Don't Miss!
- News 5 ವರ್ಷಗಳಲ್ಲಿ ಕರ್ನಾಟಕ ಸಂಸದರ ಸಾಧನೆ ಏನು? ಅಧ್ಯಯನ ಹೇಳೋದೇನು?
- Sports ಟಿ20 ವಿಶ್ವಕಪ್ಗೆ ಭಾರತ ತಂಡದಲ್ಲಿ ಕೆಎಲ್ ರಾಹುಲ್ಗೆ ಸ್ಥಾನ?; ರಾಬಿನ್ ಉತ್ತಪ್ಪ ಹೇಳಿದ್ದೇನು?
- Technology ಆನ್ಲೈನ್ ಶಾಪಿಂಗ್ ಮಾಡಲು ಇಲ್ಲಿವೇ ನೋಡಿ ಬೆಸ್ಟ್ ವೆಬ್ಸೈಟ್ಗಳು!
- Automobiles Hyundai: ಹಳೆಯ ಹ್ಯುಂಡೈ ಕ್ರೆಟಾವನ್ನು ಮರೆತುಬಿಡಿ... ಹೊಸ ಕ್ರೆಟಾ ಈಗ ಮತ್ತಷ್ಟು ಪ್ರೀಮಿಯಂ SUV
- Finance ಸಂಸ್ಥೆಯ ಎಲ್ಲ 30,000 ಉದ್ಯೋಗಿಗಳಿಗೆ ವರ್ಕ್ ಫಮ್ ಹೋಂ ನೀಡಿದ ಟೆಕ್ ಕಂಪೆನಿ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಈ ಧಾರಾವಾಹಿಗಳ ಯಶಸ್ಸಿನ ಹಿಂದೆ ಇವರಿದ್ದಾರೆ
ಸಾಮಾನ್ಯವಾಗಿ ಸಿನಿಮಾ ನಿರ್ದೇಶಕ ಆಗಬೇಕು ಎನ್ನುವವರಿಗೆ ಧಾರಾವಾಹಿ ನಿರ್ದೇಶನ ಒಳ್ಳೆಯ ಕಲಿಕೆ ನೀಡುತ್ತದೆ. ಕನ್ನಡದ ಅದೆಷ್ಟೋ ನಿರ್ದೇಶಕರು ಮೊದಲು ಧಾರಾವಾಹಿಗಳಲ್ಲಿ ಕೆಲಸ ಮಾಡಿ ನಂತರ ಸಿನಿಮಾಗೆ ಬಂದಿದ್ದಾರೆ.
ಆದರೆ, ಸದ್ಯ ಈ ಸೂತ್ರ ಉಲ್ಟಾ ಆಗಿದೆ. ದೊಡ್ಡ ದೊಡ್ಡ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ಡೈರೆಕ್ಟರ್ ಗಳು ಈಗ ಧಾರಾವಾಹಿ ಕಡೆ ಮುಖ ಮಾಡಿದ್ದಾರೆ. ಕಿರುತೆರೆಯಲ್ಲಿ ಸದ್ಯ ಜನಪ್ರಿಯತೆಗಳಿಸಿರುವ ಧಾರಾವಾಹಿಗಳ ಹಿಂದೆ ಈ ಪ್ರತಿಭಾವಂತ ನಿರ್ದೇಶಕರ ಕ್ರಿಯಾಶೀಲತೆ ಅಡಗಿದೆ.
'ಶನಿ' ಧಾರಾವಾಹಿ ನೋಡುಗರಿಗೆ ಇದು ಬೇಸರದ ಸುದ್ದಿ!
'ಉಘೇ ಉಘೇ ಮಾದೇಶ್ವರ', 'ಶನಿ', 'ಕಮಲಿ' ಧಾರಾವಾಹಿಗಳನ್ನು ಸಿನಿಮಾ ನಿರ್ದೇಶಕರು ಡೈರೆಕ್ಷನ್ ಮಾಡುತ್ತಿದ್ದಾರೆ. ಈ ನಿರ್ದೇಶಕ ಪ್ರತಿಭೆಯಿಂದ ಧಾರಾವಾಹಿಗಳ ಯಶಸ್ಸಿಗೆ ಹಾಗೂ ಅವುಗಳ ಕ್ವಾಲಿಟಿಗೆ ಸಹಾಯವಾಗಿದೆ . ಮುಂದೆ ಓದಿ..
