Don't Miss!
- News ಡಿಕೆ ಬ್ರದರ್ಸ್ ಭದ್ರಕೋಟೆಯಲ್ಲಿ ಮೋದಿ, ಅಮಿತ್ ಶಾ, ಯೋಗಿ ಪ್ರಚಾರ: ಡಿ ಕೆ ಸುರೇಶ್ ಹೇಳಿದ್ದೇನು?
- Lifestyle ರೆಸಿಪಿ: ಮಾವಿನ ಕಾಯಿ ತುರಿದು ಮಾಡುವ ಉಪ್ಪಿನಕಾಯಿ, ಎಣ್ಣೆ ಬಳಸಿಲ್ಲ, ವರ್ಷದವರೆಗೆ ಇಡಲೂ ಬಹುದು
- Technology Google: ಗೂಗಲ್ ಪಿಕ್ಸೆಲ್ 8a ಬೆಲೆ ಮಾಹಿತಿ ಲೀಕ್! ಈ ಫೋನ್ ಫೀಚರ್ಸ್ ಏನು?
- Automobiles ಯುವಕರಿಗೆ ಸಿಹಿಸುದ್ದಿ: ಕೈಗೆಟುಕುವ ಬೆಲೆ, ಮಾಸ್ ಲುಕ್ನಲ್ಲಿ ಬರುತ್ತಿದೆ ಹೊಸ ಬಜಾಜ್ ಪಲ್ಸರ್ 400 ಬೈಕ್
- Finance ಇನ್ಮುಂದೆ ನಿಮ್ಮ ಜಮೀನಿನಲ್ಲಿ ನೀವು ಮನೆ ಕಟ್ಟೋದಕ್ಕೂ ಸರ್ಕಾರದ ಅನುಮತಿ ಅಗತ್ಯ, ಏನಿದು ಹೋಸ ನಿಯಮ?
- Sports IPL 2024: ಆರ್ಸಿಬಿ ಕಪ್ ಗೆಲ್ಲದಿರಲು ಅತಿಯಾದ ಪಾರ್ಟಿ ಕಾರಣವೇ?; ರೈನಾ ಬಿಚ್ಚಿಟ್ಟ ಸತ್ಯ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಧಾರಾವಾಹಿ ಲೋಕಕ್ಕೆ ಎಂಟ್ರಿ ಕೊಟ್ಟ ಹಿರಿಯ ನಟಿ ಶ್ರುತಿ
ಸ್ಯಾಂಡಲ್ ವುಡ್ ನ ಹಿರಿಯ ನಟಿ ಶ್ರುತಿ ಧಾರಾವಾಹಿ ಪ್ರಪಂಚಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಸಿನಿಮಾ ಮತ್ತು ರಾಜಕೀಯ ಎರಡು ಕ್ಷೇತ್ರದಲ್ಲು ಸಕ್ರೀಯರಾಗಿರುವ ಶ್ರುತಿ ಈಗ ಧಾರಾವಾಹಿಯಲ್ಲಿ ಬಣ್ಣ ಹಚ್ಚಲು ಸಜ್ಜಾಗಿದ್ದಾರೆ. ಈಗಾಗಲೆ 'ಮಜಾ ಭಾರತ' ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ಳುವ ಮೂಲಕ ಕಿರುತೆರೆಗೆ ಕಾಲಿಟ್ಟಿದ್ದ ಶ್ರುತಿ, ಈಗ ಮೊದಲ ಬಾರಿಗೆ ಸೀರಿಯಲ್ ನಲ್ಲಿ ಮಿಂಚಲು ರೆಡಿಯಾಗಿದ್ದಾರೆ.
ಅಂದ್ಹಾಗೆ ಶ್ರುತಿ ಅಭಿನಯಿಸುತ್ತಿರುವ ಧಾರಾವಾಹಿ 'ಸೇವಂತಿ'. ಉದಯಟಿವಿಯಲ್ಲಿ ಪ್ರಸಾರವಾಗುತ್ತಿರುವ 'ಸೇವಂತಿ' ಧಾರಾವಾಹಿಯಲ್ಲಿ ಶ್ರುತಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಶೇಷ ಅಂದ್ರೆ ಶ್ರುತಿ ಬಣ್ಣ ಹಚ್ಚುತ್ತಿರುವುದು ಕೇವಲ ಅತಿಥಿ ಪಾತ್ರದ ಮೂಲಕವಷ್ಟೆ. ಸೇವಂತಿ ಧಾರಾವಾಹಿ ಈಗ ನೂರನೆ ಸಂಚಿಕೆಯ ಹೋಸ್ತಿಲಲ್ಲಿ ಇದೆ.
