Don't Miss!
- News ‘ಕಾಂಗ್ರೆಸ್ ಡೇಂಜರ್’ ಪೋಸ್ಟರ್ ಬಿಡುಗಡೆ ಮಾಡಿದ ಬಿಜೆಪಿ
- Sports T20 World Cup 2024: ವೀರೇಂದ್ರ ಸೆಹ್ವಾಗ್ ಆಯ್ಕೆಯ ಭಾರತ ತಂಡದಲ್ಲಿ ಪ್ರಮುಖ ಆಟಗಾರರಿಗೆ ಸ್ಥಾನವಿಲ್ಲ!
- Technology Realme: ರಿಯಲ್ಮಿ ನಾರ್ಜೋ 70 5G, ನಾರ್ಜೋ 70x 5G ಸ್ಮಾರ್ಟ್ಫೋನ್ ಲಾಂಚ್! ಸಖತ್ ಫೀಚರ್ಸ್... ಬೆಲೆ ಎಷ್ಟು?
- Automobiles ಮೇಡ್ ಇನ್ ಇಂಡಿಯಾ ಈ ಕಾರಿಗೆ ಜಪಾನ್ನಲ್ಲಿ ಭಾರೀ ಬೇಡಿಕೆ: ವಿಶ್ವಗುರು ಭಾರತಕ್ಕೆ ಎಲ್ಲವೂ ಸಾಧ್ಯ!
- Lifestyle ವಿಕಲಚೇತನರಿಗೆ ಸ್ಕೂಟಿ ಗಿಫ್ಟ್..! ಮನೆ ಕಟ್ಟಿಕೊಡುವ ಭರವಸೆ ನೀಡಿದ ನಟ ಲಾರೆನ್ಸ್..!
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗಂಡನ ಬಗ್ಗೆಯೇ ಹೊಟ್ಟೆ ಕಿಚ್ಚು ಪಡುತ್ತೀರೊ ಅಮ್ಮು!
ಗಟ್ಟಿ ಮೇಳ ಧಾರವಾಹಿಯಲ್ಲಿ ಇದೀಗ ವೇದಾಂತ ಮೇಲೆ ಅಮ್ಮು ಮುನಿಸಿಕೊಂಡಿದ್ದಾಳೆ. ಅಪ್ಪ ಅಮ್ಮನ ಬಳಿ ನನ್ನ ವಿರುದ್ಧ ಕಂಪ್ಲೇಂಟ್ ಮಾಡ್ತೀಯಾ . ಅಮ್ಮ ಅಪ್ಪನ ದೃಷ್ಟಿಯಲ್ಲಿ ನನ್ನ ವಿಲನ್ ಮಾಡಿ ನೀನು ಹೀರೋ ಆಗಬೇಕಾ? ನೀನು ಒಳ್ಳೆಯವನಾಗು ಪರವಾಗಿಲ್ಲ ಆದರೆ ನನ್ನ ಕೆಟ್ಟವಳನ್ನಾಗಿ ಮಾಡಬೇಡ ಗೊತ್ತಾಯ್ತಾ ಎಂದು ವೇದಾಂತನ ಬಳಿ ಕೇಳುತ್ತಾಳೆ ಅಮೂಲ್ಯ .
ಅದಕ್ಕೆ ವೇದಾಂತ ಏನು ಮಾತನಾಡುತ್ತಿದ್ದಿಯಾ ಅಮೂಲ್ಯ? ಎಂದು ಕೇಳುತ್ತಾನೆ ಅದಕ್ಕೆ ಅಮೂಲ್ಯ ಏನು ಮಾತಾಡಬೇಕೊ ಅದನ್ನೇ ಮಾತನಾಡುತ್ತಿದ್ದೇನೆ ಯಾಕೆ ನಿನ್ನ ಬಗ್ಗೆ ಮಾತನಾಡಬಾರದು ನಮಗೆ ಏನು ಹೇಳದೆ ನೀನು ಒಬ್ಬನೇ ಕೆಲಸ ಮಾಡಿ ದೊಡ್ಡ ಮದರ್ ತೆರೆಸಾ ಆಗ ಬೇಕು ಅಂದು ಕೊಂಡಿದ್ದಿಯಾ ಎಂದು ಪ್ರಶ್ನಿಸುತ್ತಾಳೆ.
ಬಳಿಕ, ಈ ಶತಮಾನಕ್ಕೆ ಮಾದರಿ ಆಗಬೇಕು ಅಂದುಕೊಂಡಿದ್ದಿಯಾ. ಅಳಿಯ ಅಂದರೆ ನಿನ್ನ ಥರ ಇರಬೇಕು ಎಂದು ಹೋಗಳಿಸಿಕೊಳ್ಳುವ ಆಸೆ ಅಲ್ವಾ ನಿಂದು ಎನ್ನುತ್ತಾಳೆ ಅದಕ್ಕೆ ವೇದಾಂತ ಹೇಳುತ್ತಾನೆ ಅದನ್ನು ಮಾಡಬೇಡ ಇದನ್ನು ಮಾಡಬೇಡ ಅಂದ್ರೆ ನಾನು ಇನ್ಯಾವುದನ್ನು ಮಾಡಬೇಕು, ಸರಿ ಬಿಡು ನಾನು ಯಾವುದನ್ನು ಮಾಡಲ್ಲ ಓಕೆ ನಾ ಎಂದು ಕೇಳುತ್ತಾನೆ.
