Bhagya Lakshmi ; ಭಾಗ್ಯ ಮೇಲೆ ಮತ್ತೆ ಕೋಪ ಮಾಡ್ಕೊಂಡ ತಾಂಡವ ತಿನ್ನೋ ಅನ್ನಕ್ಕೂ ಕಲ್ಲು ಹಾಕ್ತಾನಾ ?

By ಪೂರ್ವ

ಭಾಗ್ಯ ಲಂಚ್ ಬಾಕ್ಸ್ ಸರ್ವಿಸ್ ಮಾಡುತ್ತಿರುವ ವೇಳೆ ಆಕೆಯ ಸೈಕಲ್ ಗಾಳಿ ಹೋಗುತ್ತದೆ. ರಸ್ತೆ ಮಧ್ಯೆ ನಿಂತಿದ್ದ ಸೈಕಲನ್ನು ದೂಡಿಕೊಂಡು ಮುಂದಕ್ಕೆ ಸಾಗುತ್ತಿರುತ್ತಾಳೆ. ಸ್ವಲ್ಪ ದೂರ ಹೋದ ಬಳಿಕ ಪಂಕ್ಚರ್ ಅಂಗಡಿ ಸಿಗುತ್ತದೆ. ಅಲ್ಲಿ ಪಂಕ್ಚರ್ ಹಾಕಿಸಿ ಭಾಗ್ಯ ಮುಂದಕ್ಕೆ ಸಾಗುತ್ತಾಳೆ. ಇದಕ್ಕಿಂತೆ ಕಸ್ಟಮರ್ ಬಹಳ ಜೋರಾಗಿಯೇ ಬೈಯುತ್ತಾನೆ. ಏನಿದು ನಿಮಗೆ ನಾನು ಹೇಳಿದ್ದಲ್ಲ ಇನ್ ಟೈಮ್ ನಲ್ಲಿ ನಮಗೆ ಪಾರ್ಸಲ್ ತಂದುಕೊಡಬೇಕೆಂದು ಆದರೆ ನಿಮಗೆ ತಂದುಕೊಡಲು ಆಗಲಿಲ್ಲ ಎಂದಾದರೆ ಒಂದು ಮಾತನ್ನು ಹೇಳಬೇಕಾಗಿತ್ತು. ಯಾಕೆ ನಮ್ಮನ್ ಇಷ್ಟೊಂದು ಕಾಯಿಸುತ್ತಿದ್ದೀರಾ ಎಂದು ಜೋರಾಗಿ ಹೇಳುತ್ತಾನೆ. ಇದನ್ನು ಕೇಳಿದ ಭಾಗ್ಯ ಖಂಡಿತವಾಗಿ ಬಂದೇ ಬರುತ್ತೇನೆ ಎಂದು ಹೇಳುತ್ತಾಳೆ.

ಇದನ್ನು ಕೇಳಿದ ಕಸ್ಟಮರ್ ಸುಮ್ಮನಗುತ್ತಾನೆ. ಬಳಿಕ ಭಾಗ್ಯ ಬಹಳ ಜೋರಾಗಿಯೇ ಸೈಕಲ್ ಓಡಿಸಿ ಕಸ್ಟಮರ್ ಮನೆಯನ್ನು ಕೊನೆಗೂ ತಲುಪುತ್ತಾಳೆ. ಕಸ್ಟಮರ್ ಭಾಗ್ಯಳನ್ನೂ ನೋಡಿ ಕೋಪಗೊಂಡು ನಿಮ್ಮ ಬಳಿ ನಾನು ಹತ್ತು ಗಂಟೆಗೆ ಬರಲು ಹೇಳಿದ್ದು ಆದರೆ ನೀವು ಬಹಳ ತಡವಾಗಿ ಬಂದಿದ್ದೀರಾ ಎಂದು ಹೇಳಿ ಭಾಗ್ಯ ತಂದಿದ್ದ ಕ್ಯಾರಿಯರ್ ನಲ್ಲಿರುವ ಊಟವನ್ನು ಪರಿಶೀಲಿಸುತ್ತಾನೆ.ಬಳಿಕ ಖುಷಿ ಪಟ್ಟ ಕಸ್ಟಮರ್ ನನಗೆ ನಿಮ್ಮ ಊಟ ಬಹಳ ಹಿಡಿಸಿದೆ. ಒಬ್ಬಟ್ಟು ಬಹಳ ಚೆನ್ನಾಗಿದೆ ನನ್ನ ಮನೆಯಲ್ಲಿ ಏನೇ ಕಾರ್ಯಕ್ರಮವಾದರು ಖಂಡಿತವಾಗಿಯೂ ನಿಮಗೆ ನಾನು ಆರ್ಡರ್ ಕೊಡುತ್ತೇನೆ ಎಂದು ಹೇಳುತ್ತಾರೆ. ಈ ಮಾತನ್ನು ಕೇಳಿದ ಭಾಗ್ಯ ಗೆ ಬಹಳ ಖುಷಿಯಾಗುತ್ತದೆ. ಕಸ್ಟಮರ್ ಭಾಗ್ಯಗೆ ಹಣ ನೀಡಿ ಅಲ್ಲಿಂದ ಹೋಗುತ್ತಾನೆ.

