Don't Miss!
- News ಹಿಂದೂ ಯುವತಿ ಬರ್ಬರ ಹತ್ಯೆ ಪ್ರಕರಣ; ಇದೊಂದು ಲಬ್ ಜಿಹಾದ್ ಎಂದ ಜೋಶಿ: ಸಿದ್ದರಾಮಯ್ಯ ಹೇಳಿದ್ದೇನು?
- Technology Poco: ಹೊಸದಾಗಿ ಲಾಂಚ್ ಆದ ಪೊಕೊ X6 ಪ್ರೊ 5G ಸ್ಮಾರ್ಟ್ಫೋನ್ಗೆ 17% ರಿಯಾಯಿತಿ!8 GB RAM
- Finance ಜಗತ್ತಿಗೆ ಭಾರತವೇ ಬಾಸ್, ಅಂತಾರಾಷ್ಟ್ರೀಯ ಹಣಕಾಸು ನಿಧಿ ಹೇಳಿದ್ದು ಏನು?
- Lifestyle ಶುಕ್ರವಾರ ವೈಭವ ಲಕ್ಷ್ಮಿ ವ್ರತ ಮಾಡೋದೇಕೆ..? ಹೇಗೆ ಆಚರಿಸಬೇಕು ಎಂಬ ಮಾಹಿತಿ ಇಲ್ಲಿದೆ..!
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವರುಷ ತುಂಬಿದ ಹರುಷದಲ್ಲಿ 'ಮಗಳು ಜಾನಕಿ' ತಂಡ
'ಮಗಳು ಜಾನಕಿ' ಕನ್ನಡ ಕಿರುತೆರೆ ಲೋಕದಲ್ಲಿ ಹೊಸ ಬೆಳಕು ಮೂಡಿಸಿದ ಧಾರಾವಾಹಿ ಅಂದರೆ ತಪ್ಪಾಗಲ್ಲ. ಅದೇ ಪ್ರೀತಿ, ಪ್ರೇಮ, ಜಗಳ, ಇನ್ನೊಬ್ಬರ ಗಂಡನನ್ನು ಹೇಗೆ ಪಟಾಯಿಸುವುದು, ಬೇರೆಯವರ ಸಂಸಾರ ಹೇಗೆ ಒಡೆಯುವುದು ಹೇಗೆ ಒಂದಿಷ್ಟು ವಿಚಾರಗಳ ಸುತ್ತನೇ ಸುತ್ತುತ್ತಿರುವ ಇಂದಿನ ಧಾರಾವಾಹಿ ಲೋಕದ ಪ್ರಪಂಚದಲ್ಲಿ ಹೊಸ ಬಗೆಯ ವಿಚಾಗಳನ್ನು ಹೊತ್ತು ಬಂದಿದ್ದು 'ಮಗಳು ಜಾನಕಿ'.
ಹಾಗಂತ ಈ ಧಾರಾವಾಹಿಯಲ್ಲಿ ಇದೆಲ್ಲ ಇಲ್ಲ ಅಂತ ಅಂದುಕೊಳ್ಳುಬೇಡಿ. ಬೇರೆ ಧಾರಾವಾಹಿಗಳಿಗೆ ಹೋಲಿಸಿದರೆ 'ಮಗಳು ಜಾನಕಿ' ಕೊಂಚ ವಿಭಿನ್ನವಾಗಿದೆ. ಕಿರುತೆರೆ ಲೋಕದಲ್ಲಿ ದೊಡ್ಡ ಮಟ್ಟಿಗೆ ಸಂಚಲನ ಮೂಡಿಸಿ, ತನ್ನದೆ ಆದ ಪ್ರೇಕ್ಷಕರ ವರ್ಗವನ್ನು ಸೃಷ್ಟಿಸಿಕೊಂಡಿದೆ. ಜಾನಕಿ, ಚಂದು ಭಾರ್ಗಿ, ನಿರಂಜನ್, ಸಿ ಎಸ್ ಪಿ, ಮಧುಕರ ಹೀಗೆ ವಿಭಿನ್ನ ಪಾತ್ರಗಳು ಕನ್ನಡ ಪ್ರೇಕ್ಷಕರ ಮನೆಮಾತಾಗಿವೆ.
ಯಾರು ಈ ಉಜ್ವಲ ಶೇಖರ್? ಚಿರಂತನ್ ಮುಚ್ಚಿಟ್ಟಿದ್ದ ಸತ್ಯ ಬಹಿರಂಗ!
ಒಂದು ಕಾಲದಲ್ಲಿ 'ಮಾಯಮೃಗ', 'ಮನ್ವಂತರ', 'ಮುಕ್ತ', 'ಮುಕ್ತ ಮುಕ್ತ' ಅಂತಹ ಸೂಪರ್ ಹಿಟ್ ಧಾರಾವಾಹಿಗಳನ್ನು ಪ್ರೇಕ್ಷಕರಿಗೆ ನೀಡಿರುವ ಖ್ಯಾತ ನಿರ್ದೇಶಕ, ಧಾರಾವಾಹಿ ಲೋಕದ ದಿಗ್ಗಜ ಅಂತಾನೆ ಕರೆಸಿಕೊಳ್ಳುವ ಟಿ ಎನ್ ಸೀತಾರಾಮ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಸೀರಿಯಲ್ ಮಗಳು ಜಾನಕಿ. ಅನೇಕ ವರ್ಷಗಳ ಬಳಿಕ ಸೀತಾರಾಮ್ ಮಗಳು ಜಾನಕಿ ಮೂಲಕ ಮತ್ತೆ ಧಾರಾವಾಹಿ ನಿರ್ದೇಶನಕ್ಕೆ ಇಳಿದಿದ್ದಾರೆ.
ವಿಶೇಷ ಅಂದ್ರೆ 'ಮಗಳು ಜಾನಕಿ' ಈಗ ಒಂದು ವರ್ಷ ಯಶಸ್ವಿಯಾಗಿ ಪೂರೈಸಿದೆ. ವರುಷ ತುಂಬಿದ ಹರುಷದಲ್ಲಿ ತೇಲುತ್ತಿದೆ ಮಗಳು ಜಾನಕಿ ತಂಡ. ಕಳೆದ ವರ್ಷ 2018 ಜುಲೈ 2ರಂದು ಪ್ರಾರಂಭವಾದ ಧಾರಾವಾಹಿ ಕನ್ನಡ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಸುಮಾರು 263 ಸಂಚಿಕೆಗಳನ್ನು ಪೂರೈಸಿದೆ 'ಮಗಳು ಜಾನಕಿ'. ಮತ್ತಷ್ಟು ಮನರಂಜನನ್ನು ನೀಡುತ್ತ ಮತ್ತಷ್ಟು ವರುಷ ಯಶಸ್ವಿಯಾಗಿ ಮುಂದುವರೆಯಲಿ ಎನ್ನುವುದೆ ಪ್ರೇಕ್ಷಕರ ಆಶಯ.