'ಉಘೇ ಉಘೇ ಮಾದೇಶ್ವರ' - ಮಹೇಶ್ ಸುಖಧಾರೆ
'ಉಘೇ ಉಘೇ ಮಾದೇಶ್ವರ' ಜೀ ಕನ್ನಡದಲ್ಲಿ ಮೂಡಿ ಬರುತ್ತಿರುವ ಹೊಸ ಧಾರಾವಾಹಿಯಾಗಿದೆ. ಈ ಧಾರಾವಾಹಿಯನ್ನು ಮಹೇಶ್ ಸುಖಧಾರೆ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ 'ಸೈನಿಕ', 'ಸಂಭ್ರಮ', 'ಅಂಬರೀಶ' ಹಾಗೂ 'ಹ್ಯಾಪಿ ಬರ್ತ್ ಡೇ' ಸಿನಿಮಾಗಳಿಗೆ ಅವರು ಆಕ್ಷನ್ ಕಟ್ ಹೇಳಿದ್ದರು. ಶನಿವಾರ ಹಾಗೂ ಭಾನುವಾರ ಸಂಜೆ 6.30ಕ್ಕೆ ಈ ಸಂಚಿಕೆಗಳು ಪ್ರಸಾರ ಆಗುತ್ತಿವೆ.
ಶನಿ - ರಾಘವೇಂದ್ರ ಹೆಗ್ಡೆ
ಕಲರ್ಸ್ ಕನ್ನಡದಲ್ಲಿ ಶುರುವಾದ 'ಶನಿ' ಧಾರಾವಾಹಿ ದೊಡ್ಡ ವೀಕ್ಷಕ ಬಹಳವನ್ನು ತನ್ನದಾಗಿಸಿಕೊಂಡಿದೆ. ಈ ಧಾರಾವಾಹಿಯ ಯಶಸ್ಸಿನ ಹಿಂದೆ ರಾಘವೇಂದ್ರ ಹೆಗ್ಡೆ ಶ್ರಮವಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ರೊಂದಿಗೆ 'ಜಗ್ಗುದಾದ' ಸಿನಿಮಾ ಮಾಡಿದ್ದ ರಾಘವೇಂದ್ರ ಹೆಗ್ಡೆ ಅದರ ನಂತರ 'ಶನಿ' ಧಾರಾವಾಹಿಯನ್ನು ಶುರು ಮಾಡಿದರು.
'ಶನಿ' ಧಾರಾವಾಹಿಯ ಈ ಬಾಲ ಹನುಮ ಯಾರು?
ಕಮಲಿ - ಅರವಿಂದ್ ಕೌಶಿಕ್
'ಹುಲಿರಾಯ' ಸಿನಿಮಾವನ್ನು ಮಾಡಿದ್ದ ನಿರ್ದೇಶಕ ಅರವಿಂದ್ ಕೌಶಿಕ್ ಬಳಿಕ 'ಕಮಲಿ' ಧಾರಾವಾಹಿ ಪ್ರಾರಂಭ ಮಾಡಿದರು. ಹಾಗೆ ನೋಡಿದರೆ ಅರವಿಂದ್ ಕೌಶಿಕ್ ಅವರಿಗೆ ಕಿರುತೆರೆ ಹೊಸತೇನು ಅಲ್ಲ. ಈ ಹಿಂದೆ ರಚಿತಾ ರಾಮ್ ನಟಿಸಿದ್ದ 'ಅರಸಿ' ಧಾರಾವಾಹಿಯನ್ನು ಅರವಿಂದ್ ಕೌಶಿಕ್ ಅವರೇ ನಿರ್ದೇಶನ ಮಾಡಿದ್ದರು.
ವಾರಸ್ದಾರ - ಗಡ್ಡ ವಿಜಿ
ಯೋಗರಾಜ್ ಭಟ್ ಗ್ಯಾಂಗ್ ನಲ್ಲಿ ಗುರುತಿಸಿಕೊಂಡಿದ್ದ ಗಡ್ಡ ವಿಜಿ ನಂತರ ತಾವೇ ನಿರ್ದೇಶಕರಾದರು. ಅನಂತ್ ನಾಗ್ ಅವರು ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದ 'ಪ್ಲಸ್' ಚಿತ್ರವನ್ನ ಗಡ್ಡ ವಿಜಿ ಡೈರೆಕ್ಟ್ ಮಾಡಿದ್ದರು. ಆ ಬಳಿಕ 'ವಾರಸ್ದಾರ' ಧಾರಾವಾಹಿಯ ನಿರ್ದೇಶಕದ ಜವಾಬ್ದಾರಿಯನ್ನು ಗಡ್ಡ ವಿಜಿ ನಿರ್ವಹಿಸಿದ್ದರು. ಆದರೆ, ಆ ತಂಡದಲ್ಲಿ ಅವರು ಹೆಚ್ಚು ದಿನ ಇರಲಿಲ್ಲ.