kannada-serial-bhagya-lakshmi-written-04th-april

ಇದನ್ನು ಕೇಳಿದ ಕಸ್ಟಮರ್ ಸುಮ್ಮನಗುತ್ತಾನೆ. ಬಳಿಕ ಭಾಗ್ಯ ಬಹಳ ಜೋರಾಗಿಯೇ ಸೈಕಲ್ ಓಡಿಸಿ ಕಸ್ಟಮರ್ ಮನೆಯನ್ನು ಕೊನೆಗೂ ತಲುಪುತ್ತಾಳೆ. ಕಸ್ಟಮರ್ ಭಾಗ್ಯಳನ್ನೂ ನೋಡಿ ಕೋಪಗೊಂಡು ನಿಮ್ಮ ಬಳಿ ನಾನು ಹತ್ತು ಗಂಟೆಗೆ ಬರಲು ಹೇಳಿದ್ದು ಆದರೆ ನೀವು ಬಹಳ ತಡವಾಗಿ ಬಂದಿದ್ದೀರಾ ಎಂದು ಹೇಳಿ ಭಾಗ್ಯ ತಂದಿದ್ದ ಕ್ಯಾರಿಯರ್ ನಲ್ಲಿರುವ ಊಟವನ್ನು ಪರಿಶೀಲಿಸುತ್ತಾನೆ.ಬಳಿಕ ಖುಷಿ ಪಟ್ಟ ಕಸ್ಟಮರ್ ನನಗೆ ನಿಮ್ಮ ಊಟ ಬಹಳ ಹಿಡಿಸಿದೆ. ಒಬ್ಬಟ್ಟು ಬಹಳ ಚೆನ್ನಾಗಿದೆ ನನ್ನ ಮನೆಯಲ್ಲಿ ಏನೇ ಕಾರ್ಯಕ್ರಮವಾದರು ಖಂಡಿತವಾಗಿಯೂ ನಿಮಗೆ ನಾನು ಆರ್ಡರ್ ಕೊಡುತ್ತೇನೆ ಎಂದು ಹೇಳುತ್ತಾರೆ. ಈ ಮಾತನ್ನು ಕೇಳಿದ ಭಾಗ್ಯ ಗೆ ಬಹಳ ಖುಷಿಯಾಗುತ್ತದೆ. ಕಸ್ಟಮರ್ ಭಾಗ್ಯಗೆ ಹಣ ನೀಡಿ ಅಲ್ಲಿಂದ ಹೋಗುತ್ತಾನೆ.

