Amruthadhaare; ಮಹಿಮಾ ಬಗ್ಗೆ ಹೆಚ್ಚಾಯ್ತು ಗೌತಮ್ ಪ್ರೀತಿ, ಗಲಿಬಿಲಿಗೊಂಡ ಶಕುಂತಲಾ ದೇವಿ!
ಮಹಿಮಾ ಎಂದರೆ ಗೌತಮ್ಗೆ ಪಂಚಪ್ರಾಣ ತಾನು ಆಡಿಸಿ ಬೆಳೆಸಿದ ಮಗು ಇದೀಗ ಆಕೆಯೇ ಮಗುವಿಗೆ ತಾಯಿ ಆಗುತ್ತಿದ್ದಾಳೆ ಎನ್ನುವ ಸುದ್ದಿ ಕೇಳಿಯೇ ಗೌತಮ್ಗೆ ತಡೆಯಲಾರದಷ್ಟು ಖುಷಿ ಆಗುತ್ತದೆ. ಗೌತಮ್ ಖುಷಿಗೆ ಪಾರವೇ ಇಲ್ಲದ ಹಾಗೆ ಆಗಿದೆ ಮಹಿಮಾಗೆ ಮೊದಲಿಲ್ಲ ಅಷ್ಟಾಗಿ ಮನೆ ಮಂದಿಯ ಪ್ರೀತಿ ಸಿಗುತ್ತಿರಲಿಲ್ಲ. ಆದರೆ ಇದೀಗ ಮಹಿಮಾಗೆ ಮನೆ ಮಂದಿಯೇಲ್ಲ ಬಹಳ ತೋರಿಸುತ್ತಾ ಇದ್ದಾರೆ.
ಮಹಿಮಾ ತಾಯಿ ಆಗುತ್ತಿರುವ ಸುದ್ದಿ ಕೇಳಿ ಜೀವ ತಂದೆ ತಾಯಿಯ ಕೈ ಕಾಲು ನೆಲದಲ್ಲಿ ನಿಲ್ಲುತ್ತಿಲ್ಲ. ಅಜ್ಜಿ ತಾತ ಆಗುತ್ತಿರುವ ಖುಷಿಯಲ್ಲಿ ಅವರಿಬ್ಬರೂ ಇದ್ದಾರೆ. ಇನ್ನು ಗೌತಮ್ ಭೂಮಿಕಾ ಮನೆಗೆ ಹೋಗಿದ್ದಾನೆ . ಆಕೆಯ ಮನೆಯಲ್ಲಿ ಅಡ್ಜಸ್ಟ್ ಮಾಡಿಕೊಂಡು ರಾತ್ರಿ ಇಡೀ ಕಾಲ ಕಳೆಯುತ್ತಾನೆ. ಸೋಫಾದ ಮೇಲೆ ಮಲಗಲು ಗೌತಮ್ ಗೆ ಬಹಳ ಕಷ್ಟ ಆದರೂ ಕೂಡ ಅದೆಲ್ಲವನ್ನೂ ಸಹಿಸಿಕೊಂಡು ಸೋಫಾದ ಮೇಲೆ ಮಲಗುತ್ತಾನೆ.

