ಮುಂದೆ ನಿಂತು ಅದಿತಿ ಮದುವೆ ಮಾಡಲು ನಿರ್ಧರಿಸಿದ ವೇದಾಂತ್

By ಪೂರ್ವ

ಗಟ್ಟಿ ಮೇಳ ಧಾರವಾಹಿ ಚೆನ್ನಾಗಿ ಮೂಡಿ ಬರುತ್ತಿದ್ದು ನೋಡುಗರ ಮನ ಗೆದ್ದಿದೆ. ಇದೀಗ ಅದಿತಿ ಮದುವೆ ಸಲುವಾಗಿ ವೇದಾಂತನ ಮನೆಯವರು ಮಾತನಾಡುತ್ತಿದ್ದಾರೆ. ವಿಕ್ರಾಂತ್ ಕೇಳುತ್ತಾನೆ ಏನು ಅಗ್ರಜ ಎಲ್ಲರನ್ನೂ ಸೇರಿಸಿದ್ದಿಯಾ ಎಂದಾಗ ವೇದಾಂತನ ಬಾವ ಹೇಳುತ್ತಾನೆ ಮತ್ತೆ ಏನೋ ಟೆಂಡರ್ ಸಿಕ್ಕಿದೆ ಎಂದು ಅನ್ನಿಸುತ್ತದೆ ಎನ್ನುತ್ತಾನೆ.

ಅದಕ್ಕೆ ವೇದಾಂತ್ ಹೇಳುತ್ತಾನೆ ಅದು ಬಹಳ ಎಗ್ಸೈಟಿಂಗ್ ವಿಚಾರ ಅಲ್ಲ ಸಾರ್ಥಕ್. ಅದು ಯಾವಾಗ ಬೇಕು ಸಿಗಬಹುದು. ಆದರೆ ಇದು ತುಂಬಾನೇ ಇಂಪಾರ್ಟೆಂಟ್ ವಿಚಾರ. ಇದನ್ನು ನಾನು ಹೇಳಿದರೆ ನೀವೆಲ್ಲರೂ ಖುಷಿಯಾಗುತ್ತಿರಾ ಎನ್ನುತ್ತಾನೆ ಅದಕ್ಕೆ ವಿಕ್ರಾಂತ್ ಹೇಳುತ್ತಾನೆ ತೀರಾ ಎಳಿಬೇಡ ಅಗ್ರಜ ಕೇಳೋದಕ್ಕೆ ಒಳ್ಳೆದಾಗಲ್ಲ, ಬೇಗ ಎನು ಅಂತ ಹೇಳಿಬಿಡು ಅನ್ನುತ್ತಾನೆ.

ಅದಕ್ಕೆ ವೇದಾಂತ ಹೇಳುತ್ತಾನೆ 'ಅದಿತಿ ನಿಶ್ಚಿತಾರ್ಥ ಡೇಟ್ ಫಿಕ್ಸ್ ಆಯ್ತು' ಎಂದಾಗ ವೇದಾಂತ್ ತಂಗಿಗೆ ಶಾಕ್ ಆಗುತ್ತದೆ. ಅದಕ್ಕೆ ವಿಕ್ರಾಂತ್ ಹೇಳುತ್ತಾನೆ ಏನು ಹೆಳುತ್ತಿದ್ದಿಯಾ ಅಗ್ರಜ ಎಗೆಜ್ಮೆಂಟ್ ಡೇಟ್ ಫಿಕ್ಸ್ ಆಯ್ತಾ ಎನ್ನುತ್ತಾನೆ ಅದಕ್ಕೆ ಅಮೂಲ್ಯ ಹೇಳುತ್ತಾಳೆ ವೇದಾಂತ್ ನೀನು ತಮಾಷೆ ಮಾಡುತ್ತಿಲ್ಲ ಆಲ್ವಾ ಎನ್ನುತ್ತಾನೆ. ಅದಕ್ಕೆ ಸಾರ್ಥಕ್ ಹೇಳುತ್ತಾನೆ ಅಯ್ಯೋ ಅದರಲ್ಲಿ ತಮಾಷೆ ಮಾಡೋದು ಏನಿದೆ. ಹುಡುಗ ಫಿಕ್ಸ್ ಆಗಿದ್ದಾನೆ ಅಂದರೆ ನಿಶ್ಚಿತಾರ್ಥದ ಡೇಟ್ ಫಿಕ್ಸ್ ಆಗೆ ಆಗುತ್ತೆ ತಾನೇ ಎನ್ನುತ್ತಾನೆ