ಆಗ ಅಮ್ಮು, ಅಮ್ಮಗೆ ಕಾಲ್ ಮಾಡಿದ್ದೆ ವೇದಾಂತ ಅವಳು ಏಷ್ಟು ಸಂತೋಷವಾಗಿ ಇದ್ದಾಳೆ ಗೊತ್ತಾ ಅವಳು ಇಷ್ಟೊಂದು ಸಂತೋಷ ಆಗಿರೋದು ನೋಡಿ ತುಂಬಾ ದಿನ ಆಗಿತ್ತು. ಅಕ್ಕನ ಮದುವೆಲಿ ನನ್ನ ಮದುವೇಲಿ ಅವಳು ಇಷ್ಟೊಂದು ಖುಷಿಯಾಗಿ ಇರಲಿಲ್ಲ. ಸ್ವಲ್ಪ ಭಯದಲ್ಲೇ ಇದ್ದಳು. ಆದರೆ ಅದಿತಿ ಮದುವೆ ವಿಚಾರದಲ್ಲಿ ಅವಳು ತುಂಬಾ ಸಂತೋಷವಾಗಿ ಇದ್ದಾಳೆ. ಅಮ್ಮ ಇಷ್ಟೊಂದು ಸಂತೋಷವಾಗಿ ಇರೋದಕ್ಕೆ ನೀನೇ ಕಾರಣ ವೇದಾಂತ ಎಂದು ಹೇಳುತ್ತಾಳೆ ಅಮ್ಮು.
ನೀನು ಇಲ್ಲ ಅಂದರೆ ಆಮ್ಮನ ಮುಖದಲ್ಲಿ ಸಂತೋಷವೇ ಕಾಣುತ್ತಿರಲಿಲ್ಲ ಎನ್ನುತ್ತಾಳೆ. ಅದಕ್ಕೆ ವೇದಾಂತ ಹೇಳುತ್ತಾನೆ ನೀನು ಏನು ಹೇಳುತ್ತಿದ್ದಿಯಾ. ಇದಕ್ಕೆಲ್ಲ ನಾನು ಕಾರಣ ಹೇಗೆ ಆಗುತ್ತಿನಿ ಹೇಳು ಎನ್ನುತ್ತಾನೆ. ಅದಕ್ಕೆ ಅಮ್ಮು ಹೇಳುತ್ತಾಳೆ ಮನೆ ಮಗನ ರೀತಿ ಮುಂದೆ ನಿಂತು ಎಲ್ಲಾ ಕೆಲಸನ ನಾನೇ ಮಾಡ್ತೀನಿ ಎಲ್ಲ ಜವಾಬ್ದಾರಿ ನಾನೇ ತಗೋತೀನಿ ಅದಿತಿ ಮದುವೆಗೆ ಏನು ಅಡ್ಡಿಯಾಗದ ಹಾಗೆ ನೋಡಿಕೊಳ್ಳುವೆ ಎಂದು ಮಾತು ಕೊಟ್ಟಿದ್ದಿಯಾ ಅಷ್ಟೇ ಅಲ್ಲ ವೇದಾಂತ ಅಮ್ಮ ನಿನ್ನ ಮೇಲೆ ತುಂಬಾ ನಂಬಿಕೆ ಇಟ್ಟುಕೊಂಡಿದ್ದಾರೆ. ಅವಳಿಗೆ ನೀನು ಇದ್ದೀಯಾ ಅನ್ನೋದು ಒಂದೇ ಧೈರ್ಯ ಎನ್ನುತ್ತಾಳೆ. ಅದಕ್ಕೆ ಅದಿತಿ ಮದುವೆಗೆ ನಾನೇನು ಟೆನ್ಶನ್ ಮಾಡಿಕೊಂಡಿಲ್ಲ ಆರಾಮಾಗಿ ಇದ್ದೀನಿ ಎಂದು ಹೇಳುತ್ತಾರೆ.
ಬಳಿಕ ಹೇಳುತ್ತಾಳೆ ಅದಿತಿ ಮದುವೆ ವಿಚಾರದಲ್ಲಿ ಇಷ್ಟೊಂದು ಕಾನ್ಫಿಡೆನ್ಸ್ ಆಗಿ ಇರುತ್ತಾಳೆ ಎಂದು ಕೊಂಡಿರಲಿಲ್ಲ. ಅಮ್ಮ ನಿನ್ನ ಹೊಗಳಬೇಕಾದರೆ ಖುಷಿ ಆಯ್ತು ಆದರೆ ಒಂದು ಕಡೆ ಹೊಟ್ಟೆ ಕಿಚ್ಚಯಿತು. ಅದಕ್ಕೆ ನಿನ್ನ ಮೇಲೆ ರೇಗಾಡಿದ್ದು ಎಂದು ಹೇಳುತ್ತಾಳೆ. ಸಾರಿ ವೇದಾಂತ ಎಂದು ಹೇಳುತ್ತಾಳೆ.