Don't Miss!
- Lifestyle ಕಂಡ ಕಂಡಲ್ಲಿ ಏಕೆ ಉಗುಳಬಾರದು ಗೊತ್ತಾ? ಈ ವಿಡಿಯೋ ನೋಡಿ..!
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- News ಮಂಡ್ಯದ ‘ಹಲವು ಸುಮಲತಾ’ ತಂತ್ರ ಬೆಂಗಳೂರು ಗ್ರಾಮಾಂತದಲ್ಲೂ ಬಂತಾ? ಮತ್ತೊಬ್ಬ ಡಾ ಸಿಎನ್ ಮಂಜುನಾಥ್ ಕಣಕ್ಕೆ!
- Sports IPL 2024: ರಾಜಸ್ಥಾನ್ ರಾಯಲ್ಸ್ vs ಡೆಲ್ಲಿ ಕ್ಯಾಪಿಟಲ್ಸ್ ರೋಚಕ ಪಂದ್ಯದ ಟಾಸ್ ವರದಿ, ಆಡುವ 11ರ ಬಳಗ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಈ ಧಾರಾವಾಹಿಗಳ ಯಶಸ್ಸಿನ ಹಿಂದೆ ಇವರಿದ್ದಾರೆ
ಸಾಮಾನ್ಯವಾಗಿ ಸಿನಿಮಾ ನಿರ್ದೇಶಕ ಆಗಬೇಕು ಎನ್ನುವವರಿಗೆ ಧಾರಾವಾಹಿ ನಿರ್ದೇಶನ ಒಳ್ಳೆಯ ಕಲಿಕೆ ನೀಡುತ್ತದೆ. ಕನ್ನಡದ ಅದೆಷ್ಟೋ ನಿರ್ದೇಶಕರು ಮೊದಲು ಧಾರಾವಾಹಿಗಳಲ್ಲಿ ಕೆಲಸ ಮಾಡಿ ನಂತರ ಸಿನಿಮಾಗೆ ಬಂದಿದ್ದಾರೆ.
ಆದರೆ, ಸದ್ಯ ಈ ಸೂತ್ರ ಉಲ್ಟಾ ಆಗಿದೆ. ದೊಡ್ಡ ದೊಡ್ಡ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ಡೈರೆಕ್ಟರ್ ಗಳು ಈಗ ಧಾರಾವಾಹಿ ಕಡೆ ಮುಖ ಮಾಡಿದ್ದಾರೆ. ಕಿರುತೆರೆಯಲ್ಲಿ ಸದ್ಯ ಜನಪ್ರಿಯತೆಗಳಿಸಿರುವ ಧಾರಾವಾಹಿಗಳ ಹಿಂದೆ ಈ ಪ್ರತಿಭಾವಂತ ನಿರ್ದೇಶಕರ ಕ್ರಿಯಾಶೀಲತೆ ಅಡಗಿದೆ.
'ಶನಿ' ಧಾರಾವಾಹಿ ನೋಡುಗರಿಗೆ ಇದು ಬೇಸರದ ಸುದ್ದಿ!
'ಉಘೇ ಉಘೇ ಮಾದೇಶ್ವರ', 'ಶನಿ', 'ಕಮಲಿ' ಧಾರಾವಾಹಿಗಳನ್ನು ಸಿನಿಮಾ ನಿರ್ದೇಶಕರು ಡೈರೆಕ್ಷನ್ ಮಾಡುತ್ತಿದ್ದಾರೆ. ಈ ನಿರ್ದೇಶಕ ಪ್ರತಿಭೆಯಿಂದ ಧಾರಾವಾಹಿಗಳ ಯಶಸ್ಸಿಗೆ ಹಾಗೂ ಅವುಗಳ ಕ್ವಾಲಿಟಿಗೆ ಸಹಾಯವಾಗಿದೆ . ಮುಂದೆ ಓದಿ..