ಇನ್ನು ಮರುದಿನ ಗೌತಮ್ ತನ್ನ ತಂಗಿಯ ಬಳಿ ಕೆಲವು ಬುದ್ದಿ ಮಾತುಗಳನ್ನು ಹೇಳುತ್ತಾನೆ. ಹಾಗೆಯೇ ಆಕೆಗೆ ತಿಳಿ ಹೇಳುತ್ತಾನೆ ಯಾಕೆಂದರೆ ಮಹಿಮಾ ತಾಯಿ ಆಗುತ್ತಿದ್ದಾರೆ. ಆಕೆ ಇದನ್ನೆಲ್ಲ ನೆಗ್ಲೆಕ್ಟ್ ಮಾಡಬಾರದು ಎಂದು ಸಲಹೆಗಳನ್ನು ನೀಡುತ್ತಾ ಇರುತ್ತಾನೆ.
ಮಹಿಮಾಗೆ ಬುದ್ದಿ ಹೇಳುತ್ತಿರುವ ಗೌತಮ್
ನೀನು ಮುಂಚಿನ ತರ ಇರಲು ಸಾಧ್ಯ ಇಲ್ಲ. ಯಾಕೆಂದರೆ ಇದೀಗ ನೀನು ತಾಯಿ ಆಗುತ್ತಾ ಇದ್ದೀಯಾ. ತುಂಬಾ ಜಾಗೃತೆಯಿಂದ ಇರಬೇಕು ಎಂದೆಲ್ಲ ಹೇಳುತ್ತಾರೆ. ಇದನ್ನು ನೋಡಿದ ಭೂಮಿಕಾ ಮಾತ್ರ ಗೌತಮ್ ಬಗ್ಗೆ ಬಹಳ ಹೆಮ್ಮೆ ಪಡುತ್ತಾ ಇರುತ್ತಾಳೆ. ಗೌತಮ್ ತನ್ನ ತಂಗಿಯ ಮೇಲೆ ಅತಿಯಾದ ಪ್ರೀತಿ ತೋರಿಸುತ್ತಾ ಇರುವುದು ಶಕುಂತಲಾ ದೇವಿಗೆ ಸ್ವಲ್ಪ ಮಟ್ಟಿಗೆ ಇರಿಸು ಮುರಿಸು ಆಗುತ್ತದೆ.
ಅಮ್ಮನ ಮಾತು ಕೇಳಿ ಕುಪಿತಗೊಂಡ ಮಹಿಮಾ
ಮಹಿಮಾ ಬಳಿ ಮೆತ್ತಗೆ ಬಂದು ಶಕುಂತಲಾ ದೇವಿ ಹೇಳುತ್ತಾರೆ ನಿಮ್ಮ ಇಬ್ಬರ ಇಲ್ಲಿಗಲ್ ವ್ಯವಹಾರಕ್ಕೆ ಮದುವೆ ಎಂಬ ಮುದ್ರೆ ಒತ್ತಿದ್ದಿಯ. ಈಗ ನೀನು ಗರ್ಭಿಣಿ ಎಂದು ತಿಳಿದು ಗೌತಮ್ ಬಹಳ ಖುಷಿ ಪಟ್ಟಿದ್ದಾನೆ ಎಂದು ಹೇಳುತ್ತಾಳೆ. ಇದಲ್ಲೆ ಮಹಿಮಾಗೆ ಸಿಟ್ಟು ಬಂದು ಜೋರಾಗಿ ಕಿರುಚಿಕೊಳ್ಳುತ್ತಾಳೆ.

ಶಕುಂತಲಾ ಮೇಲೆ ಕಿಡಿ ಕಾರಿದ ಗೌತಮ್
ಆವೇಳೆ ಅಲ್ಲಿಗೆ ಬಂದ ಗೌತಮ್ ಏನಾಯಿತು ಎಂದು ಗಾಬರಿಯಿಂದ ಕೇಳಿದಾಗ ಮಹಿಮಾ ಕಾಲು ಸ್ಲಿಪ್ ಆಗಿ ಬಿಟ್ಟಿತು ಎಂದು ಹೇಳುತ್ತಾಳೆ. ಇದನ್ನು ಕೇಳಿದ ಗೌತಮ್ ಶಕುಂತಲಾ ದೇವಿಗೆ ಬೈದು ಬುದ್ಧಿವಾದ ಹೇಳುತ್ತಾನೆ. ಇದನ್ನು ನೋಡಿದ ಮಹಿಮಾಗೆ ನಗು ಬರುತ್ತದೆ.


Click it and Unblock the Notifications











