ಚಿತ್ರವನ್ನ ಮಾಡಲೇಬಾರದಾಗಿತ್ತಂತೆ.!
Recommended Video
'ಕರಿಯ', 'ಎಕ್ಸ್ ಕ್ಯೂಸ್ ಮಿ' ಮತ್ತು 'ಜೋಗಿ' ಚಿತ್ರಗಳನ್ನು ನಿರ್ದೇಶಿಸಿ, ಯಶಸ್ವಿಯಾಗಿ, 'ಹ್ಯಾಟ್ರಿಕ್ ಡೈರೆಕ್ಟರ್' ಎಂಬ ಹಣೆಪಟ್ಟಿ ಪಡೆದ ಪ್ರೇಮ್ ಬಳಿಕ 'ಪ್ರೀತಿ ಏಕೆ ಭೂಮಿ ಮೇಲಿದೆ?' ಎಂದು ಪ್ರಶ್ನಿಸುವ ಮೂಲಕ ನಾಯಕ ನಟರಾದರು.
ಗಾಂಧಿನಗರದಲ್ಲಿ ಸಿಕ್ಕಾಪಟ್ಟೆ ಹವಾ ಕ್ರಿಯೇಟ್ ಮಾಡಿದ್ದ 'ಪ್ರೀತಿ ಏಕೆ ಭೂಮಿ ಮೇಲಿದೆ.?' ಸಿನಿಮಾ ಬಿಡುಗಡೆ ಆದ್ಮೇಲೆ ಮಕಾಡೆ ಮಲಗಿತು. ಸ್ಯಾಂಡಲ್ ವುಡ್ ನಲ್ಲಿ ಮೂರು ಬ್ಯಾಕ್ ಟು ಬ್ಯಾಕ್ ಹಿಟ್ ಕೊಟ್ಟಿದ್ದ ಪ್ರೇಮ್, ನಾಯಕನಾದ್ಮೇಲೆ ಮೊದಲ ಸೋಲು ಕಂಡರು.
ಹೀಗಾಗಿ, 'ಪ್ರೀತಿ ಏಕೆ ಭೂಮಿ ಮೇಲಿದೆ.?' ಸಿನಿಮಾ ಮಾಡಲೇಬಾರದಿತ್ತು ಎಂಬ ವಿಷಾದ ಈಗಲೂ ನಿರ್ದೇಶಕ ಪ್ರೇಮ್ ರನ್ನ ಕಾಡುತ್ತಿದೆ. ಅದನ್ನೇ 'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ ಪ್ರೇಮ್ ಹೊರಹಾಕಿದರು.
ಪ್ರೀತಿ ಹುಡುಕುತ್ತಿರುವ ಪ್ರೇಮ್ ಗೆ ಐದೇ ಐದು ಪ್ರಶ್ನೆಗಳು!
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ 'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮಕ್ಕೆ ಅತಿಥಿಗಳಾಗಿ ನಿರ್ದೇಶಕ ಪ್ರೇಮ್ ಹಾಗೂ ಕಿಚ್ಚ ಸುದೀಪ್ ಭಾಗವಹಿಸಿದ್ದರು.
ಕಾರ್ಯಕ್ರಮದ ಮೊದಲ ಸೆಗ್ನೆಂಟ್ (ಸತ್ಯನಾ... ಧೈರ್ಯನಾ...) ಸತ್ಯ ಹೇಳಲು ಪ್ರೇಮ್ ರೆಡಿ ಆದರು. ಅಗ, ಪ್ರೇಮ್ ಗೆ ಎದುರಾದ ಮೊದಲ ಪ್ರಶ್ನೆ - ''ನೀವು ಡೈರೆಕ್ಷನ್ ಮಾಡಿರುವ ಚಿತ್ರಗಳ ಪೈಕಿ ಯಾವುದು ಮಾಡಬಾರದಿತ್ತು ಅಂತ ನಿಮಗೆ ಅನಿಸಿತ್ತು''. ಶಿವಣ್ಣ ಕೇಳಿದ ಈ ಪ್ರಶ್ನೆಗೆ ಪ್ರೇಮ್ ಕೊಟ್ಟ ಉತ್ತರ - ''ಪ್ರೀತಿ ಏಕೆ ಭೂಮಿ ಮೇಲಿದೆ''.