ಅಸಮಾಧಾನ ಹೊರಹಾಕಿದ ಸುನಂದಾ

ಆಕೆಗೆ ತಾನು ಮಾಡುತ್ತಿರುವ ಕೆಲಸ ಮನಸ್ಸಿಗೆ ಬಹಳ ಖುಷಿ ನೀಡುತ್ತದೆ. ಹಾಗೆಯೇ ಬಹಳಷ್ಟು ಮುದವನ್ನು ನೀಡುತ್ತದೆ. ಭಾಗ್ಯ ತನ್ಮಯನ ಸ್ಕೂಲ್ ಫೀಸ್ ಹೇಗೆ ಕಟ್ಟುವುದು ಎಂದು ಆಲೋಚನೆ ಮಾಡುತ್ತಿರುತ್ತಾಳೆ. ಆದರೆ ಇದೀಗ ಬಹಳ ಸುಲಭವಾಗಿ ತನ್ನ ಮಗನ ಫೀಸ್ ಕಟ್ಟಬಹುದು ಎನ್ನುವ ಖುಷಿಯಲ್ಲಿರುತ್ತಾಳೆ. ಇನ್ನು ತಾಂಡವನಿಗೆ ಭಾಗ್ಯಳನ್ನು ಕಡೆಗಣಿಸುವುದು ಮಾತ್ರ ತಿಳಿದಿರುತ್ತದೆ. ಆದರೆ ಭಾಗ್ಯ ಏನು ಬೇಕಾದರೂ ಮಾಡಬಹುದು ಎನ್ನುವುದು ಆತನಿಗೆ ತಿಳಿದಿರುವುದಿಲ್ಲ. ತನ್ವಿಗೆ ಕರೆ ಮಾಡಿದ ತಾಂಡವ ನಾಳೆ ಗುಂಡಣ್ಣನ ಫೀಸ್ ಕಟ್ಟಕ್ಕಿದೆಯಲ್ವ ನಾನು ಫೀಸ್ ಕಟ್ಟುತ್ತೇನೆ ಏನು ತಲೆಕೆಡಿಸಿಕೊಳ್ಳುವುದು ಬೇಡ ಎನ್ನುತ್ತಾನೆ.

ಅಮ್ಮನ ಮಾತಿಗೆ ತೆಪ್ಪಗಾದ ತಾಂಡವ

ಅಪ್ಪ ನೀನು ಏನು ತಲೆ ಕೆಡಿಸಿಕೊಳ್ಳಬೇಡ ಅಮ್ಮ ಎಲ್ಲಾ ನೋಡಿಕೊಳ್ಳುತ್ತಾಳೆ ಎಂದಾಗ ತಾಂಡವ ಸಪ್ಪೆ ಮೋರೆ ಹಾಕುತ್ತಾನೆ. ತನ್ವಿ ಕೈಯಿಂದ ಮೊಬೈಲ್ ಕಿತ್ತುಕೊಂಡ ಕುಸುಮ ಬಹಳ ಜೋರಾಗಿಯೇ ತನ್ನ ಮಗನಿಗೆ ದಬಾಯಿಸುತ್ತಾಳೆ. ನೀನು ಏನು ತಲೆ ಕೆಡಿಸಿಕೊಳ್ಳುವ ಅಗತ್ಯ ಇಲ್ಲ.ನಿನ್ನ ಕೆಲಸ ನೀನು ನೋಡಿಕೋ ಎಂದು ಬಹಳ ಖಡಕ್ ಆಗಿ ಹೇಳುತ್ತಾಳೆ. ತನ್ನ ಮಕ್ಕಳ ಮೇಲೆ ಪ್ರೀತಿ ಇರುವವನು ಹೀಗೆ ಮಾಡುತ್ತಿರಲಿಲ್ಲ.ನಿನ್ನ ಪಾಲಿಗೆ ನಾವ್ಯಾರೂ ಇಲ್ಲ. ನೀನು ನಮ್ಮ ಬಗ್ಗೆ ವಿಚಾರಣೆ ಮಾಡುವುದು ಬಿಟ್ಟು ಬಿಡು. ನಿನ್ನ ಪಾಡಿಗೆ ನೀನು ಇರು ಎಂದು ಹೇಳುತ್ತಾಳೆ. ತಾಂಡವ ಗೆ ಮಾತೆ ಬಾರದ ಹಾಗೆ ಆಗುತ್ತದೆ.ಭಾಗ್ಯಾಳನ್ನು ಅದೆಷ್ಟೇ ತಡೆದರು ಯಾವುದಾದರೂ ಒಂದು ಮಾರ್ಗದಿಂದ ಭಾಗ್ಯ ಗೆಲ್ಲುತ್ತಿದ್ದಾಳಲ್ಲ ಎಂದು ಬಹಳ ಕೋಪಗೊಳ್ಳುತ್ತಾನೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X