ಅಮ್ಮನ ಬಗ್ಗೆ ನಿಂದನೆ ಬೇಡ: ಮನವಿ ಮಾಡಿದ ಶ್ರುತಿ ಮಗಳು
ಯಶಸ್ವಿಯಾಗಿ ಮುನ್ನುತ್ತ ಪ್ರೇಕ್ಷಕರನ್ನು ರಂಜಿಸುತ್ತಿರುವ ಈ ಸುಂದರ್ಭದಲ್ಲಿ ಶ್ರುತಿ ಎಂಟ್ರಿಯಿಂದ ಧಾರಾವಾಹಿ ರೋಚಕ ತಿರುವು ಪಡೆದುಕೊಳ್ಳಲಿದೆ. ಜೈಲು ಸೇರಿರುವ ಸಾಕು ತಂದೆಯನ್ನು ಬಿಡಿಸಲು ಸೇವಂತಿ ಒಂದು ವರ್ಷದ ಒಪ್ಪಂದದ ಮೇರೆಗೆ ಅರ್ಜುನ್ ಜೊತೆ ಗುಟ್ಟಾಗಿ ಮದುವೆಯಾಗಿದ್ದಾಳೆ.
ಸೇವಂತಿಗೆ ಪರಿಚಯ ಇರುವ ಪಾತ್ರದಲ್ಲಿ ಶ್ರುತಿ ಕಾಣಿಸಿಕೊಳ್ಳುತ್ತಿದ್ದಾರೆ. ಸೇವಂತಿಯನ್ನು ಭೇಟಿಯಾಗಲು ಶ್ರುತಿ ಅರ್ಜುನ್ ಮನೆಗೆ ಬರುತ್ತಾರೆ. ಶ್ರುತಿಯ ಎಂಟ್ರಿಯಿಂದ ಮನೆಯರಿಗೆ ಖುಷಿ ನೀಡುತ್ತೆ. ಸೇವಂತಿ ಮತ್ತು ಅರ್ಜುನ್ ಅವರದ್ದು ಒಪ್ಪಂದದ ಮದುವೆ ಎಂದು ಗೊತ್ತಿರದಿದ್ದರು ಸೂಕ್ಷ್ಮಮಾಗಿ ಶ್ರುತಿ ಎಲ್ಲವನ್ನು ಗಮನಿಸುತ್ತಿರುತ್ತಾರೆ. ಶ್ರುತಿ ಆಗಮನದಿಂದ ಇಬ್ಬರ ಬದುಕಲ್ಲಿ ಹೊಸ ತಿರುವು ಪಡೆದುಕೊಳ್ಳಲಿದೆ.
ಶ್ರುತಿ ಮೊದಲ ಬಾರಿಗೆ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿರುವುದು ವೀಕ್ಷಕರಿಗು ಹೊಸ ಉತ್ಸಾಹ ತುಂಬಿದೆ. ಶ್ರುತಿ ಸದ್ಯ ಮೋಹನದಾಸ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಖ್ಯಾತ ನಿರ್ದೇಶಕ ರಾಷ್ಟ್ರಪ್ರಶಸ್ತಿ ವಿಜೇತ ಪಿ ಶೇಷಾದ್ರಿ ಅವರ ಸಾರಥ್ಯದಲ್ಲಿ ಮೂಡಿಬರುತ್ತಿರುವ ಸಿನಿಮಾವಿದು. ಈ ಚಿತ್ರದಲ್ಲಿ ಶ್ರುತಿ ಮಹಾತ್ಮಗಾಂಧಿ ತಾಯಿ ಪುತಲೀಬಾಯಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಈ ಸಿನಿಮಾ ಕನ್ನಡ ಸೇರಿದಂತೆ ಹಿಂದಿ ಮತ್ತು ಇಂಗ್ಲೀಷ್ ನಲ್ಲೂ ತಯಾರಾಗುತ್ತಿದೆ. ಇಲ್ಲಿ ಗಾಂಧೀಜಿ ಅವರ ಬಾಲ್ಯದ ದಿನಗಳನ್ನು ಮಾತ್ರ ಕಟ್ಟಿಕೊಡಲಾಗುತ್ತೆ. 1879ರಿಂದ 1895ರವರೆಗಿನ ಗಾಂಧೀಜಿ ಅವರ ಜೀವನವನ್ನು ಮಾತ್ರ ಈ ಚಿತ್ರದಲ್ಲಿ ಕಾಣಬಹುದಾಗಿದೆ. ಈ ಚಿತ್ರದಲ್ಲಿ ಪುತಲೀಬಾಯಿ ಪಾತ್ರ ಮಾಡಿರುವ ಬಗ್ಗೆ ಸಂತಸಗೊಂಡಿದ್ದಾರೆ ಶ್ರುತಿ.