'ಉಘೇ ಉಘೇ ಮಾದೇಶ್ವರ' - ಮಹೇಶ್ ಸುಖಧಾರೆ
'ಉಘೇ ಉಘೇ ಮಾದೇಶ್ವರ' ಜೀ ಕನ್ನಡದಲ್ಲಿ ಮೂಡಿ ಬರುತ್ತಿರುವ ಹೊಸ ಧಾರಾವಾಹಿಯಾಗಿದೆ. ಈ ಧಾರಾವಾಹಿಯನ್ನು ಮಹೇಶ್ ಸುಖಧಾರೆ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ 'ಸೈನಿಕ', 'ಸಂಭ್ರಮ', 'ಅಂಬರೀಶ' ಹಾಗೂ 'ಹ್ಯಾಪಿ ಬರ್ತ್ ಡೇ' ಸಿನಿಮಾಗಳಿಗೆ ಅವರು ಆಕ್ಷನ್ ಕಟ್ ಹೇಳಿದ್ದರು. ಶನಿವಾರ ಹಾಗೂ ಭಾನುವಾರ ಸಂಜೆ 6.30ಕ್ಕೆ ಈ ಸಂಚಿಕೆಗಳು ಪ್ರಸಾರ ಆಗುತ್ತಿವೆ.
ಶನಿ - ರಾಘವೇಂದ್ರ ಹೆಗ್ಡೆ
ಕಲರ್ಸ್ ಕನ್ನಡದಲ್ಲಿ ಶುರುವಾದ 'ಶನಿ' ಧಾರಾವಾಹಿ ದೊಡ್ಡ ವೀಕ್ಷಕ ಬಹಳವನ್ನು ತನ್ನದಾಗಿಸಿಕೊಂಡಿದೆ. ಈ ಧಾರಾವಾಹಿಯ ಯಶಸ್ಸಿನ ಹಿಂದೆ ರಾಘವೇಂದ್ರ ಹೆಗ್ಡೆ ಶ್ರಮವಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ರೊಂದಿಗೆ 'ಜಗ್ಗುದಾದ' ಸಿನಿಮಾ ಮಾಡಿದ್ದ ರಾಘವೇಂದ್ರ ಹೆಗ್ಡೆ ಅದರ ನಂತರ 'ಶನಿ' ಧಾರಾವಾಹಿಯನ್ನು ಶುರು ಮಾಡಿದರು.
'ಶನಿ' ಧಾರಾವಾಹಿಯ ಈ ಬಾಲ ಹನುಮ ಯಾರು?
ಕಮಲಿ - ಅರವಿಂದ್ ಕೌಶಿಕ್
'ಹುಲಿರಾಯ' ಸಿನಿಮಾವನ್ನು ಮಾಡಿದ್ದ ನಿರ್ದೇಶಕ ಅರವಿಂದ್ ಕೌಶಿಕ್ ಬಳಿಕ 'ಕಮಲಿ' ಧಾರಾವಾಹಿ ಪ್ರಾರಂಭ ಮಾಡಿದರು. ಹಾಗೆ ನೋಡಿದರೆ ಅರವಿಂದ್ ಕೌಶಿಕ್ ಅವರಿಗೆ ಕಿರುತೆರೆ ಹೊಸತೇನು ಅಲ್ಲ. ಈ ಹಿಂದೆ ರಚಿತಾ ರಾಮ್ ನಟಿಸಿದ್ದ 'ಅರಸಿ' ಧಾರಾವಾಹಿಯನ್ನು ಅರವಿಂದ್ ಕೌಶಿಕ್ ಅವರೇ ನಿರ್ದೇಶನ ಮಾಡಿದ್ದರು.
ವಾರಸ್ದಾರ - ಗಡ್ಡ ವಿಜಿ
ಯೋಗರಾಜ್ ಭಟ್ ಗ್ಯಾಂಗ್ ನಲ್ಲಿ ಗುರುತಿಸಿಕೊಂಡಿದ್ದ ಗಡ್ಡ ವಿಜಿ ನಂತರ ತಾವೇ ನಿರ್ದೇಶಕರಾದರು. ಅನಂತ್ ನಾಗ್ ಅವರು ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದ 'ಪ್ಲಸ್' ಚಿತ್ರವನ್ನ ಗಡ್ಡ ವಿಜಿ ಡೈರೆಕ್ಟ್ ಮಾಡಿದ್ದರು. ಆ ಬಳಿಕ 'ವಾರಸ್ದಾರ' ಧಾರಾವಾಹಿಯ ನಿರ್ದೇಶಕದ ಜವಾಬ್ದಾರಿಯನ್ನು ಗಡ್ಡ ವಿಜಿ ನಿರ್ವಹಿಸಿದ್ದರು. ಆದರೆ, ಆ ತಂಡದಲ್ಲಿ ಅವರು ಹೆಚ್ಚು ದಿನ ಇರಲಿಲ್ಲ.