ಜೀವದ ಗೆಳತಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡ 'ಸುಬ್ಬಲಕ್ಷ್ಮಿ ಸಂಸಾರ' ಧಾರಾವಾಹಿ ನಟ
Recommended Video
ಕನ್ನಡ ಕಿರುತೆರೆಯ ಮತ್ತೊಬ್ಬ ನಟ ನಿಶ್ಚಿತಾರ್ಥ ಮಾಡಿಕೊಂಡಿಕೊಂಡಿದ್ದಾರೆ. ಜೀ ಕನ್ನಡ ವಾಹಿನಿಯ 'ಸುಬ್ಬಲಕ್ಷ್ಮಿ ಸಂಸಾರ' ಧಾರಾವಾಹಿಯ ನಟ ಭವಾನಿ ಸಿಂಗ್ ಎಂಗೇಜ್ ಆಗಿದ್ದಾರೆ.
ಪಂಕಜಾ ಶಿವಣ್ಣ ಎಂಬುವವರ ಜೊತೆಗೆ ಭವಾನಿ ಸಿಂಗ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಭವಾನಿ ಸಿಂಗ್ ಮತ್ತು ಪಂಕಜಾ ಇಬ್ಬರು 2 ವರ್ಷಗಳಿಂದ ಸ್ನೇಹ ಹೊಂದಿದ್ದಾರೆ. ಬರೀ ಖುಷಿಯಲ್ಲಿ ಮಾತ್ರಲ್ಲದೆ, ಭವಾನಿ ಸಿಂಗ್ ಕಷ್ಟದ ದಿನದಲ್ಲಿಯೂ ಪಂಕಜಾ ಅವರ ಜೊತೆಗೆ ನಿಂತಿದ್ದರು. ಹೀಗಾಗಿ ಈಕೆಯೇ ನನಗೆ ಸರಿಯಾದ ಜೋಡಿ ಎಂದು ಭವಾನಿ ನಿರ್ಧಾರ ಮಾಡಿದ್ದಾರೆ.

ಪಂಕಜಾರನ್ನು ಪ್ರೀತಿಸಿದ ಭವಾನಿ ಸಿಂಗ್ ಪ್ರಮೋಸ್ ಮಾಡಿದರು. ಇಬ್ಬರೂ ಒಬ್ಬರನ್ನೊಬ್ಬರೂ ಪ್ರೀತಿಸಿ, ಈಗ ಮದುವೆ ಆಗುತ್ತಿದ್ದಾರೆ. ನಿಶ್ಚಿತಾರ್ಥ ಆಗಿರುವ ಸಂತಸವನ್ನು ಭವಾನಿ ಸಿಂಗ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಭವಾನಿ ಸಿಂಗ್ 'ಚರಣದಾಸಿ' ಹಾಗೂ 'ಸುಬ್ಬಲಕ್ಷ್ಮಿ ಸಂಸಾರ' ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಹೊಸದಾಗಿ ಶುರು ಆಗಿರುವ ಕಲರ್ಸ್ ಕನ್ನಡದ 'ರಕ್ಷಾ ಬಂಧನ' ಸೀರಿಯಲ್ ನಲ್ಲಿಯೂ ನಾಯಕನಾಗಿದ್ದಾರೆ.


Click it and Unblock the Notifications