ವೇದಾಂತ ಮಾತಿಗೆ ಒಪ್ಪಿಗೆ ಸೂಚಿಸಿದ ಮನೆಯವರು

ವೇದಾಂತ ಮಾತಿಗೆ ಒಪ್ಪಿಗೆ ಸೂಚಿಸಿದ ಮನೆಯವರು

ಅದಕ್ಕೆ ವೇದಾಂತ ಹೇಳುತ್ತಾನೆ ಹೌದು ಸಾರ್ಥಕ್. ಬರಿ ನಿಶ್ಚಿತಾರ್ಥ ಅಲ್ಲ ನಾವೆಲ್ಲ ಮುಂದೆ ನಿಂತು ಮದುವೆ ಕೂಡ ಮಾಡಿಕೊಡಬೇಕು ಎನ್ನುತ್ತಾನೆ ಅದಕ್ಕೆ ಸಾರ್ಥಕ ಹೇಳುತ್ತಾನೆ ಡೊಂಟ್ ವರಿ ವೇದಾಂತ್, ಅದಿತಿನಾ ಮದುವೆ ಮಾಡಿ ಗಂಡನ ಮನೆಗೆ ಕರೆದುಕೊಂಡು ಹೋಗುವರೆಗು ನಾನು ನಿಮ್ಮ ಜೊತೆ ಇರುತ್ತೇನೆ ಎನ್ನುತ್ತಾನೆ.

ಗಂಡನ ಬಗ್ಗೆ ಹೆಮ್ಮೆ ಪಡುತ್ತಿರುವ ಅಮ್ಮು

ಗಂಡನ ಬಗ್ಗೆ ಹೆಮ್ಮೆ ಪಡುತ್ತಿರುವ ಅಮ್ಮು

ಅದಕ್ಕೆ ವಿಕ್ರಾಂತ್ ಹೇಳುತ್ತಾನೆ ಹೌದು ಅಗ್ರಜ ಅದಿತಿ ಮದುವೇನಾ ಹಬ್ಬದ ಥರ ಮಾಡಬೇಕು ಏನಂತಿಯಾ ಎನ್ನುತ್ತಾನೆ. ಅದಕ್ಕೆ ವೇದಾಂತ ಹೇಳುತ್ತಾನೆ ಹಾ ವಿಕ್ರಾಂತ್ ಈ ಉತ್ಸಾಹ ಮದುವೆ ಮುಗಿಯೋವರೆಗು ಇರಬೇಕು. ನೀವೆಲ್ಲರೂ ಮದುವೆನಾ ಮುಂದೆ ನಿಂತು ಮಾಡುತ್ತೇವೆ ಅಂತ ಮಾತುಕೊಡಿ ಎನ್ನುತ್ತಾನೆ. ಅದರಲ್ಲಿ ಸ್ವಲ್ಪ ಹೆಚ್ಚು ಕಮ್ಮಿ ಯಾದರೂ ತುಂಬಾ ಬೇಸರ ಮಾಡಿಕೊಳ್ಳುತ್ತಾರೆ. ನನ್ನ ಮೇಲಿರೋ ನಂಬಿಕೆ ಹೋಗುತ್ತೆ. ಅದಿಕ್ಕೆ ಪ್ರತಿಯೊಂದು ವಿಚಾರದಲ್ಲೂ ನನಗೆ ನಿಮ್ಮ ಸಪೋರ್ಟ್ ಬೇಕು. ನನ್ನ ಜೊತೆ ನಿಂತುಕೊಳ್ಳುತ್ತಿರಾ ತಾನೇ ಎನುತ್ತಾನೆ. ಅದಕ್ಕೆ ಸಾರ್ಥಕ ಹೇಳುತ್ತಾನೆ ನಮ್ಮ ಮನೆಯ ಮದುವೆಗೆ ನಾವು ಬೆಂಬಲ ನೀಡಿಲ್ಲ, ಕೆಲಸ ಮಾಡಿಲ್ಲಾ ಅಂದ್ರೆ ಯಾರು ಮಾಡುತ್ತಾರೆ. ನೀನೇನು ತಲೆ ಕೆಡಿಸಕೊಳ್ಳಬೇಡ ನಾನು ನೋಡಿಕೊಳ್ಳುತ್ತೇನೆ ಎನ್ನುತ್ತಾನೆ.

