ವೇದಾಂತನ ಕೈಗೆ ಧ್ರುವನ ಅಪಹರಿಸಿದವರು ಸಿಕ್ಕಿ ಬೀಳುತ್ತಾರ?
ಗಟ್ಟಿ ಮೇಳ ಧಾರವಾಹಿಯಲ್ಲಿ ತಿರುವೊಂದು ಎದುರಾಗಿದೆ. ಇದೀಗ ಧ್ರುವನನ್ನೂ ಅಪಹರಿಸಿದವರು ಯಾರು ಎಂಬ ಗುಮಾನಿ ಎಲ್ಲರನ್ನೂ ಕಾಡುತ್ತಿದೆ. ವೇದಾಂತನಿಗೆ ಈ ಬಾರಿಯಾದರೂ ಕಿರಾತಕ ಸಿಗುತ್ತಾನ ಎಂಬುವುದು ಕಥೆಯ ಟ್ವಿಸ್ಟ್.
ವೇದಾಂತ, ವಿಕ್ರಾಂತ್ ಎಲ್ಲರೂ ಮೀಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ ಆದರೆ ಕಾಂತ ಮಾತ್ರ ಆಗಾಗ ಟೈಮ್ ನೋಡುತ್ತಾ ವೇದಾಂತನ ತಂಗಿ ಆದ್ಯ ಬಳಿ ವೇದಾಂತನ ಬಳಿ ಹೇಳಿ ಬಿಡಿ ಎಂದು ಕಣ್ಣು ಸನ್ನೆಯಲ್ಲಿ ಹೇಳುತ್ತಿದ್ದಾನೆ. ಇದನ್ನು ಗಮನಿಸಿದ ವಿಕ್ರಾಂತ್ ಕೇಳುತ್ತಾನೆ ಏನ್ರೀ ಕಾಂತ ದಿನ ಏಳು ಗಂಟೆಗೆ ಹೋಗೋರು ಇವತ್ತು ಇಲ್ಲಿಯೇ ಇದ್ದೀರಾ ಎಂದು ಕೇಳುತ್ತಾನೆ.
ಆಗ ಕಾಂತ ನಗುತ್ತಾ ಹೇಳುತ್ತಾನೆ ಅದು ನಾನು ಹೋಗಬೇಕು ಅಂತಾನೆ ಇದ್ದೆ ಆದರೆ ಗಾಡಿ ಟಯರ್ ಪಂಕ್ಚರ್ ಆಯ್ತು ಅದಿಕ್ಕೆ ಇಲ್ಲಿಯೇ ಉಳಿದು ಕೊಳ್ಳೋಣ ಅಂತ ಎಂದು ಹೇಳುತ್ತಾನೆ. ಅದಕ್ಕೆ ಸಾರ್ಥಕ್ ಹೇಳುತ್ತಾನೆ 'ರಿ ಕಾಂತ ಮೊನ್ನೆ ಪಕ್ಚರ್ ಆಗಿತ್ತು ಎಂದು ಆಫೀಸಿಗೆ ಲೇಟ್ ಬಂದಿದ್ದೀರಿ ಅಲ್ವಾ' ಎನ್ನುತ್ತಾನೆ.

ಮತ್ತೆ ಪಂಕ್ಚರ್ ಕತೆ ಹೇಳಿದ ಕಾಂತ
ಅದಕ್ಕೆ ವೇದಾಂತ ನಗುತ್ತಾನೆ. ಕಾಂತ ತೊದಲುತ್ತಾ 'ಸಾರ್ಥಕ್ ಸರ್ ಮೊನ್ನೆ ಪಕ್ಚರ್ ಆಗಿದ್ದು ಪ್ರಂಟ್ ವೀಲ್.. ಇವತ್ತು ಪಂಕ್ಚರ್ ಆಗಿದ್ದು ಬ್ಯಾಕ್ ವೀಲ್ ಎನ್ನುತ್ತಾನೆ ಅದಕ್ಕೆ ವೇದಾಂತ ನಾಳೆ ಯಾವ ವಿಲ್ ಪಂಚರ್ ಆಗುತ್ತೆ ಎನ್ನುತ್ತಾನೆ ಅದಕ್ಕೆ ಕಾಂತ ಹೇಳುತ್ತಾನೆ ಇಲ್ಲ ಬಾಸ್ ನಿಜವಾಗಲೂ ಪಂಕ್ಚರ್ ಆಗಿದೆ. ನಿಮ್ಮ ಮೇಲೆ ಆಣೆ ಎಂದು ಹೇಳುತ್ತಾನೆ.

