Aase : ರೋಹಿಣಿ ಅಸಲಿ ರೂಪ ಮನೆ ಮುಂದೆ ಬಯಲು, ಹೆಂಡತಿಯನ್ನು ಮನೆಯಿಂದ ಹೊರ ದಬ್ಬಿದ ಮನೋಜ
ರೋಹಿಣಿ ಗೆ ತನ್ನ ಅತ್ತೆಯ ಕಾಟ ತಡೆದುಕೊಳ್ಳಲಾಗುತ್ತಿಲ್ಲ. ಕೃಷ್ ತನ್ನ ಮಗ ಎಂದು ಗೊತ್ತಾದರೆ ಖಂಡಿತವಾಗಿಯೂ ಈ ಶಾಂತಿ ಸುಮ್ಮನೆ ಬಿಡುವುದಿಲ್ಲ ಎಂದು ರೋಹಿಣಿ ಗೆ ಗೊತ್ತಿದೆ. ಶಾಂತಿ ರೋಹಿಣಿಯನ್ನ ಬಹಳ ಜೋರಾಗಿ ಬೆದರಿಸುತ್ತಾಳೆ ಹಾಗೆಯೇ ನಿಜ ಹೇಳದೆ ಹೋದರೆ ಕೃಷ್ ನನ್ನು ಸಾಯಿಸಿ ಬಿಡುತ್ತೇನೆ ಎಂದು ಬಹಳ ಕೋಪದಿಂದ ಹೇಳಿದಾಗ ರೋಹಿಣಿ ಬಹಳ ಕೋಪದಿಂದ ಅತ್ತೆಯ ಜೊತೆ ಮಾತನಾಡುತ್ತಾಳೆ. ನನ್ನ ಮಗನನ್ನೇ ಸಾಯಿಸುತ್ತೇನೆ ಎಂದು ಹೇಳುವ ಹೃದಯವ ನಿಮಗೆ? ನನ್ನ ಮಗನನ್ನು ಸಾಯಿಸಲು ನೀನು ಯಾರು ಎಂದು ಜೋರಾಗಿ ಹೇಳುತ್ತಾಳೆ. ಇದನ್ನು ಕೇಳಿದ ಶಾಂತಿಗೆ ಬಹಳಷ್ಟು ಶಾಕ್ ಆಗುತ್ತದೆ ಇದೇನಪ್ಪ ಏಕವಚನದಲ್ಲಿ ಹೀಗೆ ಹೇಳಿದಳು ಎಂದು ಅಂದುಕೊಳ್ಳುತ್ತಾಳೆ
ಹಾಗೆಯೇ ಆಕೆಗೊಂದು ವಿಚಾರ ಸ್ಪಷ್ಟವಾಗಿ ತಿಳಿಯುತ್ತದೆ. ಕೃಷ್ ರೋಹಿಣೀಯ ಮಗ. ರೋಹಿಣಿ ಗೆ ಮಗ ಇದ್ದಾನೆ ಎಂದು ತಿಳಿದ ಕೂಡಲೇ ಮನೋಜ ತಲೆ ಸುತ್ತಿ ಬೀಳುತ್ತಾನೆ. ಇದನ್ನು ನೋಡಿ ಮನೆ ಮಂದಿಯೆಲ್ಲ ಬಹಳ ಶಾಕ್ ಆಗುತ್ತಾರೆ. ಇದೇನಪ್ಪಾ ಮನೋಜನಿಗೆ ಏನಾಯ್ತು ಎನ್ನುವ ಆಲೋಚನೆ ಮೂಡುತ್ತದೆ. ಕೊನೆಗೆ ಅದೇಗೋ ಮನೋಜ ಗೆ ಎಚ್ಚರ ಆಗುತ್ತದೆ. ಆತ ತನ್ನ ಹೆಂಡತಿ ಮೋಸ ಮಾಡಿಬಿಟ್ಟಳು ಇದರಿಂದಾಗಿ ನನಗೆ ಬಹಳ ನೋವಾಗುತ್ತಿದೆ . ನಾನು ಏನು ಮಾಡಲಿ ಎಂದು ತನ್ನ ತಾಯಿಯತ್ತ ನೋಡಿ ಜೋರಾಗಿ ಅಳುತ್ತಾನೆ. ಸೂರ್ಯ ಮಾತ್ರ ರೋಹಿಣಿಯ ಮನದಲ್ಲಿ ಸ್ವಾರ್ಥ ತುಂಬಿಕೊಂಡಿದೆ. ಆದ ಕಾರಣ ಆಕೆ ಮನೋಜನ ಜೀವನದಲ್ಲಿ ಬಂದಿದ್ದಾಳೆ. ಚಿಕ್ಕ ಮಗುವನ್ನು ಬಿಟ್ಟು ತನ್ನದೇ ಜೀವನ ಕಟ್ಟಿಕೊಳ್ಳಲು ನೋಡುತ್ತಿದ್ದಾಳೆ ಎಂದು ಹೇಳಿದಾಗ ರೋಹಿಣಿ ನಿಜ ವಿಚಾರವನ್ನು ಹೇಳಲು ಬಾಯಿ ತೆಗೆಯುತ್ತಾಳೆ.