ಎಲ್ಲರಿಂದಲೂ ಬೆಂಬಲ

ಎಲ್ಲರಿಂದಲೂ ಬೆಂಬಲ

ಬಳಿಕ ವಿಕ್ರಾಂತ್ ಹೇಳುತ್ತಾನೆ ಡೊಂಟ್ ವರಿ ಅಗ್ರಜ ನಾವು ನಿಮ್ಮ ಜೊತೆ ನಿಂತುಕೊಳ್ಳುತ್ವೀವಿ ಅಂದಾಗ ವೇದಾಂತ್ ಥಾಂಕ್ಸ್ ವಿಕ್ರಾಂತ್ ಎನ್ನುತ್ತಾನೆ. ನೀವೆಲ್ಲರೂ ನನ್ನ ಜೊತೆ ನಿಂಟುಕೊಳ್ಳುತ್ತಿರಾ ಅಂತ ನಾನು ಪರಿಮಳ ಅತ್ತೆಗೆ ಮತುಕೊಟ್ಟು ಬಂದಿದ್ದೀನಿ. ಎನ್ನುತ್ತಾನೆ. ಆಗ ಸುಹಾಸಿನಿ ಹೇಳುತ್ತಾಳೆ. ಒಳ್ಳೆ ಕೆಲಸ ಮಾಡುತ್ತಿದ್ದೀಯಾ ವೇದಾಂತ. ಅದಿತಿ ಮದುವೆಗೆ ನನ್ನ ಸಪೋರ್ಟ್ ಇದೆ. ನಾನು ನಿನ್ನ ಜೊತೆ ನಿಂತೂಕೊಳ್ಳುತ್ತೇನೆ ಏನುತ್ತಾಳೆ.

ಮದುವೆ ಖರ್ಚು ನೋಡಿಕೊಳ್ಳುತ್ತೇನೆ ಎಂದ ವೇದಾಂತ್

ಮದುವೆ ಖರ್ಚು ನೋಡಿಕೊಳ್ಳುತ್ತೇನೆ ಎಂದ ವೇದಾಂತ್

ಆಗ ವೇದಾಂತ ಹೇಳುತ್ತಾನೆ ಅಮ್ಮ ನಿಮ್ಮ ಜೊತೆ ಇನ್ನೊಂದು ಮುಖ್ಯ ವಿಚಾರ ಹೇಳಬೇಕು ಅದಿತಿ ಮದುವೆ ಆಗೋ ಖರ್ಚನ್ನು ನಾನೇ ನೋಡಿಕೊಳ್ಳಬೇಕು ಅಂದುಕೊಂಡಿದ್ದೇನೆ. ಅವರು ಅಮೂಲ್ಯ, ಆರತಿ ಮದುವೆ ಮಾಡಿ ಸಾಕಷ್ಟು ಖರ್ಚು ಮಾಡಿದ್ದಾರೆ. ಅವರ ಆರ್ಥಿಕ ಸ್ಥಿತಿ ಚೆನ್ನಾಗಿಲ್ಲ. ಮಂಜು ಅಪ್ಪ ಸೆಕ್ಯೂರಿಟಿ ಕೆಲಸ ಮಾಡಲು ಹಿಂಜರಿಕೆ ಮಾಡಿಲ್ಲ. ಹೀಗಿರುವಾಗ ಇನ್ನಷ್ಟು ಹೊರೆ ಹೋರಿಸೋದೂ ನನಗೆ ಇಷ್ಟ ಇಲ್ಲ ಇನ್ನೂ ಎನ್ನುತ್ತಾನೆ. ಮುಂದೇನಾಗುತ್ತದೆ ಕಾದು ನೋಡೋಣ.

English summary
Kannada serial Gattimela Written updated on 3th August. Know more about the episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X