ಡ್ರಾಪ್ ಕೊಡುತ್ತಿದ್ದೆ ಎಂದು ವಿಕ್ರಾಂತ್
ಆಗ ವಿಕ್ರಾಂತ್ ಹೇಳುತ್ತಾನೆ ಅದನ್ನ ಆಗಲೇ ಹೇಳೊದಲ್ವಾ ಡ್ರಾಪ್ ಕೊಡಕ್ ಹೇಳುತ್ತಿದ್ದೆ. ಡ್ರೈವರ್ ಬೇರೆ ಇಲ್ಲ. ಮನೆಗೆ ಹೋಗಿದ್ದಾನೆ ಎನ್ನಿಸುತ್ತದೆ ಒಂದು ಕೆಲಸ ಮಾಡಿ ಮನೆಗೆ ಕ್ಯಾಬ್ ಬುಕ್ ಮಾಡಿ ಎನುತ್ತಾನೆ. ನನ್ನ ಡ್ರೈವರ್ ಹೋಗಿಲ್ಲ ಅನ್ನಿಸತ್ತೆ ಅವನಿಗೆ ಹೇಳೋಣ ಎನ್ನುತ್ತಾನೆ. ಅದಕ್ಕೆ ಆದ್ಯ ಹೇಳುತ್ತಾಳೆ ಅಣ್ಣ ಅವರು ಇಲ್ಲಿ ಇರುತ್ತಾನೆ ಎಂದನಲ್ಲ. ಇರಲಿ ಬಿಡು ಟೈಮ್ ಪಾಸಾಗುತ್ತೆ ಎನ್ನುತ್ತಾರೆ.

''ಕಾಂತನ ಕಾಮಿಡಿ ಪೀಸ್ ಎಂದುಕೊಂಡೆಯಾ''
ಆಗ ವಿಕ್ರಾಂತ್, 'ಏನೇ ಚಾಮುಂಡಿ ಕಂತಾನ ಕಾಮಿಡಿ ಪೀಸ್ ಅಂದುಕೊಂಡಿಯಾ..' ಎಂದು ಜೋರಾಗಿ ಹೇಳುತ್ತಾನೆ ಅದಕ್ಕೆ ಆದ್ಯ ಜೋರಾಗಿ ನಗಾಡುತ್ತನೆ. ಕಂತಾನಿಗೆ ಒಂದು ವಾರ್ನಿಂಗ್ ಕೊಡುತ್ತಾನೆ ವೇದಾಂತ ನೈಟ್ ಎಲ್ಲಾ ಇಲ್ಲಿಯೇ ಇರುತ್ತಿರ.... ಬೆಳಗ್ಗೆ ಬೇಗ ಆಫೀಸಿಗೆ ಹೋಗಬೇಕು ಎಂದು ಹೇಳುತ್ತಾರೆ. ಕಾಂತ ಹೇಳುತ್ತಾನೆ ಸರಿ ಸರ್ ಮಲಗಿಕೊಳ್ಳೋಣ ಎಂದು ಕಾಂತ ಹೇಳುತ್ತಾನೆ. ಆಗ ವೇದಾಂತ ನೀವು ಮಲಗಿ ಸ್ವಲ್ಪ ಕೆಲಸ ಇದೆ ಮುಗಿಸಿ ಬರುತ್ತೇನೆ ಎಂದು ಹೇಳುತ್ತಾನೆ. ಮುಂದೇನಾಗುತ್ತದೆ ಕಾದು ನೋಡಬೇಕಿದೆ.

ಕುತೂಹಲ ಕೆರಳಿಸಿದ ಮದುವೆ
ಗಟ್ಟಿಮೇಳ ಧಾರಾವಾಹಿ ಇದೀಗ ಸಾಕಷ್ಟು ಕುತೂಹಲ ಕೆರಳಿಸಿದೆ. ವೇದಾಂತನ ಪತ್ನಿಯ ತಂಗಿಯ ಮದುವೆ ಕುತೂಹಲಕ್ಕೆ ಕಾರಣವಾಗಿದೆ. ಆಕೆ ತನ್ನ ಪ್ರೀತಿಯನ್ನು ವೇದಾಂತನ ಬಳಿ ಹೇಳಿಕೊಂಡು ಮದುವೆ ತಪ್ಪಿಸಿಕೊಳ್ಳುತ್ತಾಳ ಅಥವಾ ವೇದಾಂತ ಕೊಟ್ಟ ಮಾತಿನಂತೆ ಆಕೆಯ ಮದುವೆ ಮಾಡಿ ಬಿಡುತ್ತಾನೆ ಕಾದು ನೋಡಬೇಕಿದೆ.


Click it and Unblock the Notifications