ಸೂರ್ಯ ಹಾಗೂ ರಂಗನಾಥನ ಮಾತು ಆಕೆಯ ಮನಸ್ಸಿಗೆ ಬಹಳಷ್ಟು ಘಾಸಿ ಮಾಡಿತ್ತು. ತನ್ನ ತಾಯಿಯಿಂದಾಗಿ ನನಗೆ ಇಂದು ಈ ಸ್ಥಿತಿ ಎದುರಾಗಿದೆ. ನನಗೆ ಬಹಳಷ್ಟು ನೋವಾಗಿದೆ ಎಂದು ಬಹಳ ಸಂಕಟ ಪಡುತ್ತಾಳೆ ರೋಹಿಣಿ. ರೋಹಿಣಿಯ ತಾಯಿ ಒತ್ತಾಯ ಪೂರ್ವಕವಾಗಿ ಮುದುಕನಿಗೆ ಮದುವೆ ಮಾಡುತ್ತಾರೆ ಅದು 18 ವರುಷಕ್ಕೆ. ಆ ವೇಳೆ ತನ್ನ ತಾಯಿಯ ಒತ್ತಾಯಕ್ಕೆ ಮದುವೆ ಆದೆ. ಆದರೆ ನನ್ನ ಗಂಡ ಮದುವೆ ಆಗಿ ನನ್ನನ್ನು ಗರ್ಭಿಣಿ ಮಾಡಿ ಒಂದೇ ವರುಷಕ್ಕೆ ಸತ್ತು ಹೋದ ಎಂದು ಜೋರಾಗಿ ಅತ್ತಾಗ ಕೋಪಗೊಂಡ ಶಾಂತಿ ರೋಹಿಣಿಯ ತಲೆ ಕೂದಲನ್ನು ಹಿಡಿದು ಬಹಳ ಜೋರಾಗಿ ಎಲೆಯುತ್ತಾಳೆ. ಇದರಿಂದ ರೋಹಿಣಿಗೆ ಬಹಳ ನೋವಾಗುತ್ತದೆ. ಆದರೆ ಮನೋಜನಿಗೆ ಮಾತ್ರ ರೋಹಿಣಿಯನ್ನ ನೋಡಿ ಸಿಟ್ಟು ತಡೆದುಕೊಳ್ಳಲಾಗುವುದಿಲ್ಲ
ರೋಹಿಣಿ ಮುಖ ನೋಡಲೂ ಹೇಸಿಗೆ ಪಟ್ಟುಕೊಂಡ ಮನೋಜ್
ರೋಹಿಣಿಯನ್ನ ನೋಡಿ ಬಹಳ ನೋವು ಪಡುತ್ತಾನೆ. ತಾನು ಮನಸಾರೆ ಬಹಳ ಪ್ರೀತಿ ಮಾಡಿ ಇದೀಗ ನನಗೆ ಮೋಸ ಮಾಡಿದೆಯಲ್ಲ ಎಂದು ಸರಿಯಾಗಿ ರೋಹಿಣಿಯನ್ನು ಹೊಡೆಯುತ್ತಾನೆ. ಮನೋಜನನ್ನು ಕಂಟ್ರೋಲ್ ಮಾಡಲು ಯಾರಿಂದ ಕೂಡ ಸಾಧ್ಯವಾಗುವುದಿಲ್ಲ ಕೊನೆಗೆ ಸೂರ್ಯ ಮನೋಜನನ್ನು ತಡೆಯಲು ಪ್ರಯತ್ನ ಮಾಡುತ್ತಾನೆ ಆದರೆ ಅದು ಸಾಧ್ಯ ಆಗುವುದಿಲ್ಲ. ರಂಗನಾಥನಿಗೆ ಮಗನ ಮುಖ ನೋಡಲು ಕೂಡ ಬೇಸರವಾಗುತ್ತದೆ. ಆದರೆ ಅವಸರದ ನಿರ್ಧಾರವನ್ನು ಯಾವತ್ತೂ ಕೂಡ ತೆಗೆದುಕೊಳ್ಳಬೇಡ ಎಂದು ರಂಗನಾಥ ಮನೋಜನಿಗೆ ಬುದ್ಧಿವಾದ ಹೇಳುತ್ತಾರೆ ಆದರೆ ಮನುಜ ಮಾತ್ರ ಕೋಪವನ್ನು ತಡೆದುಕೊಳ್ಳುವುದಿಲ್ಲ. ರೋಹಿಣಿಯ ಮೇಲೆ ಬಹಳ ಕೈ ಮಾಡುತ್ತಾನೆ.
ಮನೋಜನ ಕಾಲಿಗೆ ಬಿದ್ದ ರೋಹಿಣಿ
ಆದರೆ ರೋಹಿಣಿ ಮನೋಜನ ಕಾಲಿಗೆ ಬೀಳುತ್ತಾಳೆ. ದಯವಿಟ್ಟು ನನ್ನ ಬಿಟ್ಟು ಹೋಗಬೇಡ ನನಗೆ ನೀನು ಎಂದರೆ ಬಹಳ ಪ್ರೀತಿ. ದಯವಿಟ್ಟು ನನ್ನ ದೂರ ಮಾಡಬೇಡ ಎಂದು ಕೇಳಿಕೊಂಡಾಗ ರೋಹಿಣಿ ಜುಟ್ಟು ಹಿಡಿದು ದರ ದರನೆ ರೋಹಿನಿಯನ್ನೂ ಎಳೆದುಕೊಂಡು ಹೋಗಿ ಮನೆಯಿಂದ ಹೊರಗೆ ಹಾಕುತ್ತಾನೆ . ರೋಹಿಣಿಗೆ ಇದೀಗ ದಿಕ್ಕೇ ತೋಚದ ಹಾಗೆ ಆಗಿದೆ..ತನ್ನ ತಾಯಿ ಹಾಗೂ ಮಗುವಿನ ಜೀವನ ರೂಪಿಸುವ ಜವಾಬ್ದಾರಿ ರೋಹಿಣಿಗೆ ಎದುರಾಗಿದೆ.


Click it and Unblock the Notifications











